Quantcast
Channel: VijayKarnataka
Viewing all articles
Browse latest Browse all 6795

ರಿಯೊ ಒಲಿಂಪಿಕ್ಸ್‌ಗೆ ಆಳ್ವಾಸ್‌ನ ದಾರುಣ್‌

$
0
0

ರಿಲೇಯಲ್ಲಿ ಕರ್ನಾಟಕದಿಂದ ಏಕೈಕ ಓಟಗಾರ /ಆಳ್ವಾಸ್‌ನಿಂದ 1 ಲಕ್ಷ ನಗದು ಪುರಸ್ಕಾರ

ಮೂಡುಬಿದಿರೆ: ಆಳ್ವಾಸ್‌ ಕಾಲೇಜಿನ ಹೆಮ್ಮೆಯ ಕ್ರೀಡಾಪಟು ದಾರುಣ್‌ ಅಯ್ಯಸ್ವಾಮಿ ಆಗಸ್ಟ್‌ 5ರಿಂದ ಆರಂಭಗೊಳ್ಳಲಿರುವ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ.

ಮೂಲತಃ ತಮಿಳುನಾಡಿನ ತಿರುಪುರ್‌ ಜಿಲ್ಲೆಯವರಾದ ದಾರುಣ್‌ ಅವರು 4 * 400 ಮೀಟರ್‌ ರಿಲೇಯಲ್ಲಿ ಸ್ಪರ್ಧಿಸಲು ಭಾರತ ತಂಡವನ್ನು ಪ್ರತಿನಿಧಿಸಲಿರುವ ಆರು ಆಟಗಾರರ ಪೈಕಿ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಕ್ರೀಡಾಪಟು. ಇವರು ಪ್ರಸ್ತುತ ಆಳ್ವಾಸ್‌ನ ಬಿಹೆಚ್‌ಆರ್‌ಡಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದು ಆಳ್ವಾಸ್‌ನ ಕ್ರೀಡಾ ದತ್ತು ಯೋಜನೆಯಡಿ ಉಚಿತ ಶಿಕ್ಷ ಣ ಪಡೆಯುತ್ತಿದ್ದಾರೆ.

20 ವರ್ಷವ ಪ್ರಾಯದ ದಾರುಣ್‌ ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಆಟಗಾರರ ಪೈಕಿ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದಾರೆ. ಇವರು ಇತ್ತೀಚೆಗೆ ಗುವಾಹಟಿಯಲ್ಲಿ ನಡೆದ ಏಷಿಯನ್‌ ಗೇಮ್ಸ್‌ನಲ್ಲಿ 400 ಮೀ. ಓಟದಲ್ಲಿ ಚಿನ್ನದ ಪದಕ ಪಡೆದಿದ್ದರು. ಅಲ್ಲದೆ ಕಳೆದ ವರ್ಷದ ಅಖಿಲ ಭಾರತ ಅಥ್ಲೆಟಿಕ್ಸ್‌ನ 400 ಮೀಟರ್‌ ಓಟದಲ್ಲಿ ಚಿನ್ನ, ಹರ್ಡಲ್ಸ್‌ನಲ್ಲಿ ಕೂಟ ದಾಖಲೆ ಮತ್ತು ಚಿನ್ನ ಗೆದ್ದು ದಾಖಲೆಯನ್ನು ಬರೆದಿದ್ದಾರೆ. 400 ಮೀಟರ್‌ ಓಟವನ್ನು 46.31 ಸೆಕೆಂಡ್ಸ್‌ನಲ್ಲಿ ಗುರಿಮುಟ್ಟಿರುವುದು ದಾರುಣ್‌ ಅವರ ಜೀವನ ಶ್ರೇಷ್ಠ ಸಾಧನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಂಟು ಬಾರಿ ಬೇರೆ ಬೇರೆ ಪದಕಗಳನ್ನು ಗಳಿಸಿ ದೇಶಕ್ಕೆ ಕೀರ್ತಿ ತಂದ ಹೆಗ್ಗಳಿಕೆ ಇವರದ್ದು.

