Quantcast
Channel: VijayKarnataka
Viewing all articles
Browse latest Browse all 6795

ಕೋಟಿಗೊಬ್ಬ ಚಿತ್ರವಿಮರ್ಶೆ: ಮಾಸ್‌ ಮನಗೆಲ್ಲುವ ಕೋಟಿಗೊಬ್ಬ-2

$
0
0


-ಪದ್ಮಾ ಶಿವಮೊಗ್ಗ

ಮೊದಲ ಬಾರಿಗೆ ಸುದೀಪ್‌ ಅಭಿನಯದ ಚಿತ್ರವೊಂದು ಕನ್ನಡ ಮತ್ತು ತಮಿಳು ಭಾಷೆಗಳೆರಡರಲ್ಲೂ ಏಕಕಾಲದಲ್ಲಿ ರಿಲೀಸ್‌ ಆಗಿದೆ. ಬಹು ನಿರೀಕ್ಷೆ ಮತ್ತು ಕುತೂಹಲ ಹುಟ್ಟಿಸಿದ್ದ 'ಕೋಟಿಗೊಬ್ಬ-2' ಚಿತ್ರ ಅವರ ಅಭಿಮಾನಿಗಳಿಗೆ ನಿರಾಶೆ ಮಾಡುವುದಿಲ್ಲ. ಒಂದಿಷ್ಟು ಸಸ್ಪೆನ್ಸ್‌, ಕಾಮಿಡಿ, ಲವ್‌, ಸೆಂಟಿಮೆಂಟ್‌ ಇರುವ ಚಿತ್ರ ಬೋರ್‌ ಹೊಡೆಸದಿದ್ದರೂ, ಅದ್ಭುತ ಅಂತ ಹೇಳಲೂ ಸಾಧ್ಯವಾಗುವುದಿಲ್ಲ. ಕೊಟ್ಟ ಕಾಸಿಗೆ ಮೋಸವಿಲ್ಲ ಎಂದಷ್ಟೇ ಹೇಳಬಹುದು.

ತಮಿಳಿನ ಹಿರಿಯ ನಿರ್ದೇಶಕ ಕೆ.ಎಸ್‌. ರವಿಕುಮಾರ್‌ ಆ್ಯಕ್ಷನ್‌, ಕಟ್‌ ಹೇಳಿರುವ ಈ ಚಿತ್ರದಲ್ಲಿ ತಮಿಳು ಛಾಯೆ ಇದೆ. ಆದರೆ ಸುದೀಪ್‌ ನಟನೆ ಮೈನಸ್‌ ಪಾಯಂಟ್‌ಗಳನ್ನು ಮರೆಸಿಬಿಡುತ್ತದೆ. ಎರಡು ಕ್ಯಾರೆಕ್ಟರ್‌ಗಳಲ್ಲಿ ಸಿನಿಮಾ ಪೂರ್ತಿ ಅಭಿಮಾನಿಗಳನ್ನು ಅವರು ರಂಜಿಸುತ್ತಾರೆ. ರಿಯಲ್‌ ಎಸ್ಟೇಟ್‌ ಉದ್ಯಮ ನಡೆಸುವ ಸತ್ಯ ಹಾಗೂ ಕೋಟ್ಯಂತರ ರೂಪಾಯಿ ಕಪ್ಪು ಹಣ ಲೂಟಿ ಮಾಡುವ ಶಿವ ಪಾತ್ರಗಳಲ್ಲಿ ಸುದೀಪ್‌ ಮಿಂಚಿದ್ದಾರೆ. ಹೀಗೆ ಎರಡು ಕ್ಯಾರೆಕ್ಟರ್‌ಗಳಲ್ಲಿ ಕಾಣಿಸಿಕೊಳ್ಳುವ ಸುದೀಪ್‌ ಒಬ್ಬರೇನಾ? ಇಬ್ಬರಾ? ಎನ್ನುವುದು ಚಿತ್ರದ ಕುತೂಹಲಕಾರಿ ಅಂಶ.

