Quantcast
Channel: VijayKarnataka
Viewing all articles
Browse latest Browse all 6795

ತ್ರಿವಳಿಗಳ ಕಾಮಿಡಿ ಡೇ

$
0
0

* ಶರಣು ಹುಲ್ಲೂರು

ಹಳ್ಳಿ ಸೊಗಡಿನ ಹಿನ್ನೆಲೆಯಲ್ಲಿ ಮೂಡಿಬಂದಿರುವ 'ಹ್ಯಾಪಿ ಬರ್ತ್‌ಡೇ' ಸಿನಿಮಾದಲ್ಲಿ ಹತ್ತು ಹಲವು ವಿಶೇಷತೆಗಳಿವೆ ಅನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಈಗಾಗಲೇ ಚಿತ್ರದ ಸಾಂಗ್ಸ್‌ ಹಿಟ್‌ ಆಗಿದ್ದು, ಭಾರತದ ಹೆಸರಾಂತ ಸ್ಟಂಟ್‌ ಮಾಸ್ಟರ್‌ ಕಂಪೋಸ್‌ ಮಾಡಿರುವ ಸಾಹಸ ಸನ್ನಿವೇಶಗಳೂ ಕುತೂಹಲ ಮೂಡಿಸಿವೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಕನ್ನಡದ ಮೂವರು ಟಾಪ್‌ ಕಮಿಡಿಯನ್ಸ್‌ ಈ ಸಿನಿಮಾದಲ್ಲಿ ಒಂದಾಗಿದ್ದಾರೆ. ಹೀಗಾಗಿ ಹ್ಯಾಪಿ ಬರ್ತ್‌ಡೇ ಸಿನಿಮಾದಲ್ಲಿ ಪ್ರೇಕ್ಷಕನಿಗೆ ರಂಜಿಸಲು ಬೇಕಿರುವ ಎಲ್ಲ ಅಂಶಗಳನ್ನೂ ಬೆರೆಸಿ ಚಿತ್ರ ಮಾಡಿದ್ದಾರೆ ನಿರ್ದೇಶಕ ಮಹೇಶ್‌ ಸುಖಧರೆ.

ಸ್ಯಾಂಡಲ್‌ವುಡ್‌ನ ಹಾಸ್ಯ ನಟರಾದ ಸಾಧು ಕೋಕಿಲಾ, ಚಿಕ್ಕಣ್ಣ, ಬುಲೆಟ್‌ ಪ್ರಕಾಶ ಒಂದೇ ಸಿನಿಮಾದಲ್ಲಿ ನಟಿಸಿರುವುದು ತೀರಾ ಅಪರೂಪ. ಎಲ್ಲರೂ ಬಿಝಿ ನಟರಾಗಿದ್ದರಿಂದ, ಇವರನ್ನು ಒಟ್ಟಿಗೆ ಸೇರಿಸುವುದೂ ಕಷ್ಟ. ಆದರೂ, ಮೂವರನ್ನೂ ಒಟ್ಟಾಗಿಸಿ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ರೆಡಿಯಾಗಿದ್ದಾರೆ ನಿರ್ದೇಶಕ.

'ಹ್ಯಾಪಿ ಬರ್ತ್‌ಡೇ ಸಿನಿಮಾದಲ್ಲಿ ಕಾಮಿಡಿಗೂ ಮಹತ್ವ ನೀಡಿದ್ದೇನೆ. ಸಾಧು, ಚಿಕ್ಕಣ್ಣ ಮತ್ತು ಬುಲೆಟ್‌ ಪ್ರಕಾಶ್‌ ಡಿಫರೆಂಟ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರಗಳ ಬಗ್ಗೆ ಹೇಳುವುದಕ್ಕಿಂತ ತೆರೆಯ ಮೇಲೆ ನೋಡಿದರೆ ಚೆಂದ. ನಿಜ ಹೇಳುತ್ತೇನೆ. ಇವರನ್ನು ಒಟ್ಟಿಗೆ ಸೇರಿಸಿ, ಶೂಟಿಂಗ್‌ ಮಾಡುವುದೇ ಒಂದು ಸಾಹಸದ ಕೆಲಸ. ಒಟ್ಟಿಗೆ ಸೇರಿದಾಗ ನಗೆಹಬ್ಬ ಗ್ಯಾರಂಟಿ' ಅಂತಾರೆ ಸುಖಧರೆ.

ಈ ಮೂವರು ನಟರಿಗಾಗಿಯೇ ವಿಶೇಷ ಕಾಸ್ಟ್ಯೂಮ್‌ ಕೂಡ ರೆಡಿ ಮಾಡಿಸಿದ್ದು, ಗೆಟಪ್‌ ಕೂಡ ವಿಭಿನ್ನವಾಗಿದೆ. ಅಲ್ಲದೇ ಸಂಭಾಷಣೆ ಕೂಡ ಫ್ರೆಶ್‌ ಆಗಿದ್ದು, ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇವು ಇಷ್ಟವಾಗಲಿವೆಯಂತೆ.

ಅಂದಹಾಗೆ ಈ ಸಿನಿಮಾದ ಮೂಲಕ ಸಚಿನ್‌ ಮತ್ತ ಸಂಸ್ಕೃತಿ ಎಂಬ ಹೊಸ ನಾಯಕ-ನಾಯಕಿಯನ್ನು ಸಿನಿಮಾ ರಂಗಕ್ಕೆ ಪರಿಚಯಿಸುತ್ತಿದ್ದಾರೆ ನಿರ್ದೇಶಕ. ಇದೇ ತಿಂಗಳು ಕೊನೆಯ ವಾರದಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

-----

ಸಾಧು ಕೋಕಿಲಾ, ಚಿಕ್ಕಣ್ಣ ಮತ್ತು ಬುಲೆಟ್‌ ಪ್ರಕಾಶ್‌ ಅವರಿಗೆ ತಮ್ಮದೇ ಆದಂತಹ ಪ್ರೇಕ್ಷಕರ ವರ್ಗವಿದೆ. ಈ ಮೂವರೂ ಒಟ್ಟಾಗಿ ಕಾಣಿಸಿಕೊಂಡಿದ್ದರಿಂದ ನಿರೀಕ್ಷೆ ಜಾಸ್ತಿ ಆಗಲಿದೆ.

- ಮಹೇಶ್‌ ಸುಖಧರೆ, ನಿರ್ದೇಶಕ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