Quantcast
Channel: VijayKarnataka
Viewing all articles
Browse latest Browse all 6795

ಉದ್ಯೋಗ ನೇಮಕ ಪ್ರಕ್ರಿಯೆಗಳು ಆಗಸ್ಟ್‌ನಲ್ಲಿ ಶೇ.8 ಹೆಚ್ಚಳ

$
0
0

ಹೊಸದಿಲ್ಲಿ: ಕಳೆದ ಎರಡು ತಿಂಗಳಿಂದ ಹಿಮ್ಮುಖವಾಗಿದ್ದ ಉದ್ಯೋಗಿಗಳ ನೇಮಕ ಪ್ರಕ್ರಿಯೆ ಆಗಸ್ಟ್‌ ತಿಂಗಳಲ್ಲಿ ಶೇ.8ಕ್ಕೆ ವೃದ್ಧಿಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಪ್ರಮಾಣ ಶೇ.4ರಷ್ಟು ಕುಸಿದಿತ್ತು.

''ಪ್ರಸ್ತುತ ವಿತ್ತವ್ಯವಸ್ಥೆ ಚೇತರಿಕೆಯಲ್ಲಿದ್ದು, ಹೆಲ್ತ್‌ಕೇರ್‌, ನಿರ್ಮಾಣ, ಬಿಬಿಒ/ಮಾಹಿತಿ ತಂತ್ರಜ್ಞಾನ ಆಧರಿಸಿದ ಕ್ಷೇತ್ರ, ಬಿಎಫ್‌ಎಸ್‌ಐ, ಉತ್ಪಾದನೆ ಸೇರಿದಂತೆ ಪ್ರಮುಖ ವಲಯಗಳಲ್ಲಿ ನೇಮಕಗಳು ಹೆಚ್ಚುತ್ತಿವೆ. ಅಲ್ಲದೇ, ಪ್ರತಿಭಾವಂತರಿಗೆ ಬೇಡಿಕೆ ಶೇ.8ರಷ್ಟು ಏರಿದೆ,'' ಎಂದು ಟೈಮ್ಸ್‌ ಜಾಬ್ಸ್‌.ಕಾಮ್‌ನ ನೇಮಕಾತಿ ಸೂಚ್ಯಂಕದ ಇತ್ತೀಚಿನ ವರದಿ ತಿಳಿಸಿದೆ.

''ಸರಕಾರದಿಂದ ಉದ್ಯೋಗ ಸೃಷ್ಟಿ ಮತ್ತು ಖಾಸಗಿ ವಲಯದಲ್ಲಿ ಉದ್ಯಮಗಳಿಗೆ ಉತ್ತೇಜನ ಮತ್ತಿತರ ಕ್ರಮಗಳು ನೇಮಕಾತಿ ಪ್ರಕ್ರಿಯೆಗೆ ಜೀವ ತುಂಬಿದ್ದು, ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತಿವೆ,'' ಎಂದು ಟೈಮ್ಸ್‌ ಬಿಸಿನೆಸ್‌ ಸಲ್ಯೂಷನ್ಸ್‌ನ ಕೌಶಲ್ಯ ವಿಭಾಗದ ಮುಖ್ಯಸ್ಥ ನೀಲಾಂಜನ್‌ ರಾಯ್‌ ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ಶೇ.15, ಅಹಮದಾಬಾದ್‌ನಲ್ಲಿ ಶೇ.14ಕ್ಕೆ ಬೇಡಿಕೆ ಹೆಚ್ಚಳವಾಗಿದೆ. ಅಹಮದಾಬಾದ್‌ ಮತ್ತು ವಡೋದರ ಹೊರತುಪಡಿಸಿದಂತೆ ಗುಜರಾತ್‌ ರಾಜ್ಯದಲ್ಲಿ ಶೇ.7 ಮಾತ್ರ ಬೇಡಿಕೆ ವೃದ್ಧಿಸಿದೆ.

