Quantcast
Channel: VijayKarnataka
Viewing all articles
Browse latest Browse all 6795

ವಾಚ್‌ಮನ್‌ ಸಂಗೀತ ರಸಾನುಭವ

$
0
0

ಸ್ಯಾಂಡಲ್‌ವುಡ್‌ನಲ್ಲಿ ಪ್ರೆಮಕವಿ ಎಂದೇ ಖ್ಯಾತಿ ಗಳಿಸಿರುವ ಕೆ ಕಲ್ಯಾಣ್‌ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ತಾವು ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾಕ್ಕಾಗಿ ಮೊದಲ ಬಾರಿಗೆ ಭಾರತದ ಎಲ್ಲಾ ವಾದ್ಯಗಳನ್ನು ಬಳಸಿ ಕಲ್ಯಾಣ್‌ ವಿಭಿನ್ನ ರೀತಿಯಲ್ಲಿ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ.

ಹರೀಶ್‌ ಬಸವರಾಜ್‌

ಹೌದು ಕೆ ಕಲ್ಯಾಣ್‌ ಚಿತ್ರಸಾಹಿತಿಯಾಗಿ ಸಾಕಷ್ಟು ಹೆಸರು ಗಳಿಸಿದವರು. ಈಗ ಅವರದ್ದೇ ನಿರ್ದೇಶನದ ಸಿನಿಮಾಗಾಗಿ ಕಲ್ಯಾಣ್‌ ವಿಭಿನ್ನ ರೀತಿಯಲ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದುವರೆಗೂ ಭಾರತೀಯ ಚಿತ್ರರಂಗದಲ್ಲಿ ಸಿನಿಮಾ ಸಂಗೀತಕ್ಕಾಗಿ ಬಳಸಿರುವ ಎಲ್ಲ ವಾದ್ಯಗಳನ್ನು ಕಲ್ಯಾಣ್‌ ತಮ್ಮ ಸಿನಿಮಾದಲ್ಲಿ ಬಳಸಿದ್ದಾರೆ. ಶಹಾನಯ್‌, ಸಾರಂಗಿ, ನಾದಸ್ವರ, ಬುಲ್‌ಬುಲ್‌ತರಂಗ್‌, ಸಿತಾರ್‌, ತಬಲ, ಕೊಳಲು, ಮೃದಂಗ, ಘಟಂ, ಕೀಬೋರ್ಡ್‌, ಗಿಟಾರ್‌ ಸೇರಿದಂತೆ ಹಳೆಯ ವಾದ್ಯಗಳು ಜೊತೆಗೆ ಆಧುನಿಕ ವಾದ್ಯಗಳನ್ನು ಈ ಸಿನಿಮಾದಲ್ಲಿ ಬಳಸಿದ್ದಾರೆ.

ಈ ಸಿನಿಮಾದಲ್ಲಿ ಸಂಗೀತ ಮಾತಾಡಬೇಕು ಎನ್ನುವ ದೃಷ್ಠಿಯಿಂದ ಹೊಸತರಹದ ಪ್ರಯತ್ನ ಮಾಡಲಾಗುತ್ತಿದೆ. ಸಂಗೀತದ ಮೂಲಕ ಮೌನವನ್ನು ಎತ್ತಿಹಿಡಿಯುವ ಪ್ರಯತ್ನ. ಇದೊಂದು ಮ್ಯೂಸಿಕಲ್‌ ಸಿನಿಮಾ ಆದರೂ ಕಥೆಗೆ ತಕ್ಕಂತೆ ಸಂಗಿತ ಸಾತ್‌ ನೀಡುತ್ತದೆ. ಸಿನಿಮಾದಲ್ಲಿ ಎಲ್ಲೆಂದರಲ್ಲಿ ಹಾಡುಗಳು ಬರುವುದಿಲ್ಲ. ಪ್ರೀತಿ ಮತ್ತು ಎಮೋಷನ್‌ ಅನ್ನು ಬೇರೆ ದೃಷ್ಟಿಕೋನದಲ್ಲಿ ನೋಡಿದಾಗ ಹುಟ್ಟಿಕೊಳ್ಳುವ ಭಾವನೆಯೇ ಈ ಸಿನಿಮಾ ಎಂದು ತಮ್ಮ ಪ್ರೇಮ ಕವಿತೆಗಳ ಧಾಟಿಯಲ್ಲೆ ತಮ್ಮ ಹೊಸ ಸಾಹಸದ ಬಗ್ಗೆ ವ್ಯಾಖ್ಯಾನಿಸುತ್ತಾರೆ ನಿರ್ದೇಶಕ ಕಲ್ಯಾಣ್‌.

