Quantcast
Channel: VijayKarnataka
Viewing all articles
Browse latest Browse all 6795

ಸುಪ್ರೀಂಕೋರ್ಟ್ ಆದೇಶದಲ್ಲೇ ಗೊಂದಲ!

$
0
0

ಬೆಂಗಳೂರು: ತಮಿಳುನಾಡಿಗೆ 6000 ಕ್ಯೂಸೆಕ್ ನೀರು ಬಿಡುವ ವಿಚಾರವಾಗಿ ಸುಪ್ರೀಂ ಕೋರ್ಟ್ ಸೆ.20ರಂದು ನೀಡಿರುವ ಆದೇಶ ಗೊಂದಲಕ್ಕೆ ಎಡೆ ಮಾಡಿಕೊಟ್ಟಿರುವುದು ಆದೇಶ ಪ್ರತಿಯಿಂದ ವ್ಯಕ್ತವಾಗಿದೆ.

ರಾಜ್ಯದ ಜಲಾಶಯಗಳಲ್ಲಿರುವ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮೀಸಲಿಡಬೇಕಿರುವ ಕಾರಣ ನೆರೆಯ ತಮಿಳುನಾಡಿಗೆ ಕೇಳಿದಷ್ಟು ನೀರು ಬಿಡಲಾಗದು ಎಂಬ ಕರ್ನಾಟಕದ ವಾದ ಆಲಿಸಿದ ನಂತರ ನ್ಯಾ. ದೀಪಕ್ ಮಿಶ್ರಾ ಹಾಗೂ ನ್ಯಾ. ಉದಯ್ ಲಲಿತ್ ಅವರಿದ್ದ ವಿಭಾಗೀಯ ಪೀಠವು ತಮಿಳುನಾಡಿಗೆ ಸೆ.21ರಿಂದ ಮುಂದಿನ ಆದೇಶದವರೆಗೆ 6000 ಕ್ಯೂಸೆಕ್ ನೀರನ್ನು ಹರಿಸಬೇಕು ಎಂದು ಆದೇಶಿಸಿದೆ. ಇದರ ಉಲ್ಲೇಖ ಆದೇಶ ಪ್ರತಿಯಲ್ಲಿ ಇದ್ದರೂ, ಎಲ್ಲೂ ಕೂಡ ನಿತ್ಯ 6000 ಕ್ಯೂಸೆಕ್ ನೀರನ್ನು ಬಿಡಬೇಕು ಎಂಬ ವಿವರಣೆ ಇಲ್ಲದಿರುವುದೇ ಗೊಂದಲ ಸೃಷ್ಟಿಗೆ ಕಾರಣವಾಗಿದೆ.

ನ್ಯಾಯಾಧಿಕರಣ ಹಾಗೂ ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶಗಳಲ್ಲಿ ಇಂತಿಷ್ಟು ದಿನ ಇಂತಿಷ್ಟೇ ಪ್ರಮಾಣದ ನೀರನ್ನು ಹರಿಸಬೇಕು ಎಂಬುದಾಗಿ ಕರ್ನಾಟಕಕ್ಕೆ ತಿಳಿಸಿತ್ತು. ಆದರೆ, ಸೆ.20ರ ಆದೇಶ (we direct the state
of karnataka to release 6000 cusecs of water from tomorrow till the next date of hearing)ದ ಕೊನೆಯ ಪ್ಯಾರಾದಲ್ಲಿ ಮುಂದಿನ ವಿಚಾರಣೆ (ಸೆ.27) ವರೆಗೆ 6000 ಕ್ಯೂಸೆಕ್ ನೀರನ್ನು ಬಿಡಬೇಕಿದೆ ಎಂಬ ಅರ್ಥ ಬರುವಂತಿದೆ. ಇದರರ್ಥ ಏಳು ದಿನಗಳ ಕಾಲ ರಾಜ್ಯವು ತಮಿಳುನಾಡಿಗೆ ಬಿಡಬೇಕಾದ ನೀರು 6000 ಕ್ಯೂಸೆಕ್ ಹೊರತೇ ನಿತ್ಯ 6000ದಂತೆ ಒಟ್ಟು 42,000 ಕ್ಯೂಸೆಕ್ ಪ್ರಮಾಣದಷ್ಟು ಅಲ್ಲ ಎಂದಾಗುತ್ತದೆ.

