Quantcast
Channel: VijayKarnataka
Viewing all articles
Browse latest Browse all 6795

ಸವಾಲಿಗೆ ಸಜ್ಜಾದ ಹಿರೋಯಿನ್‌

$
0
0

ಇತ್ತೀಚೆಗಷ್ಟೇ ತೆರೆಕಂಡ 'ನೀರ್‌ದೋಸೆ' ಚಿತ್ರದಲ್ಲಿ ಹರಿಪ್ರಿಯಾ ಕಾಲ್‌ಗರ್ಲ್‌ ಪಾತ್ರ ನಿರ್ವಹಿಸಿದ್ದರು. ಚಿತ್ರೀಕರಣದಲ್ಲಿರುವ 'ಅಲ್ಪವಿರಾಮ' ಚಿತ್ರದಲ್ಲಿ ಕೃಷಿ ತಾಪಂದ ಪಾತ್ರಕ್ಕೆ ಇದೇ ಶೇಡ್‌ ಇದೆಯಂತೆ. ಕನ್ನಡದ ನಾಯಕಿಯರು ಸವಾಲಿನ ಪಾತ್ರಗಳಿಗೆ ಹಾತೊರೆಯುತ್ತಿದ್ದಾರೆ.

- ಶಶಿ

ಕನ್ನಡ ಸೇರಿದಂತೆ ಹಿಂದಿ ಹಾಗೂ ದಕ್ಷಿಣ ಭಾರತದ ಇತರೆ ನಾಯಕಿಯರು ನಟನೆಗೆ ಹೆಚ್ಚು ಸ್ಕೋಪ್‌ ಇರುವಂತಹ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಏಕತಾನತೆಯ ಪಾತ್ರಗಳಿಂದ ಹೆಸರು ಮಾಡುವುದು ಸಾಧ್ಯವಿಲ್ಲ ಎನ್ನುವುದು ಅವರಿಗೆ ಮನವರಿಕೆಯಾಗಿದೆ. ಮಡಿವಂತಿಕೆ ಮೆರೆಯುತ್ತಿದ್ದ ಕೆಲವು ನಟಿಯರು ಗ್ಲಾ ್ಯಮರ್‌ಗೆ ಮರುಳಾಗಿದ್ದರು. ಕ್ರಮೇಣ ಅವರು ಐಟಂ ಹಾಡುಗಳಿಗೂ ಹೆಜ್ಜೆ ಹಾಕತೊಡಗಿದ್ದು ಅಚ್ಚರಿ ತಂದಿತ್ತು. ಇದೀಗ ವೇಶ್ಯೆಯರ ಪಾತ್ರಗಳಿಗೂ ಸೈ ಎನ್ನುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ 'ನೀರ್‌ದೋಸೆ' ಚಿತ್ರದಲ್ಲಿನ ಹರಿಪ್ರಿಯಾ ಪಾತ್ರಕ್ಕೆ ಭರಪೂರ ಪ್ರಶಂಸೆ ವ್ಯಕ್ತವಾಗಿದೆ. ಗ್ಲಾಮರ್‌ನಿಂದ ಗುರುತಿಸಿಕೊಳ್ಳಲು ಸಾಧ್ಯವಾಗದ ಹರಿಪ್ರಿಯಾಗೆ ಈ ಪಾತ್ರ ಹೆಸರು ತಂದುಕೊಟ್ಟಿದೆ.

ಸದ್ಯ ಚಿತ್ರೀಕರಣದಲ್ಲಿರುವ 'ಅಲ್ಪವಿರಾಮ' ಚಿತ್ರದಲ್ಲಿ ಯುವನಟಿ ಕೃಷಿ ತಾಪಂದ ಅವರ ಪಾತ್ರಕ್ಕೆ ಭಿನ್ನ ಶೇಡ್‌ಗಳಿವೆಯಂತೆ. ಇವುಗಳ ಪೈಕಿ ವೇಶ್ಯೆ ಪಾತ್ರದಲ್ಲಿಯೂ ಅವರು ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇದೀಗಷ್ಟೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ಅವರಿಗೆ ಇಂಥದ್ದೊಂದು ಪಾತ್ರ ಒಪ್ಪಿಕೊಳ್ಳಲು ಯಾವುದೇ ಮುಜುಗರವಾಗಿಲ್ಲ. 'ಉತ್ತಮ ಕತೆ, ಪಾತ್ರಗಳು ನಟಿಯರಿಗೆ ಹೆಸರು ತಂದುಕೊಡುತ್ತವೆ. ಪಾತ್ರಕ್ಕೊಂದು ಗಟ್ಟಿ ತಳಹದಿ ಇದ್ದಾಗ ಪ್ರೇಕ್ಷ ಕರು ನಟಿಯರನ್ನು ಗುರುತಿಸುತ್ತಾರೆ. ಗ್ಲಾಮರ್‌ ಪಾತ್ರಗಳ ಜತೆಗೆ ಇಂತಹ ಪಾತ್ರಗಳಲ್ಲಿಯೂ ನಟಿಸಬೇಕೆನ್ನುವ ನನ್ನ ಆಸೆ ಈ ಚಿತ್ರದೊಂದಿಗೆ ಈಡೇರಿದೆ' ಎನ್ನುತ್ತಾರೆ ಕೃಷಿ ತಾಪಂದ.

