Quantcast
Channel: VijayKarnataka
Viewing all articles
Browse latest Browse all 6795

ಕನ್ನಡಕ್ಕೆ ಯಂಗೆಸ್ಟ್‌ ಮ್ಯೂಸಿಕ್‌ ಡೈರೆಕ್ಟರ್‌

$
0
0

ಸ್ಯಾಂಡಲ್‌ವುಡ್‌ಗೆ ಹೊಸ ಸಂಗೀತ ನಿರ್ದೇಶಕರು ಆಗೊಮ್ಮೆ ಈಗೊಮ್ಮೆ ಕಾಲಿಡುತ್ತಿರುತ್ತಾರೆ. ಇದೀಗ ಪ್ರವೇಶ ನೀಡಿರೋ ವಾಸುಕಿ ವೈಭವ್‌ ಗಾಂಧಿನಗರ ಕಂಡ ಯಂಗೆಸ್ಟ್‌ ಮ್ಯೂಸಿಕ್‌ ಡೈರೆಕ್ಟರ್‌.

- ಹರೀಶ್‌ ಬಸವರಾಜ್‌

ಇತ್ತೀಚಿಗೆ ಗಾಂಧಿಧಿನಗರದಲ್ಲಿ ಸದ್ದು ಮಾಡುತ್ತಿರುವ 'ರಾಮಾ ರಾಮಾ ರೇ' ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿರುವ ವಾಸುಕಿ ವೈಭವ್‌ ಎಂಬ ಯುವಕನಿಗೆ ಕೇವಲ 23 ವರ್ಷ. ಸದ್ಯದ ಮಟ್ಟಿಗೆ ಕನ್ನಡದಲ್ಲಿರುವ ಯಂಗೆಸ್ಟ್‌ ಸಂಗೀತ ನಿರ್ದೇಶಕ ಇವರು.

ಬಿ ವಿ ಕಾರಂತರು ಕಟ್ಟಿದ 'ಬೆನಕ' ನಾಟಕ ತಂಡದಲ್ಲಿ ಚಿಕ್ಕವಯಸ್ಸಿನಿಂದಲೂ ತೊಡಗಿಸಿಕೊಂಡಿರುವ ವೈಭವ್‌, ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಿರಿಯ ನಿರ್ದೇಶಕ ನಾಗಾಭರಣ ಅವರ ಕೆಲ ಸಿನಿಮಾಗಳಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿರುವ ವೈಭವ್‌, ಕಲಾ ಶಿಕ್ಷಕರಾಗಿ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವೈಭವ್‌ ಅವರ ತಂದೆ ಜಯರಾಮ್‌ ಅವರು ಕಲಾವಿದರಾಗಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.

'ಜಯನಗರ ನಾಲ್ಕನೇ ಬ್ಲಾಕ್‌' ಕಿರು ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಸತ್ಯ ಪ್ರಕಾಶ್‌ ನಿರ್ದೇಶನದ ಈ ಹೊಸ ಸಿನಿಮಾದಲ್ಲಿ ವೈಭವ್‌ ಮೂರು ಹಾಡುಗಳನ್ನು ಕಂಪೋಸ್‌ ಮಾಡಿದ್ದಾರೆ. ಬಿಡುಗಡೆಯಾಗಿರುವ ಒಂದು ಹಾಡು ಎಲ್ಲರಿಗೂ ಇಷ್ಟವಾಗಿದೆ. ತಮ್ಮ ಮೊದಲ ಚಿತ್ರದಲ್ಲೇ ಗಮನ ಸೆಳೆದಿರುವ ವೈಭವ್‌, ಪದವಿ ಓದುತ್ತಿದ್ದಾಗ ತಮ್ಮ ಗೆಳೆಯರೊಡನೆ ಸೇರಿ 'ಅಲೆ' ಎಂಬ ಮ್ಯೂಸಿಕ್‌ ಆಲ್ಬಂ ಮಾಡಿದ್ದರು. ಆ ಅಲ್ಬಂನಲ್ಲಿ ಎರಡು ಹಾಡನ್ನು ಸಹ ವೈಭವ್‌ ಹಾಡಿದ್ದರು. ಈ ಹೊಸ ಸಿನಿಮಾದಲ್ಲಿ ವೈಭವ್‌ ಒಂದು ಹಾಡನ್ನು ಹಾಡಿದ್ದಾರೆ.

ಚಿತ್ರ ಸಾಹಿತಿ ಕೆ ಕಲ್ಯಾಣ್‌, ಸಂಗೀತ ನಿರ್ದೇಶಕರಾದ ಅನೂಪ್‌ ಸೀಳಿನ್‌, ಪ್ರವೀಣ್‌ ಡಿ ರಾವ್‌, ರಘು ದೀಕ್ಷಿತ್‌ ಅವರೊಂದಿಗೆ ಕೆಲಸ ಮಾಡಿದ ಅನುಭವ ವೈಭವ್‌ ಅವರದ್ದು. ಇಷ್ಟೇ ಅಲ್ಲದೆ ಅವರ ಜತೆಗೆ ಒಂದಷ್ಟು ದಿನಗಳ ಕಾಲ ಕೆಲಸ ಮಾಡಿದ ಅನುಭವ ಕೂಡಾ ವೈಭವ್‌ ಅವರಿಗಿದೆ. ಕೆಲ ನಾಟಕಗಳಿಗೆ ವಿಭಿನ್ನವಾಗಿ ಸಂಗೀತ ನೀಡಿರುವ ವೈಭವ್‌ ಅವರಿಗೆ ವಯಸ್ಸು 23 ದಾಟುವ ಮುನ್ನವೇ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುವ ಅವಕಾಶ ದಕ್ಕಿದೆ. ಅಜ್ಜಿ ಹಾಡುತ್ತಿದ್ದ ದೇವರ ನಾಮಗಳನ್ನು ಕೇಳಿಕೊಂಡು ಬೆಳದ ವೈಭವ್‌ ಕಾಲೇಜು ದಿನಗಳಲ್ಲಿ ತಮ್ಮ ಗೆಳೆಯರೊಂದಿಗೆ ಸೇರಿಕೊಂಡು 'ಸರ್ವಸ್ವ' ಎಂಬ ಮ್ಯೂಸಿಕ್‌ ಬ್ಯಾಂಡ್‌ ಸಹ ಕಟ್ಟಿಕೊಂಡಿದ್ದರು. ಹಿರಿಯ ನಿರ್ದೇಶಕ ನಾಗಭರಣ ಅವರ ವಸುಂಧರಾ ಸಿನಿಮಾಕ್ಕೆ ಒಂದು ಹಾಡನ್ನು ಸಹ ಇವರು ರಚಿಸಿದ್ದಾರೆ.

ಸಿನಿಮಾ ಸಂಗೀತದಲ್ಲಿ ದೇಸಿತನವುಳ್ಳ ಟ್ಯೂನ್‌ಗಳನ್ನು ನೀಡಬೇಕೆನ್ನುವುದು ನನ್ನ ಉದ್ದೇಶ. ಸಾಕಷ್ಟು ಸಂಗೀತ ನಿರ್ದೇಶಕರ ಜತೆ ಕೆಲಸ ಮಾಡಿದ ಅನುಭವ ಇದ್ದಿದ್ದರಿಂದ ಈ ಸಿನಿಮಾಕ್ಕೆ ಸ್ವತಂತ್ರ ನಿರ್ದೇಶನ ಮಾಡಿದ್ದೇನೆ.

-ವಾಸುಕಿ ವೈಭವ್‌, ಸಂಗೀತ ನಿರ್ದೇಶಕ


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>