Quantcast
Channel: VijayKarnataka
Viewing all articles
Browse latest Browse all 6795

ದಾರಿದೀಪ: ಕೊರತೆ ಸರಿಪಡಿಸಿದರೆ ನೆಮ್ಮದಿ

$
0
0

ಅಜ್ಜಿಯ ಅಸ್ತಿಗೆ ಸಂಬಂಧಪಡದ ಮಹಿಳೆಯಿಂದ ದಾವೆ ಸಮಸ್ಯೆ ಎದುರಾಗಿದೆ. ಇದನ್ನು ಪರಿಹರಿಸುವುದು ಹೇಗೆ?

-ವಿಜಯಕುಮಾರ್‌, ವಸಂತನಗರ.

ಸಂಪತ್ತು-ವಿಪತ್ತು ಸಮಾನಾರ್ಥಕ ವಿಷಯಗಳು. ಹೀಗಾಗಿಯೇ ಸಂಪತ್ತಿನಿಂದ ಜಗದಲ್ಲಿ ಇಷ್ಟೊಂದು ಪರಿಪಾಟಲುಗಳು! ಸಂಬಂಧ ಪಡದ ಮಹಿಳೆ ಎಂದಿರಿ. ಆಕೆ ನಿಮಗೆ ಸಂಬಂಧ ಪಡದೇ ಇರಬಹುದು. ಆದರೆ, ತಾತ-ಅಜ್ಜಿಯ ಸಂಬಂಧ ಏನು ಇತ್ತೋ!? ಅವರೀಗ ಬದುಕಿಲ್ಲ. ಆಕೆಯನ್ನು ಹಿರಿ-ಕಿರಿಯರೆಲ್ಲ ಕಂಡು ನ್ಯಾಯ ವಿಚಾರಿಸಿ, ತಿಳಿ ಹೇಳಿ, ಕಾನೂನು ಸಹಾಯ ಪಡೆಯಿರಿ. ಜೊತೆಗೆ ಕುಟುಂಬದ ವತಿಯಿಂದ ನಾಗಪ್ರತಿಷ್ಠೆ, ಕುಲದೇವತಾ ಪೂಜೆ ಹಾಗೂ ಪಿತೃಶಾಂತಿ ಕರ್ಮಗಳ ಮಾಡಿಸಿ.

ಸಂಸಾರದಲ್ಲಿ ಕಿರಿಕಿರಿ ಹೆಚ್ಚಿದೆ. ಉದ್ಯೋಗ ಬದಲಾವಣೆ ಯತ್ನ ಮಾಡುತ್ತಿದ್ದೇನೆ. ಸರಿಯಾಗುವುದೇ?

-ಸುಜಾತಾ, ಕಾರವಾರ

ಸಂಸಾರದಲ್ಲಿ 'ದಾಂಪತ್ಯ'ವು ಪರಸ್ಪರ ನಂಬುಗೆ, ಸಹನೆ, ಪ್ರೇಮದ ಮೇಲೆ ನಿಂತಿವೆ. ಇವುಗಳಲ್ಲಿ ನಿಮ್ಮಲ್ಲಿ ಎಲ್ಲಿ ಕೊರತೆ ಇದೆ ಎಂದು ಈರ್ವರೂ ಕಂಡುಕೊಳ್ಳಿ. ಕಿರಿಕಿರಿ ತಾನಾಗಿ ಮಾಯವಾಗುತ್ತದೆ.

ಇರುವ ಉಪನ್ಯಾಸಕ ವೃತ್ತಿ ಚೆನ್ನಾಗಿಯೇ ಇದೆ. ಅದರಲ್ಲೇ ಹೆಚ್ಚಿನ ಸಾಧನೆಗೆ ಒತ್ತು ಕೊಡಿ. ಇರುವುದರಲ್ಲಿ ಒನಪು ಮೂಡಿಸಲಾಗದೇ ಸರ್ಕಾರಿ ಕೆಲಸದಲ್ಲಿ ಸರಿಯಾಗುವುದು ಎಂದು ನಂಬಿದರೆ ಅದು ಮರೀಚಿಕೆಯಷ್ಟೆ.

ಚೆನ್ನಾಗಿ ಓದಿಯೂ ಸರ್ವೇ ಸಾಧಾರಣ ವೃತ್ತಿಯಲ್ಲಿದ್ದೇನೆ. ನನ್ನದೇ ಓದು ಹೊಂದಿರುವ ಇತರರು ಅಥವಾ ನನ್ನಿಂದ ಕಡಿಮೆ ಓದಿರುವವರು ಚೆನ್ನಾಗಿಯೇ ಇದ್ದಾರೆ. ಈ ತಾರತಮ್ಯ ಏಕೆ?