ಕೋರ್ಟ್‌ನ ಆದೇಶಗಳು ಯಾವಾಗಲೂ ಹೊಸದಾಗಿ ಕೈಗೊಂಡ ನಿರ್ಣಯದಂತೆ ಜಾರಿಗೆ ತರಬೇಕಾಗುತ್ತದೆ. ಇದರನ್ವಯ ಹಿಂದಿನ ಆದೇಶಗಳು ಏನೇ ಇದ್ದರೂ, ಆದೇಶ ಪ್ರತಿಯಲ್ಲಿ ಉಲ್ಲೇಖವಾಗಿರುವಂತೆ ನ್ಯಾಯಾಲಯದ ಸೂಚನೆಯನ್ನು ಪಾಲಿಸಬೇಕಾಗುತ್ತದೆ. ಒಂದು ವೇಳೆ ಪ್ರತಿಯಲ್ಲಿ ತಪ್ಪು ನುಸುಳಿದರೆ ಅದನ್ನು ಅಂದೇ ಕೋರ್ಟ್ ಗಮನಕ್ಕೆ ತಂದು ತಿದ್ದುಪಡಿ ಮಾಡಿಕೊಳ್ಳಬೇಕು. ಈ ಪ್ರಕರಣದಲ್ಲಿ ತಪ್ಪು ನುಸುಳಿರುವ ಕುರಿತು ಯಾವುದೇ ತಗಾದೆ ವಾದಿ ಹಾಗೂ ಪ್ರತಿವಾದಿಯಿಂದ ಸಲ್ಲಿಕೆಯಾಗದ ಕಾರಣ ಆದೇಶ ಪ್ರತಿಯಲ್ಲಿನ ಅಂಶಗಳೇ ಅಂತಿಮವಾಗುತ್ತದೆ.

ನ್ಯಾಯಾಂಗ ನಿಂದನೆಯಿಂದ ಪಾರು?

ಕೋರ್ಟ್ ಆದೇಶದಂತೆ 6000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸದಿದ್ದರೆ ಕರ್ನಾಟಕ ಸರಕಾರ ನ್ಯಾಯಾಂಗ ನಿಂದನೆ ಎದುರಿಸಬೇಕಿತ್ತು. ಆದರೀಗ ಆದೇಶ ಪ್ರತಿಯಲ್ಲಿ 6000 ಕ್ಯೂಸೆಕ್ ಎಂದು ನಮೂದಾಗಿರುವ ಕಾರಣ ಅಷ್ಟೂ ಪ್ರಮಾಣದ ನೀರು ಕಾವೇರಿ ನದಿ ಪಾತ್ರದ ನಾನಾ ಭಾಗಗಳಿಂದ ಸ್ವಾಭಾವಿಕವಾಗಿ ಬಿಳಿಗುಂಡ್ಲು ಮೂಲಕ ತಮಿಳುನಾಡಿಗೆ ಹರಿದುಹೋದಂತಾಗುತ್ತದೆ. ಏಳು ದಿನಗಳಲ್ಲಿ 6000 ಕ್ಯೂಸೆಕ್ ನೀರು ನೆರೆ ರಾಜ್ಯಕ್ಕೆ ಹರಿದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಿದಂತಾಗುವುದಲ್ಲದೆ, ನ್ಯಾಯಾಂಗ ನಿಂದನೆ ಆಗಲಿದೆ ಎಂಬ ಆತಂಕ ದೂರವಾಗುತ್ತದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>