ಈ ಎಲ್ಲಾ ವಾದ್ಯಗಳನ್ನು ಬಳಸಿದ ಮಾತ್ರಕ್ಕೆ ಸಿನಿಮಾ ಹಾಡುಗಳು ಹಳೆಯ ಕಾಲದ ತರಹ ಇರುತ್ತವೆ ಎಂದಲ್ಲ, ಆಧುನಿಕ ಟ್ರೆಂಡ್‌ಗೆ ತಕ್ಕಂತೆ ಪ್ರತಿಯೊಂದು ಹಾಡನ್ನು ಕಂಪೋಸ್‌ ಮಾಡಲಾಗಿದೆ. ಸಿನಿಮಾದ ಸೌಂಡಿಂಗ್‌ ಮತ್ತು ಹಿನ್ನೆಲೆ ಸಂಗೀತವೂ ಸುಮಧುರವಾಗಿ ಮೂಡಿ ಬಂದಿದೆ. ಎಂದು ಹೇಳುತ್ತಾರೆ ಕಲ್ಯಾಣ್‌.

ಇನ್ನು ಈ ಸಿನಿಮಾದಲ್ಲಿ ಎಂಟು ಹಾಡುಗಳಿವೆ. ಉಪೇಂದ್ರ, ಪುನೀತ್‌ರಾಜ್‌ಕುಮಾರ, ಎಸ್‌ ಪಿ ಬಾಲಸುಬ್ರಹ್ಮಣ್ಯಂ, ಮಾನಸ ಹೊಳ್ಳ, ಸೇರಿದಂತೆ ಹೊಸ ಪ್ರತಿಭೆಗಳಾದ ಸ್ಪರ್ಶ್‌ ಎಂಬುವವರು ಹಾಡಿದ್ದಾರೆ.

ಮನೋಜ್‌ಕುಮಾರ್‌ ಎಂಬ ಹೊಸ ನಿರ್ಮಾಪಕರು 'ಶುಭಾ ಮೂವಿ ಮೇಕರ್ಸ್‌' ಎಂಬ ಬ್ಯಾನರ್‌ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾದ ಮೂಲಕ ಕಿರಣ್‌ರಾಜ್‌ ಮತ್ತು ಹಿಂದು ಪುಣ್ಯ ಎಂಬ ನವ ಪ್ರತಿಭೆ ಗಳು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಅವರ ಜೊತೆ ಅನಂತ್‌ನಾಗ್‌, ಸುಂದರ್‌ರಾಜ್‌, ಸುಧಾ ಬೆಳವಾಡಿ, ರಮೇಶ್‌ಭಟ್‌ ಸೇರಿದಂತೆ ಸಾಕಷ್ಟು ಅನುಭವಿ ನಟರ ದಂಡೆ ಈ ಚಿತ್ರದಲ್ಲಿದೆ.

---

ಸಿನಿಮಾ ಎನ್ನುವುದು ನೋಡುಗರಿಗೆ ಭ್ರಮೆ ಹುಟ್ಟಿಸುವ ರೀತಿ ಇರಬೇಕೆಂದು ಸಂಗೀತದಲ್ಲಿ ಹೊಸ ಪ್ರಯತ್ನ ಮಾಡಿದ್ದೇನೆ. ಪ್ರೀತಿ ಹೇಗೆ ಸಮಯವನ್ನು ಗೆಲ್ಲುತ್ತದೆ ಎಂಬುದ ಮೇಲೆ ಸಿನಿಮಾ ನಡೆಯುತ್ತದೆ. ಮೊದಲ ಬಾರಿಗೆ ಸಿನಿಮಾದ ಸಂಭಾಷಣೆ, ಸಾಹಿತ್ಯ, ಚಿತ್ರಕಥೆ ಸಂಗೀತ ಹೀಗೆ ಎಲ್ಲ ವಿಭಾಗದಲ್ಲೂ ತೊಡಗಿಸಿಕೊಂಡಿದ್ದೇನೆ.

-ಕೆ ಕಲ್ಯಾಣ್‌, ನಿರ್ದೇಶಕ



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>