Quantcast
Channel: VijayKarnataka
Viewing all articles
Browse latest Browse all 6795

ಕಾವೇರಿ ವಿವಾದ: ರಾಜ್ಯ ಸರಕಾರದ ವಿರುದ್ಧ ಐಟಿ ದಿಗ್ಗಜರ ಅತೃಪ್ತಿ

$
0
0

ಎಕನಾಮಿಕ್‌ ಟೈಮ್ಸ್‌ ಬೆಂಗಳೂರು

ಕಾವೇರಿ ನದಿ ಜಲ ವಿವಾದವನ್ನು ಕರ್ನಾಟಕ ಸರಕಾರ ನಿರ್ವಹಿಸುತ್ತಿರುವ ರೀತಿಗೆ ಮಾಹಿತಿ ತಂತ್ರಜ್ಞಾನ ಹಾಗೂ ಇತರ ಉದ್ಯಮ ವಲಯದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದ ಸಿಲಿಕಾನ್‌ ವ್ಯಾಲಿ ಎಂದೇ ಬಿಂಬಿತವಾಗಿರುವ ಬೆಂಗಳೂರಿನ ಐಟಿ ವಲಯ ಕಳೆದ ಮೂರು ದಿನಗಳಿಂದ ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಅಸ್ತವ್ಯಸ್ತವಾಗಿತ್ತು. ಆದರೆ ರಾಜ್ಯ ಸರಕಾರದ ಕಳಪೆ ನಿರ್ವಹಣೆಯಿಂದ ಉದ್ದಿಮೆ ವಲಯಕ್ಕೆ ಭಾರಿ ನಷ್ಟವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಚಕಾರವೆತ್ತಿಲ್ಲ. ಬೆಂಗಳೂರಿನ ವರ್ಚಸ್ಸಿಗೂ ಇದರಿಂದ ಧಕ್ಕೆಯಾಗಿದೆ ಎಂದು 35 ಮಂದಿ ಬಿಸಿನೆಸ್‌ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೆಸರನ್ನು ಗೌಪ್ಯವಾಗಿಡುವ ಷರತ್ತಿನ ಮೇರೆಗೆ ಬಿಸಿನೆಸ್‌ ಪ್ರಮುಖರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಯಲ್ಲಿ ಬಹುತೇಕ ಮಂದಿ ಉದ್ಯಮ ದಿಗ್ಗಜರು, ಸರಕಾರ ಇನ್ನೂ ಚೆನ್ನಾಗಿ ಬಿಕ್ಕಟ್ಟನ್ನು ನಿರ್ವಹಿಸಲು ಸಾಧ್ಯವಿತ್ತು ಎಂದಿದ್ದಾರೆ. '' ಕಳೆದ ಸೋಮವಾರ ಸರಕಾರ ಕಾನೂನು ಕ್ರಮಗಳನ್ನು ಜಾರಿಗೊಳಿಸಿದ್ದರೆ, ಬೆಂಗಳೂರು ಹೊತ್ತಿ ಉರಿಯುತ್ತಿರಲಿಲ್ಲ'' ಎಂದು ಮಣಿಪಾಲ್‌ ಗ್ಲೋಬಲ್‌ ಎಜ್ಯುಕೇಷನ್‌ ಅಧ್ಯಕ್ಷ ಟಿ.ವಿ ಮೋಹನ್‌ ದಾಸ್‌ ಪೈ ಹೇಳಿದ್ದಾರೆ. ಈಗ ಸರಕಾರ ಕಾನೂನು ಕ್ರಮಗಳನ್ನು ಜಾರಿಗೊಳಿಸಿರುವುದರಿಂದ ಬೆಂಗಳೂರು ಶಾಂತವಾಗಿದೆ ಎಂದವರು ಹೇಳಿದರು.

ಕಳೆದ ಸೋಮವಾರ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟವಾದ ನಂತರ ಬೆಂಗಳೂರಿನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. '' ಬೆಂಗಳೂರು-ಮೈಸೂರು ರಸ್ತೆಯಲ್ಲಿ ಮೊದಲೇ ಭಾರಿ ಬಿಗಿ ಬಂದೋಬಸ್ತ್‌ ಮಾಡಬಹುದಿತ್ತು'' ಎಂದು ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ನ ಉಪಾಧ್ಯಕ್ಷ ಶೇಖರ್‌ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ನಡೆದಿರುವ ವಿದ್ಯಮಾನಗಳು ಬೆಂಗಳೂರಿನ ಬ್ರ್ಯಾಂಡ್‌ ಇಮೇಜಿಗೆ ಧಕ್ಕೆ ತರುವಂತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. '' ಜಾಗತಿಕ ಮಟ್ಟದ ನಗರಗಳಲ್ಲಿ ಇಂತಹ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗುತ್ತಿರುತ್ತದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಅವುಗಳ ಬ್ರ್ಯಾಂಡ್‌ ಇಮೇಜ್‌ ಕೂಡ ಸುಧಾರಿಸುತ್ತದೆ'' ಎಂದು ಬಯೊಕಾನ್‌ ಮುಖ್ಯಸ್ಥೆ ಕಿರಣ್‌ ಮುಜುಂದಾರ್‌ ತಿಳಿಸಿದ್ದಾರೆ. ಹೀಗಿದ್ದರೂ ಮಂಗಳವಾರ ಬೆಂಗಳೂರು ಸಹಜ ಸ್ಥಿತಿಗೆ ಮರಳಿತ್ತು.

'' ಬೆಂಗಳೂರಿನಲ್ಲಿ ನಡೆದಿರುವ ಘಟನೆಗಳು ದುರದೃಷ್ಟಕರ. ಆದರೆ ಪ್ರಧಾನಿಯವರು ಹೇಳಿರುವಂತೆ ಇದು ನ್ಯಾಯಾಂಗದ ಹಂತದಲ್ಲಿರುವ ವಿವಾದ'' ಎನ್ನುತ್ತಾರೆ ಕ್ವಾಟ್ರೊ ಗ್ಲೋಬಲ್‌ನ ಮುಖ್ಯಸ್ಥ ರಮಣ್‌ ರಾಯ್‌ ಪ್ರತಿಕ್ರಿಯಿಸಿದ್ದಾರೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!