ಮಸಣದ ಹೂವು

ಕನ್ನಡ ಬೆಳ್ಳಿತೆರೆಯಲ್ಲಿ ಮೊದಲ ಬಾರಿಗೆ ವೇಶ್ಯೆಯರ ಚಿತ್ರಣ ಕೊಟ್ಟವರು ಪುಟ್ಟಣ್ಣ ಕಣಗಾಲ್‌. ಎಂ.ಕೆ.ಇಂದಿರಾ ಕಾದಂಬರಿ ಆಧರಿಸಿ ಪುಟ್ಟಣ್ಣ ನಿದೇರ್ಶಿಸಿದ 'ಗೆಜ್ಜೆಪೂಜೆ'ಯಲ್ಲಿ ದೇವದಾಸಿ ಪದ್ಧತಿಯ ಚಿತ್ರಣವಿತ್ತು. ದೇವದಾಸಿಯರ ದೌರ್ಭಾಗ್ಯದ ಬದುಕನ್ನು ಅವರು ಮನಮುಟ್ಟುವಂತೆ ನಿರೂಪಿಸಿದ್ದರು. ಅವರದೇ ಮತ್ತೊಂದು ಸಿನಿಮಾ 'ಮಸಣದ ಹೂವು' ಆಗಿನ ಕಾಲಕ್ಕೆ ಅತ್ಯಂತ ಬೋಲ್ಡ್‌ ಸಿನಿಮಾ. ನಟಿ ಜಯಂತಿ ವೇಶ್ಯಾವಾಟಿಕೆ ನಡೆಸುವ ಘರ್‌ವಾಲಿಯಾಗಿ ಅಭಿನಯಿಸಿದ್ದರು. ಕೆ.ಬಾಲಚಂದರ್‌ ನಿದೇಶನದ 'ತಪ್ಪಿದ ತಾಳ' ವಿಶಿಷ್ಠ ಪ್ರಯೋಗ. ಚಿತ್ರದಲ್ಲಿ ನಟಿ ಸರಿತಾಗೆ ವೇಶ್ಯೆ ಪಾತ್ರ. ರಜನೀಕಾಂತ್‌ ನಟಿಸಿದ್ದ ಸಿನಿಮಾ 'ತಪ್ಪು ತಾಳಂಗಳ್‌' ಶೀರ್ಷಿಕೆಯಡಿ ತಮಿಳಿನಲ್ಲೂ ತಯಾರಾಗಿತ್ತು. ಕಮಲಹಾಸನ್‌ ಚಿತ್ರದ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

ಉತ್ತರ ಕನಾಟಕದ ನೈಜ ಘಟನೆಯೊಂದರ ಸ್ಫೂರ್ತಿಯಿಂದ ನಿರ್ದೇಶಕ ಪಿ.ಎಚ್‌.ವಿಶ್ವನಾಥ್‌ 'ಅರಗಿಣಿ' ನಿರ್ದೇಶಿಸಿದ್ದರು. ದೇವದಾಸಿ ಪದ್ಧತಿ ಕಥಾಹಂದರವಿದ್ದ ಚಿತ್ರವಿದು. ಜಿ.ವಿ.ಶಾರದಾ, ರಮೇಶ್‌, ಸುಧಾರಾಣಿ ಚಿತ್ರದ ಪ್ರಮುಖ ತಾರೆಯರು. ವಿಮರ್ಶಕರು ಹಾಗೂ ಪ್ರೇಕ್ಷ ಕರು ಎರಡೂ ವರ್ಗದ ಮನಗೆದ್ದ ಪ್ರಯೋಗವಿದು. ಜಿ.ವಿ.ಅಯ್ಯರ್‌ ನಿದೇರ್ಶನದ 'ಚೌಕದ ದೀಪ'ದಲ್ಲಿ ವೇಶ್ಯೆಯರ ಬದುಕು ಅನಾವರಣಗೊಂಡಿತ್ತು. ಚಿತ್ರಕ್ಕೆ ಪ್ರೇಕ್ಷ ಕರಿಗಿಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ನಿದೇರ್ಶನದ 'ಹೂವು ಹಣ್ಣು', ವೇಶ್ಯೆಯೊಬ್ಬಳ ಮಾನಸಿಕ ತಳಮಳಗಳ ಕಥೆ. ಚಿತ್ರದಲ್ಲಿ ನಟಿ ಲಕ್ಷ್ಮಿ ಮನೋಜ್ಞ ಅಭಿನಯ ನೀಡಿದ್ದರು. ಈ ಚಿತ್ರದ ನಂತರ ಕನ್ನಡದಲ್ಲಿ ಅಂಥ ಸೂಕ್ಷ ್ಮ ಕಥೆಯ ಪ್ರಯೋಗಗಳು ನಡೆಯಲಿಲ್ಲ.

