Quantcast
Channel: VijayKarnataka
Viewing all articles
Browse latest Browse all 6795

ಸಿಂಹಾದ್ರಿ ಜಾಡಿನಲ್ಲಿ ಸುದೀಪ್‌

$
0
0

- ಶರಣು ಹುಲ್ಲೂರು

ಹದಿನಾಲ್ಕು ವರ್ಷಗಳ ಹಿಂದೆ ತೆರೆಕಂಡ ಡಾ. ವಿಷ್ಣುವರ್ಧನ್‌ ಅಭಿನಯ 'ಸಿಂಹಾದ್ರಿ ಸಿಂಹ' ಈಗ ಎರಡನೇ ಸರಣಿಯಲ್ಲಿ ಮೂಡಿಬರಲಿದೆ. ಈ ಚಿತ್ರದಲ್ಲಿ ನಾಯಕರಾಗಿ ನಟಿಸಲು ಸುದೀಪ್‌ ಅವರನ್ನು ಕೇಳಲಾಗಿದೆ.

ಸಾಹಸ ಸಿಂಹ ವಿಷ್ಣುವರ್ಧನ್‌ ನಟನೆಯ ಬ್ಲಾಕ್‌ ಬಸ್ಟರ್‌ ಚಿತ್ರ 'ಸಿಂಹಾದ್ರಿ ಸಿಂಹ' ಈಗ ಎರಡನೇ ಸರಣಿಯಲ್ಲಿ ಮೂಡಿ ಬರಲಿದೆ. ಹದಿನಾಲ್ಕು ವರ್ಷಗಳ ಹಿಂದೆ ತೆರೆಕಂಡ ಈ ಸಿನಿಮಾವನ್ನು ಎಸ್‌.ನಾರಾಯಣ್‌ ನಿರ್ದೇಶನ ಮಾಡಿದ್ದರು. ಪ್ರಭಾವತಿ ವಿಜಯಕುಮಾರ್‌ ನಿರ್ಮಾಣದಲ್ಲಿ ಚಿತ್ರ ತಯಾರಾಗಿತ್ತು. ಈಗ ಅದೇ ತಂಡವೇ ಪಾರ್ಟ್‌-2ಗೆ ಸಿದ್ಧತೆ ನಡೆಸಿದೆ. ನಾಯಕನ ಪಾತ್ರಕ್ಕಾಗಿ ಸುದೀಪ್‌ ಅವರನ್ನು ಕೇಳಲಾಗಿದೆ.

ಈಗಾಗಲೇ ಸ್ಕ್ರಿಪ್ಟ್‌ ಕೆಲಸ ಬಹುತೇಕ ಮುಗಿದಿದ್ದು, ಇನ್ನೊಂದು ವಾರದಲ್ಲಿ ಸ್ಪಷ್ಟ ಮಾಹಿತಿ ಹೊರಬೀಳಲಿದೆಯಂತೆ. ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ 'ಸಿಂಹಾದ್ರಿ ಸಿಂಹ-2' ಎಂದು ಶೀರ್ಷಿಕೆಯನ್ನು ನೋಂದಾಯಿಸಿದ್ದು, ಸುದೀಪ್‌ ಜತೆ ಒಂದು ಹಂತದ ಮಾತುಕತೆಯನ್ನೂ ಮುಗಿಸಿದ್ದಾರೆ.

'ನಿರ್ದೇಶಕ ಎಸ್‌.ನಾರಾಯಣ್‌ ತುಂಬಾ ಚೆನ್ನಾಗಿ ಕತೆ ಬರೆದಿದ್ದಾರೆ. ಸುದೀಪ್‌ ಅವರೇ ನಾಯಕರಾಗಬೇಕು ಅನ್ನುವುದು ನಮ್ಮ ಆಸೆ ಆಗಿತ್ತು. ಹೀಗಾಗಿ ಚಿತ್ರದ ಕುರಿತು ಅವರ ಜತೆ ಮಾತನಾಡುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ ಮತ್ತೆ ನಾವು ಸುದೀಪ್‌ ಅವರನ್ನು ಭೇಟಿ ಮಾಡುತ್ತಿದ್ದು, ಆನಂತರವೇ ಎಲ್ಲಾ ಮಾಹಿತಿಯನ್ನು ಕೊಡುತ್ತೇವೆ' ಅಂತಾರೆ ನಿರ್ಮಾಪಕರು.