ಬೆಂಗಳೂರು ಬೆಸ್ಟ್‌

ಬೇರೆ ಮೆಟ್ರೊಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ನೇಮಕ ಪ್ರಕ್ರಿಯೆ ಚುರುಕಾಗಿದೆ. ಪ್ರತಿಭಾವಂತರಿಗೆ ಇರುವ ಬೇಡಿಕೆಯು ಶೇ.18ಕ್ಕೆ ಹೆಚ್ಚಳವಾಗಿದೆ. ಚೆನ್ನೈನಲ್ಲಿ ಶೇ.13, ದಿಲ್ಲಿ-ಎನ್‌ಸಿಆರ್‌ನಲ್ಲಿ ಶೇ.12ಕ್ಕೆ ಬೇಡಿಕೆ ವೃದ್ಧಿಸಿದೆ. ಹೆಚ್ಚಿನ ನೇಮಕಾತಿಗೆ ಸಂಬಂಧಿಸಿದ ಟಾಪ್‌ ಟೆನ್‌ನಲ್ಲಿ ಲಖನೌ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ಪ್ರತಿಭಾವಂತರಿಗೆ ಬೇಡಿಕೆ ಶೇ.22ಕ್ಕೆ ಹೆಚ್ಚಳವಾಗಿದೆ.

* ವೈದ್ಯರು/ವೈದ್ಯಕೀಯ ವೃತ್ತಿಪರರು ಸೇರಿದಂತೆ ಹೆಲ್ತ್‌ಕೇರ್‌ ವಲಯದಲ್ಲಿ ಪ್ರತಿಭಾವಂತರ ಬೇಡಿಕೆ ಶೇ.30ಕ್ಕೆ ಹೆಚ್ಚಳ

* ಮನರಂಜನೆ/ಮಾಧ್ಯಮ/ಪತ್ರಿಕೋದ್ಯಮ ವೃತ್ತಿಗಳಲ್ಲಿ ಬೇಡಿಕೆ ಶೇ.27ಕ್ಕೆ ವೃದ್ಧಿಯಾಗಿದೆ. ಬಯೋಟೆಕ್ನಾಲಜಿ ಮತ್ತು ಫಾರ್ಮಸಿಟಿಕಲ್‌ ವೃತ್ತಿಗಳ್ಲಿ ಬೇಡಿಕೆಯು ಶೇ.21ಕ್ಕೆ ಹೆಚ್ಚಳವಾಗಿದೆ.

* ಬಿಸಿನೆಸ್‌ ಮ್ಯಾನೇಜ್‌ಮೆಂಟ್‌, ಕನ್ಸಲ್ಟೆಂಟ್ಸ್‌ ಮತ್ತು ಫ್ರೀಲ್ಯಾನ್ಸರ್ಸ್‌ ವಲಯದಲ್ಲಿ ಬೇಡಿಕೆ ಶೇ.22, ಎಂಜಿನಿಯರ್‌ಗಳಿಗೆ ಬೇಡಿಕೆ ಶೇ.11ಕ್ಕೆ ಜಿಗಿದಿದೆ.

*10ರಿಂದ 20 ವರ್ಷ ಅನುಭವ ಇರುವ ವೃತ್ತಿಪರರ ಬೇಡಿಕೆ ಶೇ.21ರಷ್ಟು ವೃದ್ಧಿ.

* 5ರಿಂದ 10 ವರ್ಷ ಅನುಭವ ಹೊಂದಿರುವ ಅಭ್ಯರ್ಥಿಗಳ ಬೇಡಿಕೆ ಶೇ.11ರಷ್ಟಿದೆ. 2ರಿಂದ 5 ವರ್ಷದ ಅನುಭವಿಗಳಿಗೆ ಬೇಡಿಕೆಯು ಶೇ.7ಕ್ಕೆ ವೃದ್ಧಿಯಾಗಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>