ತೆಲುಗು, ತಮಿಳಿನಲ್ಲಿ...

ಇತ್ತೀಚೆಗೆ ತೆಲುಗು ನಟಿಯರಾದ ಅನುಷ್ಕಾ ಶೆಟ್ಟಿ (ವೇದಂ), ಚಾರ್ಮಿ ಕೌರ್‌ ಮತ್ತು ಶ್ರಿಯಾ ಶರಣ್‌ (ಪವಿತ್ರ) ವೇಶ್ಯೆಯರ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಹಿಂದೆ ವೇಶ್ಯೆಯರ ಪಾತ್ರಗಳಿದ್ದ 'ಗುಪ್ಪೇಡು ಮನಸು', 'ಅಂಗಡಿ ಬೊಮ್ಮ', 'ಪ್ರೇಮಾಭಿಷೇಕಂ' ಚಿತ್ರಗಳು ಯಶಸ್ವಿಯಾಗಿದ್ದವು. ಈ ಚಿತ್ರಗಳಲ್ಲಿ ಕ್ರಮವಾಗಿ ಸುಜಾತಾ, ಸೀಮಾ ಮತ್ತು ಜಯಸುಧಾ ವೇಶ್ಯೆಯರಾಗಿ ಗಮನ ಸೆಳೆದಿದ್ದರು. ನಟಿ ಶ್ರಿಯಾಗೆ ಆ ಪಾತ್ರಗಳೇ ಸ್ಫೂತಿರ್ಯಂತೆ. ಅವರು 'ಪವಿತ್ರ' ಚಿತ್ರದ ವೇಶ್ಯೆ ಪಾತ್ರದಲ್ಲಿ ಹೆಸರು ಮಾಡಿದರು. ಇನ್ನು ಚಾಮಿರ್ 'ಪ್ರೇಮಾ ಒಕ ಮೈಕಂ' ಚಿತ್ರದಲ್ಲಿ ವೇಶ್ಯೆಯಾಗಿ ಕಾಣಿಸಿಕೊಂಡರು. ಆಕೆ ಪೂಣರ್ ಪ್ರಮಾಣದ ನಾಯಕಿ ಪಾತ್ರಗಳಿಗಿಂತ ಐಟಂಗಳಲ್ಲೇ ಹೆಸರು ಮಾಡುತ್ತಿದ್ದ ಸಮಯದಲ್ಲಿ ಸಿಕ್ಕ ಪಾತ್ರವಿದು.

ದಕ್ಷಿಣದ ನಾಯಕಿಯರ ಈ ದಿಟ್ಟ ನಿಧಾರ್ರಕ್ಕೆ ಬಾಲಿವುಡ್‌ ಪ್ರೇರಣೆ ಎನ್ನಬಹುದು. ಕಳೆದ ನಾಲ್ಕೈದು ವಷರ್ಗಳಿಂದೀಚೆಗೆ ಅಲ್ಲಿನ ಹಿರೋಯಿನ್‌ಗಳು ದಿಟ್ಟ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಬೋಲ್ಡ್‌ ಪಾತ್ರಗಳಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ, ಕರೀನಾ ಕಪೂರ್‌, ವಿದ್ಯಾಬಾಲನ್‌ ಗೆಲುವು ಇಲ್ಲಿನವರಿಗೂ ಸ್ಫೂತಿರ್ಯಾಗಿದೆ. ಹಿಂದೆ ಕಡಿಮೆ ಬಜೆಟ್‌ನ ಬಿ ಗ್ರೇಡ್‌ ಚಿತ್ರಗಳಲ್ಲಷ್ಟೇ ವೇಶ್ಯೆಯರ ಪಾತ್ರಗಳನ್ನು ಕಾಣಬಹುದಾಗಿತ್ತು. ಇದೀಗ ಸ್ಟಾರ್‌ ನಟಿಯರೂ ಅಂಥ ಪಾತ್ರಗಳಲ್ಲಿ ನಟಿಸಲು ಮುಗಿಬೀಳುತ್ತಿದ್ದಾರೆ. ಸಹಜವಾಗಿಯೇ ಇದು ಪ್ರೇಕ್ಷ ಕರಲ್ಲಿ ಕುತೂಹಲ ಉಂಟುಮಾಡುತ್ತಿದೆ. ಒಂದೆಡೆ ಪ್ರಯೋಗವಾಗಿ ಇದು ಉತ್ತಮ ಪ್ರಯೋಗ. ಮತ್ತೊಂದೆಡೆ ಉದ್ಯಮದ ಮಂದಿ ಬೇರೆ ರೀತಿ ಯೋಚಿಸಲೂ ಸಾಧ್ಯವಾಗುತ್ತದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಅಶ್ಲೀಲ ವಿಡಿಯೋ ತೋರಿಸಿ ಸೆಕ್ಸ್ ಗೆ ಒತ್ತಾಯ, ಮನೆಗೆ ವೇಶ್ಯೆಯರ ಕರೆತಂದು ಅಸಭ್ಯ ವರ್ತನೆ:...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>