ಆಳ್ವಾಸ್‌ನಿಂದ 1 ಲಕ್ಷ ರೂ. ಪುರಸ್ಕಾರ

ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ದಾರುಣ್‌ಗೆ ಆಳ್ವಾಸ್‌ ಶಿಕ್ಷ ಣ ಪ್ರತಿಷ್ಠಾನದ ವತಿಯಿಂದ ಒಂದು ಲಕ್ಷ ನಗದು ಪುರಸ್ಕಾರವನ್ನು ಡಾ.ಎಂ. ಮೋಹನ್‌ ಆಳ್ವ ನೀಡಿದ್ದಾರೆ. ಅಲ್ಲದೆ ತರಬೇತಿಗಾಗಿ ಪ್ರತಿ ತಿಂಗಳು ಸುಮಾರು ರೂ. 20 ಸಾವಿರ ಸಂಸ್ಥೆ ಖರ್ಚು ಮಾಡಿದೆ. ದಾರುಣ್‌ ಜತೆಗೆ ಸಂಸ್ಥೆಯ ಪ್ರಾಯೋಜಿತ ವಿದ್ಯಾರ್ಥಿ ಇಂದ್ರಜಿತ್‌, ಹಳೆ ವಿದ್ಯಾರ್ಥಿಗಳಾದ ಪೂವಮ್ಮ ಹಾಗೂ ಅಶ್ವಿನಿ ಅಕ್ಕುಂಜೆ ಕೂಡ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದು ಇವರ ಉತ್ತಮ ನಿರ್ವಹಣೆಯಿಂದ ದೇಶಕ್ಕೆ ಹಾಗೂ ಅಳ್ವಾಸ್‌ ಸಂಸ್ಥೆಗೆ ಕೀರ್ತಿ ಬರಲಿದೆ. ಮೂಡುಬಿದಿರೆಯಲ್ಲಿ ಏಕಲವ್ಯ ಕ್ರಿಡಾಸಂಸ್ಥೆಯನ್ನು ಹುಟ್ಟು ಹಾಕಿ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದಾಗಲೇ ಭವಿಷ್ಯದಲ್ಲಿ ಒಲಂಪಿಕ್‌ನಲ್ಲಿ ಕ್ರೀಡಾಪಟುಗಳು ಭಾಗವಹಿಸುವ ಕನಸು ಕಂಡಿದ್ದೆ. ಅದು ಈಗ ಆಳ್ವಾಸ್‌ ಸಂಸ್ಥೆಯ ಮೂಲಕ ಈಡೇರಿದೆ ಎಂದು ಡಾ.ಎಂ. ಮೋಹನ ಅಳ್ವ ಹರ್ಷ ವ್ಯಕ್ತಪಡಿಸಿದ್ದಾರೆ.

ತಂದೆಯಂತೆ ಸಾಕಿ ಪ್ರೋತ್ಸಾಹಿಸಿದರು: ದಾರುಣ್‌

ಬೆಂಗಳೂರು: ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಭಾರತ ರಿಲೇ ತಂಡದಲ್ಲಿ ಸ್ಥಾನ ಪಡೆದಿರುವ ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಎರಡನೇ ವರ್ಷದ ಪದವಿ ವಿದ್ಯಾರ್ಥಿಯಾಗಿರುವ ದಾರುಣ್‌ ಸಂಸ್ಥೆಯ ಅಧ್ಯಕ್ಷರು ಹಾಗೂ ಕ್ರೀಡಾ ಪೋಷಕರಾಗಿರುವ ಡಾ. ಮೋಹನ್‌ ಆಳ್ವಾ ಅವರಿಗೆ ತಾನು ಚಿರಋುಣಿಯಾಗಿರುವುದಾಗಿ ಹೇಳಿದ್ದಾರೆ.

