Quantcast
Channel: VijayKarnataka
Viewing all articles
Browse latest Browse all 6795

ಶೌರ್ಯ ಪ್ರದರ್ಶಿಸುವುದಾದರೆ ಗಡಿಗೆ ಹೋಗು: ಪತ್ನಿ ಪೀಡಕನಿಗೆ ಕೋರ್ಟ್ ಸಲಹೆ

$
0
0

ಅಹ್ಮದಾಬಾದ್: ಹೆಂಡತಿಗೆ ಹೊಡೆಯುತ್ತಿದ್ದ ಪತಿ ಮಹಾಶಯನಿಗೆ ಗುಜರಾತ್ ಹೈ ಕೋರ್ಟ್, 'ಶೌರ್ಯ ಪ್ರದರ್ಶಿಸುವುದಾದರೆ ಗಡಿಗೆ ಹೋಗು,' ಎಂದು ಬುದ್ಧಿವಾದ ಹೇಳಿದೆ.


ಚಾಲಕನಾಗಿರುವ ವನರಾಜ್ ಸಿನ್ಹಾ ರಾಣಾ ವಿರುದ್ಧ ಪತ್ನಿ ಮೇಲೆ ದೌರ್ಜನ್ಯವೆಸಗಿದ ದೂರು ದಾಖಲಾಗಿತ್ತು. ಅಲ್ಲದೇ ಪತಿ ಕತ್ತಿ ಹಿಡಿದು ಆಗಾಗ ಬೆದರಿಕೆ ಹಾಕುವುದಾಗಿಯೂ ಪತ್ನಿ ಆರೋಪಿಸಿದ್ದಳು. ಈತನ ವಿರುದ್ಧ ದಾಖಲಾದ ಎಫ್‌ಐಆರ್‌ ತಿರಸ್ಕೃತಗೊಂಡ ಪ್ರತಿಯನ್ನು ಪಡೆಯಲು ಕೋರ್ಟ್‌ಗೆ ಬಂದಾಗ ನ್ಯಾ.ಸೋನಿಯಾ ಗೊಕಣಿ, 'ಪತ್ನಿಯೊಂದಿಗೆ ದುರ್ನಡತೆ ತೋರಬಾರದು,' ಎಂದು ಬುದ್ಧಿ ಹೇಳಿದ್ದಾರೆ.

'ಜಮ್ಮು ಕಾಶ್ಮೀರದಲ್ಲಿ ಆತಂಕದ ಪರಿಸ್ಥಿತಿ ಇದೆ. ಗಡಿ ಕಾಯಲು ಮಾನವ ಸಂಪನ್ಮೂಲದ ಅಗತ್ಯವಿದೆ. ಕತ್ತಿ ತೆಗೆದು ಶೌರ್ಯ ಪ್ರದರ್ಶಿಸುವ ಇರಾದೆ ಇದ್ದರೆ, ಗಡಿಗೆ ಹೋಗಿ ಸೇವೆ ಸಲ್ಲಿಸು,' ಎಂದು ರಾಣಾಗೆ ಕೋರ್ಟ್ ಹೇಳಿದೆ.

ಪತಿ ವಿರುದ್ಧ ಏನು ದೂರು?:

ಮೂರು ಮಕ್ಕಳ ತಾಯಿಯಾಗಿರುವ ರಾಣಾ ಪತ್ನಿ ಸೂರ್ಯಾಬೇನ್, ಛಿಲೋಡಾ ಠಾಣೆಯಲ್ಲಿ ಪತಿ ತೋರುವ ಕ್ರೌರ್ಯ ಹಾಗೂ ದೌರ್ಜನ್ಯದ ವಿರುದ್ಧ ಈ ವರ್ಷದ ಆರಂಭದಲ್ಲಿಯೇ ಪ್ರಕರಣ ದಾಖಲಿಸಿದ್ದರು. ಆಗಾಗ ಹೊಡೆದು, ಬಡಿದು, ಕತ್ತಿ ತೋರಿಸಿ, ಪತಿ ಶೌರ್ಯ ಪ್ರದರ್ಶಿಸುತ್ತಾರೆಂದು ದೂಷಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ರಾಣಾ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ದೂರು ದಾಖಲಿಸಿಕೊಂಡಿದ್ದರು.

ಎಫ್ಐಆರ್ ದಾಖಲಾದ ಕೆಲವು ತಿಂಗಳ ನಂತರ ರಜಪೂತ ಸಮುದಾಯದ ಹಿರಿಯರ ಮಧ್ಯಸ್ಥಿಕೆಯಿಂದ ಪತಿ, ಪತ್ನಿ ನಡುವೆ ರಾಜಿ ಒಪ್ಪಂದವಾಗಿದೆ. ಸಂಧಾನದ ಬಳಿಕ ದಾಖಲಾದ ಎಫ್‌ಐಆರ್‌ ಅನ್ನು ತಿರಸ್ಕರಿಸುವಂತೆ ರಾಣಾ ಹೈ ಕೋರ್ಟ್ ಮೊರೆ ಹೋಗಿದ್ದರು.

ಜೋಡಿಯನ್ನು ವಿಚಾರಣೆ ನಡೆಸಿದ ಕೋರ್ಟ್, 'ಶಾಂತಿ ಹಾಗೂ ಸಹಾನುಭೂತಿ ಸಿಗುವ ಸ್ಥಳವೇ ಮನೆ. ಮನೆಯಲ್ಲಿ ಶಾಂತಿ ಇಲ್ಲವೆಂದಾದರೆ ಮನುಷ್ಯನ ಜೀವನವೇ ಕಷ್ಟವೆನಿಸುತ್ತದೆ,' ಎಂದು ಹೇಳಿ ಪತಿ ವಿರುದ್ಧ ಪತ್ನಿ ದಾಖಲಿಸಿದ ದೂರನ್ನು ರದ್ದುಗೊಳಿಸಿತು.

ಸೂರ್ಯಾಳ ರಕ್ಷಣೆ ದೃಷ್ಟಿಯಿಂದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮುಂದಿನ ಎರಡು ವರ್ಷಗಳ ಕಾಲ ಇವರ ಮನೆಗೆ ಆಗಾಗ ಭೇಟಿ ನೀಡಿ, ಪತಿಯ ನಡವಳಿಕೆ ಬಗ್ಗೆ ಕಣ್ಣಿಡಬೇಕೆಂದು ಕೋರ್ಟ್ ಸೂಚಿಸಿದೆ. ಅಕಸ್ಮಾತ್ ಪತ್ನಿ ತೊಂದರೆಯಲ್ಲಿರುವುದು ಪತ್ತೆಯಾದರೆ, ಎಫ್ಐಆರ್‌ನ ವಿಚಾರಣೆಯನ್ನು ಮರು ಪರಿಶೀಲಿಸಲಾಗುವುದೆಂದೂ ಎಚ್ಚರಿಸಿದೆ.

The Gujarat high court on Friday severely reprimanded a man who has been accused by his wife of frequent assaults and harassment by saying, "If you want to show valour, better go to the border".


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>