ಅನಾಥಾಶ್ರಮದಲ್ಲಿ ಸತ್ಯ ಬೆಳೆಯುತ್ತಿರುವಂತೆಯೇ ಇನ್ನೊಂದು ಕಡೆ ಶಿವ ಪಾತ್ರವೂ ರೂಪುಗೊಳ್ಳುತ್ತದೆ. ಶಿವನ ದೃಷ್ಟಿ ದೊಡ್ಡ ದೊಡ್ಡ ಉದ್ದಿಮೆದಾರರ ಮೇಲೆ. ಬ್ಲಾಕ್‌ ಮನಿ ದೋಚುವುದೇ ಅವನ ಕಾಯಕ. ರಿಯಲ್‌ ಎಸ್ಟೇಟ್‌ ದಂಧೆಯ ಕರಾಳ ಮುಖ ಚಿತ್ರದಲ್ಲಿ ಕಾಣುತ್ತದೆ. ಅದರ ಎಲ್ಲ ಕೆಟ್ಟ ಮುಖಗಳೂ ನೋಡುಗರ ಅರಿವಿಗೆ ಬರುತ್ತವೆ. ಸತ್ಯನನ್ನು ಪ್ರೀತಿಸುವ ಶುಭಾ (ನಿತ್ಯಾ ಮೆನನ್‌) ಶಿವನನ್ನು ಸತ್ಯನ ಸಹೋದರ ಎಂದು ನಂಬಿರುತ್ತಾಳೆ. ಇನ್ನು ಚಿತ್ರದಲ್ಲೊಂದು ಅಪ್ಪ- ಮಗನ ಸೆಂಟಿಮೆಂಟ್‌ ಕತೆ ತೆರೆದುಕೊಳ್ಳುತ್ತದೆ. ಇದು ಸುದೀಪ್‌ ಪಾತ್ರದ ಒಳಗುಟ್ಟನ್ನು ರಟ್ಟು ಮಾಡುತ್ತದೆ. ಸುದೀಪ್‌ ಪಾತ್ರ ಎಂಥದ್ದು ಅನ್ನೋದನ್ನು ಚಿತ್ರದಲ್ಲಿ ನೋಡಿ ತಿಳಿಯಬೇಕು.

ಉಳಿದಂತೆ ಚಿತ್ರ ವೇಗವಾಗಿ ಸಾಗುತ್ತದೆ. ಸುದೀಪ್‌ ಪಾತ್ರದಲ್ಲಿ ಹೀರೊಯಿಸಂ ಜೋರಾಗಿದೆ. ನಿತ್ಯಾ ಮೆನನ್‌ ಮತ್ತು ಸುದೀಪ್‌ ನಡುವಿನ ರೋಮ್ಯಾನ್ಸ್‌ ಮೋಡಿ ಮಾಡುತ್ತದೆ. ನಟನೆಯಲ್ಲಿ ನಿತ್ಯಾ ಎಲ್ಲರ ಹೃದಯ ಗೆಲ್ಲುತ್ತಾರೆ. ಎಲ್ಲರನ್ನೂ ಯಾಮಾರಿಸುವ, ವೈವಿಧ್ಯಮಯ ಪಾತ್ರದಲ್ಲಿ ಸುದೀಪ್‌ ಸೂಪರ್‌. ತಂದೆಯಾಗಿ ಪ್ರಕಾಶ್‌ ರೈ ಅವರದ್ದು ಹದವಾದ ನಟನೆ.

ಡಿ. ಇಮಾನ್‌ ಸಂಗೀತ ಸಂಯೋಜನೆಯ ಒಂದೆರಡು ಹಾಡುಗಳು ಚೆನ್ನಾಗಿವೆ. 'ಸಾಲುತ್ತಿಲ್ಲವೇ..' ಹಾಡು ಚೆನ್ನಾಗಿದೆ. ಹಾಡುಗಳ ಚಿತ್ರೀಕರಣವೂ ಸೊಗಸಾಗಿದೆ. ಭರ್ಜರಿ ಡೈಲಾಗ್‌ಗಳಿಗೇನೂ ಕೊರತೆ ಇಲ್ಲ. ಚಿಕ್ಕಣ್ಣ ಪಾತ್ರಕ್ಕೆ ಇನ್ನೂ ಸ್ಕೋಪ್‌ ಬೇಕಾಗಿತ್ತು. ಒಟ್ಟಾರೆಯಾಗಿ ಸುದೀಪ್‌ ಅಭಿಮಾನಿಗಳಿಗೆ ಪಕ್ಕಾ ಮನರಂಜನೆ ನೀಡುವ ಈ ಚಿತ್ರವನ್ನು ವೀಕೆಂಡ್‌ಗೆ ನೋಡಬಹುದು.


Viewing all articles
Browse latest Browse all 6795

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ವಚನಗಳಿಂದ ಸಂಗೀತ ಲೋಕ ಶ್ರೀಮಂತ


Final chapter from Krishnamacharya's Yogasanagalu Part II Pranayam. Plus the...


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಆಲೋಚನೆಗೂ ಕ್ರಿಯೆಯಷ್ಟೇ ಮಹತ್ವವಿದೆ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>