Quantcast
Channel: VijayKarnataka
Viewing all articles
Browse latest Browse all 6795

ಇದು 'ಕ್ರೇಜ್‌ ಕ್ರಿಯೇಷನ್‌'

$
0
0

* ಶರಣು ಹುಲ್ಲೂರು

ಕನ್ನಡ ಸಿನಿಮಾರಂಗಕ್ಕೆ ಹೊಸ ನಾಯಕರ ಪ್ರವೇಶ ಆಗುತ್ತಲೇ ಇದೆ. ಅದಕ್ಕೆ ಹೊಸ ಸೇರ್ಪಡೆ 'ಕ್ರೇಜಿ ಬಾಯ್‌' ಚಿತ್ರದ ಹೀರೋ ದಿಲೀಪ್‌ ಪ್ರಕಾಶ್‌. ಈಗಾಗಲೇ ಸ್ಯಾಂಡಲ್‌ವುಡ್‌ಗೆ ಸ್ಟಾರ್‌ ಹೀರೋಗಳನ್ನು ಕೊಟ್ಟಿರುವ ನಿರ್ದೇಶಕ ಮಹೇಶ್‌ ಬಾಬು ಅವರ ಸಿನಿಮಾದ ಮೂಲಕ ದಿಲೀಪ್‌ ಪರಿಚಯ ಆಗುತ್ತಿರುವುದರಿಂದ, ಕ್ರೇಜಿಬಾಯ್‌ ಸಿನಿಮಾ ನಿರೀಕ್ಷೆ ಮೂಡಿಸಿದೆ.

ಜಿ.ಚಂದ್ರು ಈ ಚಿತ್ರಕ್ಕೆ ಹಣ ಹೂಡಿದ್ದು, ದುರ್ಗಾ ಪರಮೇಶ್ವರಿ ಅಮ್ಮ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿಬಂದಿದೆ. ಈಗಾಗಲೇ ರಿಲೀಸ್‌ ಆಗಿರುವ ಟ್ರೇಲರ್‌ ಮತ್ತು ಸಾಂಗ್ಸ್‌ ಸೂಪರ್‌ ಹಿಟ್‌ ಆಗಿವೆ. ಅಲ್ಲದೇ, ಮೇಕಿಂಗ್‌ ಬಗ್ಗೆಯೂ ನೋಡುಗರು ಮಾತನಾಡುತ್ತಿದ್ದಾರೆ. ಇಂದು (ಆ.19) ರಾಜ್ಯಾದ್ಯಂತ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತಿರುವ ಕ್ರೇಜಿಬಾಯ್‌ ಚಿತ್ರವನ್ನು ಪ್ರೇಕ್ಷಕರು ಏಕೆ ನೋಡಬೇಕು, ಚಿತ್ರದ ಯಾವ ಅಂಶಗಳು ನೋಡುಗರ ಮನಸ್ಸನ್ನು ತಟ್ಟಲಿವೆ ಅನ್ನುವ ಕುರಿತು ದಿಲೀಪ್‌ ಖುಷಿಯಿಂದಲೇ ಮಾತನಾಡುತ್ತಾರೆ.

'ಹೇಳಿ ಕೇಳಿ ಇದು ಕಾಲೇಜು ಹುಡುಗರ ಸುತ್ತ ಹೆಣೆದಿರುವ ಕತೆ. ಹೀಗಾಗಿ ಸಹಜವಾಗಿಯೇ ಯೂತ್ಸ್‌ಗೆ ಚಿತ್ರ ಇಷ್ಟವಾಗಲಿದೆ. ಎಲ್ಲರ ಬದುಕಿಗೂ ಹತ್ತಿರವಾಗುವ ಸಾಕಷ್ಟು ವಿಷಯಗಳನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕರು. ಹೀಗಾಗಿ ಯೂತ್ಸ್‌ ಜತೆ ಮನೆಮಂದಿಗೂ ಈ ಸಿನಿಮಾ ಇಷ್ಟವಾಗಲಿದೆ. ಸಾಮಾನ್ಯವಾಗಿ ಇಂತಹ ಚಿತ್ರಗಳನ್ನು ಕಲರ್‌ಫುಲ್‌ ಆಗಿ ಶೂಟ್‌ ಮಾಡುತ್ತಾರೆ. ಹಾಡುಗಳ ಮೂಲಕ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಆದರೆ, ಕ್ರೇಜಿಬಾಯ್‌ ಇವೆಲ್ಲ ಸಿನಿಮಾಗಳಿಗಿಂತ ವಿಭಿನ್ನವಾಗಿದೆ. ಸ್ಕ್ರೀನ್‌ ಪ್ಲೇಗೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ ನಿರ್ದೇಶಕರು. ಈ ಹೊತ್ತಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡಿದ್ದಾರೆ. ಹೀಗಾಗಿ ಮತ್ತಷ್ಟು ಹೊಸ ಪ್ರೇಕ್ಷಕರನ್ನು ಸಿನಿಮಾ ಹುಟ್ಟು ಹಾಕಲಿದೆ' ಅನ್ನುವುದು ದಿಲೀಪ್‌ ಮಾತು.