ಸಿಂಹಾದ್ರಿ ಸಿಂಹ ಚಿತ್ರವು 2002ರಲ್ಲಿ ತಯಾರಾಗಿದ್ದರೂ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ವಿಷ್ಣುವರ್ಧನ್‌ ಪಾತ್ರ ಕೂಡ ವಿಭಿನ್ನವಾಗಿತ್ತು. ದೇವ್‌ ಸಂಗೀತ ನಿರ್ದೇಶನದ ಬಹುತೇಕ ಹಾಡುಗಳು ಹಿಟ್‌ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದ್ದವು. ಹೀಗಾಗಿ ಚಿತ್ರವು 25ವಾರಗಳ ಪ್ರದರ್ಶನ ಕಂಡಿತ್ತು. ಬಾಕ್ಸ್‌ ಆಫೀಸ್‌ನಲ್ಲೂ ಸಖತ್‌ ಸದ್ದು ಮಾಡಿತ್ತು. ಈಗ ಅದೇ ಯಶಸ್ಸನ್ನು ಕಾಣುವ ಕನಸು ಕಂಡಿದೆ ನಿರ್ದೇಶಕ ಎಸ್‌.ನಾರಾಯಣ್‌ ತಂಡ. ಹಾಗಾಗಿಯೇ ಮತ್ತೊಂದು ಅಪರೂಪದ ಕತೆಯನ್ನು ಹೆಣೆದಿದ್ದಾರೆ.

'ಕತೆಯ ಬಗ್ಗೆ ಈಗಲೇ ಏನೂ ಹೇಳಲಾರೆ. ಸುದೀಪ್‌ ಅವರು ಒಪ್ಪುತ್ತಿದ್ದಂತೆಯೇ ಒಂದು ಪ್ರೆಸ್‌ಮೀಟ್‌ ಮಾಡಿ ಎಲ್ಲ ವಿಷಯ ಹಂಚಿಕೊಳ್ಳುತ್ತೇವೆ. ಇದು ಮತ್ತೊಂದು ಹಿಟ್‌ ಚಿತ್ರ ಆಗುವಲ್ಲಿ ಅನುಮಾನ ಬೇಡ. ವಿಷ್ಣುವರ್ಧನ್‌ ಅವರ ಸಿನಿಮಾದ ಹೆಸರಿನಲ್ಲಿ ಚಿತ್ರ ಮಾಡುತ್ತಿದ್ದೇವೆ ಅಂದಾಗ ನಮಗೂ ಜವಾಬ್ದಾರಿ ಇದ್ದೇ ಇರುತ್ತದೆ. ವಿಷ್ಣುವರ್ಧನ್‌ ಅವರಿಗೆ ಗೌರವ ತರುವ ಕೆಲಸ ನಮ್ಮ ತಂಡದಿಂದ ಆಗುತ್ತದೆ' ಎನ್ನುವುದು ನಿರ್ಮಾಪಕರ ಮಾತು.

ವಿಷ್ಣುವರ್ಧನ್‌ ನಟನೆಯ ಅನೇಕ ಚಿತ್ರಗಳ ಟೈಟಲ್‌ಗಳು ಈಗ ಮರುಬಳಕೆ ಆಗುತ್ತಿವೆ. ಅಲ್ಲದೇ, ವಿಷ್ಣುವರ್ಧನ್‌ ಹೆಸರಿನಲ್ಲಿ ನಟ ಸುದೀಪ್‌ ಸಿನಿಮಾ ಕೂಡ ಮಾಡಿದ್ದಾರೆ. ಸದ್ಯ ಇವರ ಸಿನಿಮಾಗಳ ಸರಣಿ 'ಸಿಂಹಾದ್ರಿ ಸಿಂಹ' ಚಿತ್ರದಿಂದ ಶುರುವಾಗಿದೆ. ಇದು ನಿರಂತರ ನಡೆಯಲಿದೆ ಅನ್ನುವುದು ಚಿತ್ರತಂಡದ ಮಾತು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>