Quantcast
Channel: VijayKarnataka
Viewing all articles
Browse latest Browse all 6795

ಕಾವೇರಿ: ಕರುಣಾ ಬೇಡಿಕೆಗೆ ಎಐಎಡಿಎಂಕೆ ತರಾಟೆ

$
0
0

*ಜಯಾ ಗೆಲವು ಅರಗಿಸಿಕೊಳ್ಳಲಾಗುತ್ತಿಲ್ಲ ಎಂಬ ಆರೋಪ

ಚೆನ್ನೈ: ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಚರ್ಚಿಸಲು ತಮಿಳು ನಾಡು ವಿಧಾನ ಸಭೆಯ ವಿಶೇಷ ಅಧಿವೇಶನ ಕರೆಯಬೇಕು ಎಂಬ ಡಿಎಂಕೆ ಧುರೀಣ ಎಂ.ಕರುಣಾನಿಧಿ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿರುವ ಆಡಳಿತಾರೂಢ ಎಐಎಡಿಎಂಕೆ, ಈ ಅಂತಾರಾಜ್ಯ ವಿವಾದದಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರು ನಿರಂತರ ಸಾಧಿಸುತ್ತಿರುವ ಯಶಸ್ಸನ್ನು ಸಹಿಸಿಕೊಳ್ಳಲು ಕರುಣಾನಿಧಿ ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದೆ.

''ಇಂತಹ ಬೇಡಿಕೆಗಳನ್ನು ಮಾಡುವ ಮೂಲಕ ಕರುಣಾನಿಧಿ ಅವರು ಈ ಹಿಂದೆ ಕಾವೇರಿ ವಿಷಯದಲ್ಲಿ ಮಾಡಿದ ನಂಬಿಕೆದ್ರೋಹಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ,'' ಎಂದು ಎಐಎಡಿಎಂಕೆ ಮುಖವಾಣಿ 'ನಮಧು ಎಂಜಿಆರ್‌'ನಲ್ಲಿ ಬರೆದಿರುವ ಲೇಖನದಲ್ಲಿ ಟೀಕಿಸಲಾಗಿದೆ.

''ಕಾವೇರಿ ವಿವಾದದಲ್ಲಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಳ್ಳುವ ಮೂಲಕ ನಮ್ಮ ಅಮ್ಮ (ಜಯಲಲಿತಾ) ಅವರಿಗೆ ಪದೇ ಪದೆ ಲಭಿಸುತ್ತಿರುವ ಗೆಲುವಿನಿಂದ ಕರ್ನಾಟಕಕ್ಕೆ ಮುಜುಗರವಾಗಿದೆ. ಅದೇ ರೀತಿ ಕರುಣಾನಿಧಿ ಅವರಿಗೂ ಮುಜುಗರವಾಗಿದೆ,'' ಎಂದು ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ.

''ಕಾವೇರಿ ವಿಚಾರದಲ್ಲಿ ತಮಗೂ ಕಳಕಳಿ ಇದೆ ಎಂದು ತೋರಿಸಿಕೊಳ್ಳುವ ಕಾರಣಕ್ಕೆ ಕರುಣಾನಿಧಿ ಅವರು ವಿಧಾನ ಸಭೆಯ ವಿಶೇಷ ಅಧಿವೇಶನ ಮತ್ತು ಸರ್ವಪಕ್ಷ ಸಭೆ ಕರೆಯಬೇಕು ಎಂದು ಮತ್ತೆ ಮತ್ತೆ ಅರ್ಥರಹಿತ ಬೇಡಿಕೆಗಳನ್ನು ಮಂಡಿಸುತ್ತಿದ್ದಾರೆ,'' ಎಂದು ಅದು ಆರೋಪಿಸಿದೆ.

ತಮಿಳು ನಾಡು ವಿಧಾನ ಸಭೆ ಅಧಿವೇಶ ಮುಗಿದು ಇನ್ನೂ ಒಂದು ತಿಂಗಳು ಕಳೆದಿಲ್ಲ. ಆ ಅಧಿವೇಶನದ ಕಲಾಪದಲ್ಲಿ ಕರುಣಾನಿಧಿ ಭಾಗವಹಿಸುವ ಕಾಳಜಿಯೂ ತೋರದೆ ಕೇವಲ ರಿಜಿಸ್ಟ್ರಿಯಲ್ಲಿ ಸಹಿ ಹಾಕುವುದಕ್ಕಷ್ಟೇ ಅವರ ಹಾಜರಾತಿ ಸೀಮಿತವಾಗಿತ್ತು ಎಂದು ಪಕ್ಷ ಕಿಡಿಕಾರಿದೆ.