-ವೆಂಕಟೇಶ್‌ ಹಾಲದ, ದಾವಣಗೆರೆ

'ಮರದಿಂದ ಮರದೆತ್ತರವಯ್ಯ, ಬಳ್ಳಿ ಬಳ್ಳಿಯಲಿ ಹೂಗಂಧ ಭಿನ್ನವಯ್ಯ' ಎಂಬ ಅಗಣಿತ ತಾರತಮ್ಯದಲ್ಲೇ ಸೃಷ್ಟಿಯ ಗುಟ್ಟು ಹುದುಗಿದೆ. ಯಶಸ್ಸು, ಮೇಲ್ಮೆ ಗಳಿಗೆಯ ಲಾಲಸೆ ಮನುಷ್ಯರನ್ನು ಕಿಚ್ಚಿಗೆ ಗುರಿ ಮಾಡುತ್ತದೆ. ಸದ್ಗುರು ಆಶ್ರಯ, ಚಿಂತನೆಗಳಿಂದ ಆ ಕಿಚ್ಚನ್ನು ನಂದಿಸಬಹುದೇ ಹೊರತು, ಬೇರೆ ದಾರಿಯಿಲ್ಲ. ಮಿಕ್ಕಂತೆ ನಿಮ್ಮ ಜಾತಕ ಉತ್ತಮವಾಗಿದೆ.

ಸ್ನಾತಕೋತ್ತರ ಪದವಿ ಮುಗಿಸಿ ಕೆಲಸ ಸಿಗದೇ ಕಂಗೆಟ್ಟಿರುವೆ. ಪರಿಹಾರವೇನು?

-ಸುರೇಶ್‌ ಎಲ್‌ ಎಂ, ಲಕ್ಕೂರು

ಬರಿದೇ ಪದವಿಗಳಿಂದ ಕೆಲಸ ದೊರೆಯುವುದೆಂಬುದು ಹಳೆಯ ಕಾಲದ ವಿಷಯ. ಹೊಸ ತಲೆಮಾರಿನ ಆಯ್ಕೆ, ಸವಾಲುಗಳು, ಸ್ಮಾರ್ಟ್‌ನೆಸ್‌ ಮತ್ತು ಅಪ್‌ಡೇಟ್‌ ಆಗುವಂಥ ಜನರಿಗೇ ಮೀಸಲಾಗಿವೆ. ನೀವಿರುವ ಈಗಿನ ಪರಿಸರದಿಂದ ಇವನ್ನು ಗಳಿಸಲು ಕಷ್ಟವೇ ಸರಿ.

ಈ ಹಿಂದೆ ನೀವು ಹೇಳಿದಂತೆ ಎರಡನೇ ಮಗನಿಗೆ ಮದುವೆ ಆಯ್ತು. ಮೊದಲನೆಯ ಮಗನಿಗೆ ಇನ್ನೂ ಆಗಿಲ್ಲ. ಪುನಃ ನಿಮ್ಮ ಉತ್ತರವೇ ಆಶಾಕಿರಣ.

-ಜಯಂತಿ ಸುರೇರ್ಶ, ಬೆಂಗಳೂರು

ಅವರವರ ಯೋಗ ಅವರವರ ಪಾಲಿಗೆ ಬಂದಾಗ ತಡ ಮಾಡದೇ ಮಾಡಿ ಬಿಡಬೇಕು. ಹೆಣ್ಣಾಗಲಿ, ಗಂಡಾಗಲಿ ಮನೆಯಲ್ಲಿ ಬಹಳ ವರ್ಷ ನೀ ಮುಂದೆ, ನಾ ಮುಂದೆ ಎಂದು ಮದುವೆಗೆ ತಡಕಾಡಬಾರದು. ಈತನಿಗೆ ಸದ್ಯ ವೃಷಭದ ಶನಿದಶೆ ನಡೆಯುತ್ತಿದೆ. ಈ ಸಮಯ ಶುಭಕಾರ‍್ಯಕ್ಕೆ ಸರಿಯಿಲ್ಲ. ಮುಂದಿನ ವರ್ಷ ಮಧ್ಯದಲ್ಲಿ ಕೂಡಿ ಬರುವುದು. ಶ್ರೀ ವೆಂಕಟೇಶನ ಸೇವೆಗಳಿಂದ ಒಳಿತು.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>