Quantcast
Channel: VijayKarnataka
Viewing all articles
Browse latest Browse all 6795

ಉರಿ ದಾಳಿ ಮೊದಲೇ ತಿಳಿದಿತ್ತೇ?

$
0
0

*ಪೊಲೀಸರಿಗೆ ಮಾಹಿತಿ ನೀಡಿದ್ದೆ ಎಂದ ಆರ್‌ಟಿಐ ಕಾರ್ಯಕರ್ತ

ರಾಮ್‌ಪುರ: ಜಮ್ಮು-ಕಾಶ್ಮೀರದ ಉರಿಯಲ್ಲಿ ಉಗ್ರರ ದಾಳಿ ನಡೆಯುತ್ತದೆ ಎಂಬುದನ್ನು ತಾವು ಬಹಳಷ್ಟು ಮುಂಚಿತವಾಗಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ರಾಮ್‌ಪುರದ ಆರ್‌ಟಿಐ ಕಾರ್ಯಕರ್ತ ಡ್ಯಾನಿಶ್‌ ಖಾನ್‌ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಈ ಸಂಬಂಧ ಸೆ.5ರಂದು ಒಬಾಮ್‌ನ ಮಹಿಳೆಯೊಬ್ಬರು ತಮಗೆ ವ್ಯಾಟ್ಸ್‌ಆಪ್‌ ಸಂದೇಶ ಕಳಿಸಿದ್ದರು ಎಂದು ಖಾನ್‌ ಹೇಳಿಕೊಂಡಿದ್ದಾರೆ. ಭಾರತ ಸರಕಾರದ ಹಿತಾಸಕ್ತಿಗೆ ಸಂಬಂಧಿಸಿದ ಮಾಹಿತಿ ತಮ್ಮ ಬಳಿ ಇರುವುದಾಗಿ ಹೇಳಿಕೊಂಡಿರುವ ಆಕೆ ಉರಿ ದಾಳಿಯ ವಿವರ ನೀಡಿದ್ದರು ಎಂದು ಖಾನ್‌ ತಿಳಿಸಿದ್ದಾಗಿ ಸ್ಥಳೀಯ ವಾರ್ತಾ ವಾಹಿನಿ ವರದಿ ಮಾಡಿದೆ.

ಡ್ಯಾನಿಶ್‌ ಮಹಿಳೆಯ ಹೆಸರನ್ನೂ ಬಹಿರಂಗ ಪಡಿಸಿದ್ದಾರೆ. ಶಬನಾ ಎಂಬಾಕೆ ತಮ್ಮ ಫೇಸ್‌ಬುಕ್‌ ಸ್ನೇಹಿತರ ಲಿಸ್ಟ್‌ನಲ್ಲಿದ್ದಾರೆ ಎಂದು ವಿವರಿಸಿರುವ ಅವರು, ಆಕೆ ಕಳುಹಿಸಿದ ಸಂದೇಶದ ಪ್ರಿಂಟೌಟ್‌ನ್ನು ಪೊಲೀಸರು ಮತ್ತು ವಿಶೇಷ ಕಾರ್ಯಪಡೆಗೆ ನೀಡಿದ್ದಾಗಿ ತಿಳಿಸಿದ್ದಾರೆ. ಈ ವಿಷಯದಲ್ಲಿ ಅಧಿಕಾರಿಗಳು ತಮ್ಮೊಂದಿ ಮಾತುಕತೆ ನಡೆಸಲು ಬಂದಿರುವುದಾಗಿಯೂ ಆ ಬಳಿಕ ಯಾವ ಕ್ರಮ ಕೈಗೊಂಡರು ಎಂಬುದು ತಿಳಿಯಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)



<script src="https://jsc.adskeeper.com/r/s/rssing.com.1596347.js" async> </script>