ಮುಖ್ಯಮಂತ್ರಿ ಜಯಲಲಿತಾ ಅವರ ಕುಶಲ ನಡೆಯಿಂದಾಗಿ ಎರಡು ರಾಜ್ಯಗಳ ನದಿ ನೀರು ಹಂಚಿಕೆ ವಿವಾದಕ್ಕೆ ಶಾಶ್ವತ ಜಯ ಲಭಿಸುತ್ತಿದೆ. ತಮಿಳು ನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೂ ಆಘಾತ ಉಂಟುಮಾಡಿದೆ ಎಂದು ಲೇಖನದಲ್ಲಿ ವಿವರಿಸಲಾಗಿದೆ.

ಜಯಲಲಿತಾ ಅವರು ಕಾನೂನು ಮೊರೆ ಹೋಗಿ ಕಾವೇರಿ ನೀರಿನ ಹಂಚಿಕೆ ಮೂಲಕ ಇಡೀ ರಾಜ್ಯಕ್ಕೆ ಲಾಭವಾಗಿರುವುದನ್ನು ಕರುಣಾನಿಧಿ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದೂ ಎಐಎಡಿಎಂಕೆ ತನ್ನ ಲೇಖನದಲ್ಲಿ ಆರೋಪಿಸಿದೆ.

ಹಠಮಾರಿ ಕರ್ನಾಟಕದ ನಿರ್ಧಾರ: ಪುದುಚೆರಿ ಸಿಎಂ ಟೀಕೆ -*

ಏಜೆನ್ಸೀಸ್‌ ಪುದುಚೆರಿ

ತಮಿಳು ನಾಡು ಮತ್ತು ಪುದುಚೆರಿಗೆ ಕಾವೇರಿ ನೀರು ಬಿಡುಗಡೆ ಮಾಡದೇ ಇರುವ ಕರ್ನಾಟಕ ಸರಕಾರದ ತೀರ್ಮಾನ ತೀರಾ ಹಠಮಾರಿತನದ್ದು ಎಂದು ಪುದುಚೆರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಟೀಕಿಸಿದ್ದಾರೆ.

ಸುಪ್ರೀಂ ಕೋರ್ಟಿನ ಆದೇಶವನ್ನು ತಿರಸ್ಕರಿಸುವ ಈ ನಿರ್ಧಾರದಿಂದ ಕೇವಲ ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಸಂಘರ್ಷಕ್ಕೆ ದಾರಿ ಮಾಡುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಹೊಸ ದಿಲ್ಲಿಯಿಂದ ರಾಜ್ಯಕ್ಕೆ ಮರಳಿದ ಬಳಿಕ ಶನಿವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಪುದುಚೆರಿ ಸಿಎಂ, ''ತಮಿಳು ನಾಡು ಮತ್ತು ಪುದುಚೆರಿಯ ರೈತರ ಸಾಂಬಾ ಬೆಳೆಗೆ ನೀರಿನ ಅಗತ್ಯವಿದೆ, ಹಾಗಾಗಿ ಇಂತಹ ಸಂದರ್ಭದಲ್ಲಿ ಕಾವೇರಿ ನೀರು ಬಿಡುಗಡೆ ಮಾಡದೇ ಇರುವ ಕರ್ನಾಟಕ ವಿಧಾನ ಸಭೆಯ ನಿರ್ಧಾರ ಹಠಮಾರಿತನದ್ದು, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ,'' ಎಂದು ಅವರು ಹೇಳಿದರು.

ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್‌ ಆದೇಶವನ್ನು ಗೌರವಿಸಬೇಕು ಎಂದ ನಾರಾಯಣ ಸ್ವಾಮಿ, ಬೆಳೆಗೆ ನೀರು ಸಿಗದೇ ಇದ್ದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಕಾರೈಕಲ್‌ ವಲಯದಲ್ಲಿನ ಬೆಳೆಗೆ ನೀರು ಅತ್ಯಗತ್ಯವಾಗಿದೆ. ಅದನ್ನು ಕರ್ನಾಟಕ ಮನಗಾಣಬೇಕು ಎಂದು ಅವರು ತಿಳಿಸಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>