ಪುನೀತ್‌ ರಾಜ್‌ಕುಮಾರ್‌ ನಟನೆಯ 'ಅರಸು' ಚಿತ್ರದ ನಂತರ ಮಹೇಶ್‌ ಬಾಬು ನಿರ್ದೇಶನದ ಭಾರೀ ಬಜೆಟ್‌ನ ಸಿನಿಮಾ ಇದಾಗಿದೆ. ಅಲ್ಲದೇ, ಶೇಖರ್‌ಚಂದ್ರರ ಸಿನಿಮಾಟೋಗ್ರಫಿ, ಸಂಜು ವೆಡ್ಸ್‌ ಗೀತಾ ಖ್ಯಾತಿಯ ಜೆಸ್ಸಿ ಗಿಫ್ಟ್‌ ಅವರ ಸಂಗೀತ ಕೂಡ ಗಮನ ಸೆಳೆಯಲಿದೆ. ದಕ್ಷಿಣ ಭಾರತದ ಖ್ಯಾತ ಸ್ಟಂಟ್‌ ಮಾಸ್ಟರ್‌ ರವಿವರ್ಮ ಈ ಚಿತ್ರಕ್ಕಾಗಿ ಆರು ಸಾಹಸ ಸನ್ನಿವೇಶಗಳನ್ನು ಕಂಪೋಸ್‌ ಮಾಡಿದ್ದಾರೆ. ಇವೆಲ್ಲವೂ ಸಿನಿಮಾದ ಹೈಲೆಟ್ಸ್‌.

'ಈ ಸಿನಿಮಾದ ಮೂಲಕ ನಾನಷ್ಟೇ ಅಲ್ಲ, ತುಮಕೂರಿನ ಹುಡುಗಿ ಆಶಿಕಾ ಕೂಡ ನಾಯಕಿಯಾಗಿ ಚಿತ್ರರಂಗವನ್ನು ಪ್ರವೇಶ ಮಾಡುತ್ತಿದ್ದಾರೆ. ನಮ್ಮಿಬ್ಬರ ಜೋಡಿಗೆ ಖಂಡಿತ ಗೆಲುವು ಸಿಗಲಿದೆ' ಅಂತಾರೆ ದಿಲೀಪ್‌.

ಮೊದಲ ಸಿನಿಮಾದಲ್ಲೇ ರವಿಶಂಕರ್‌, ರಂಗಾಯಣ ರಘು, ಅನಂತ್‌ನಾಗ್‌, ಸಾಧು ಕೋಕಿಲಾರಂಥ ಹೆಸರಾಂತ ಕಲಾವಿದರ ಜತೆ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ಈ ನಾಯಕ ಹೆಮ್ಮೆ ಪಡುತ್ತಾರೆ. ಕಾಲೇಜು ಹುಡುಗನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರೂ, ಪಾತ್ರವು ವಿಶೇಷವಾಗಿ ಮೂಡಿಬಂದಿದೆಯಂತೆ. ಹೀಗಾಗಿ ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸವೂ ಅವರದ್ದು.

'ಯೂತ್ಸ್‌ಗೆ ಮಾಡಿರುವ ಸಿನಿಮಾ ಅಂದಾಕ್ಷಣ ಡಬಲ್‌ ಮೀನಿಂಗ್‌ ಡೈಲಾಗ್‌ ಇರಲೇಬೇಕು ಅಂತಾಗಿದೆ. ನಮ್ಮ ಸಿನಿಮಾದಲ್ಲಿ ಯಾವುದೇ ರೀತಿ ಡಬಲ್‌ ಮೀನಿಂಗ್‌ ಸಂಭಾಷಣೆ ಇಲ್ಲ. ಎರಡೂ ಕಾಲು ಗಂಟೆ ಭರ್ಜರಿ ಮನರಂಜನೆ ಬೇಕು ಅಂತ ಬಂದವರಿಗೆ ಖಂಡಿತ ಸಿನಿಮಾ ಮೋಸ ಮಾಡುವುದಿಲ್ಲ. ನೋಡುವ ಪ್ರತಿಯೊಬ್ಬರಿಗೂ ತಮ್ಮ ಕಾಲೇಜು ಜೀವನ ಕನೆಕ್ಟ್ ಆಗುವುದರಲ್ಲಿ ಅನುಮಾನವಿಲ್ಲ. ಅಲ್ಲದೇ, ಸಿನಿಮಾದ ದ್ವಿತಿಯಾರ್ಧದಲ್ಲಿ ಸಾಕಷ್ಟು ಸೆಂಟಿಮೆಂಟ್‌ ದೃಶ್ಯಗಳಿವೆ. ಅದರಲ್ಲೂ ತಂದೆ ಮತ್ತು ಮಗನ ಬಾಂಧವ್ಯವನ್ನು ನಿರ್ದೇಶಕರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ' ಅನ್ನುವುದು ದಿಲೀಪ್‌ ಮಾತು.

-----

ದಿಲೀಪ್‌ ಪ್ರಕಾಶ್‌ಗೆ ಕನ್ನಡ ಭಾಷೆಯಲ್ಲಿ ಹಿಡಿತವಿದೆ. ಅಲ್ಲದೇ ಪಾತ್ರಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಾರೆ. ಹೀಗಾಗಿ ಈ ಹುಡುಗನಿಗೆ ಒಳ್ಳೆಯ ಭವಿಷ್ಯವಿದೆ. ಕ್ರೇಜಿ ಬಾಯ್‌ ಅನ್ನುವ ಉತ್ತಮ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪರಿಚಯ ಮಾಡುತ್ತಿರುವುದಕ್ಕೆ ನನಗೂ ಖುಷಿ ಇದೆ.

- ಮಹೇಶ್‌ ಬಾಬು, ನಿರ್ದೇಶಕ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>