ಸೋಮವಾರ ವಿಜಯಕರ್ನಾಟಕದೊಂದಿಗೆ ಮಾತನಾಡಿದ ದಾರುಣ್‌, ''ನಾನು ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡೆ, ಆದರೆ ಕ್ರೀಡೆ ನನಗೆ ತಂದೆ ಸಮಾನರಾದ ಡಾ. ಮೋಹನ್‌ ಅಳ್ವಾ ಅವರನ್ನು ನೀಡಿತು. ನನ್ನ ಪ್ರತಿಯೊಂದು ಕಷ್ಟ ಸುಖಗಳಿಗೂ ಅವರು ಸ್ಪಂದಿಸಿದ್ದಾರೆ. ಬದುಕಿನಲ್ಲಿ ಹಲವಾರು ಅವಕಾಶಗಳು ಬಂದಿವೆ,ಆದರೆ ನಾನು ಆಳ್ವಾಸ್‌ನಲ್ಲೇ ಇರುತ್ತೇನೆ ಎಂಬ ತೀರ್ಮಾನ ಕೈಗೊಂಡಿದ್ದೇನೆ. ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿ ದೇಶದ ಜತೆಯಲ್ಲೇ ಆಳ್ವಾಸ್‌ಗೂ ಕೀರ್ತಿ ತಂರಬೇಕೆಂಬುದು ನನ್ನ ಆಸೆ,'' ಎಂದಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಾಧ್ಯತೆಯ ಬಗ್ಗೆ ಮಾತನಾಡಿದ ದಾರುಣ್‌, ''ಈ ಬಾರಿ ಎರಡು ಸಲ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದೇವೆ, ವಿಶ್ವದಲ್ಲಿ ಎರಡನೇ ರಾರ‍ಯಂಕ್‌ ಹೊಂದಿದ್ದೇವೆ, ಆದ್ದರಿಂದ ಪದಕ ಗೆಲ್ಲುತ್ತೇವೆಂಬ ಆತ್ಮವಿಶ್ವಾಸವಿದೆ,'' ಎಂದರು.

''ಮೋಹನ್‌ ಅಳ್ವಾ ಅವರು ನನ್ನ ಕ್ರೀಡಾ ಚಟುವಟಿಕೆಗಾಗಿ ಪ್ರತಿ ತಿಂಗಳು 20,000 ರೂ. ನೀಡುತ್ತಿದ್ದಾರೆ. ಎಲ್ಲಿಗಾದರೂ ಹೋಗಬೇಕಿದ್ದರೆ ವಿಮಾನದಲ್ಲೇ ಕಳುಹಿಸುತ್ತಾರೆ. ಈ ದೇಶದಲ್ಲಿ ಕ್ರೀಡಾಪಟುವೊಬ್ಬರಿಗೆ ಈ ರೀತಿಯ ಸೌಲಭ್ಯವನ್ನು ಒಬ್ಬ ವ್ಯಕ್ತಿ ನೀಡುತ್ತಿರುವುದು ಅಪೂರ್ವ,'' ಎಂದರು.

ಬದ್ಧತೆಯಿಂದ ಕೂಡಿದ ಕ್ರೀಡಾಪಟು: ಡಾ. ಅಳ್ವಾ

ಕ್ರೀಡಾಪಟುಗಳಲ್ಲಿ ಬದ್ಧತೆ ಮುಖ್ಯವಾಗಿರಬೇಕು. ದಾರುಣ್‌ ಅವರಲ್ಲಿ ಬದ್ಧತೆ, ಶಿಸ್ತು, ಗೆಲ್ಲುವ ಛಲ ಇದು ಮನೆ ಮಾಡಿದೆ. ಈ ಕಾರಣಕ್ಕಾಗಿಯೇ ಈ ಚಿಕ್ಕ ವಯಸ್ಸಿನಲ್ಲೇ ಆತ ಒಲಿಂಪಿಕ್ಸ್‌ಗೆ ಆಯ್ಕೆಯಾಗಲು ಕಾರಣವಾಯಿತು ಎಂದು ಡಾ. ಮೋಹನ್‌ ಅಳ್ವಾ ವಿಜಯಕರ್ನಾಟಕಕ್ಕೆ ತಿಳಿಸಿದ್ದಾರೆ.

''ದಾರುಣ್‌ಗೆ ಹಲವು ಬಾರಿ ಕೆಲಸದ ಅವಕಾಶ ಸಿಕ್ಕಿತು, ಆದರೆ ಆಳ್ವಾಸ್‌ ಸಂಸ್ಥೆಯನ್ನು ಬಿಟ್ಟು ನಾನು ಹೋಗುವುದಿಲ್ಲ ಎಂದು ಹಠ ಹಿಡಿಯುತ್ತಾನೆ. ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಿ ಆ ಮೂಲಕ ಆಳ್ವಾಸ್‌ಗೆ ಕೀರ್ತಿ ತರಬೇಕು ಎಂಬುದು ದಾರುಣ್‌ ಆಶಯ, ಅದಕ್ಕಾಗಿ ಎಲ್ಲ ರೀತಿಯ ನೆರವು ನೀಡುತ್ತೇವೆ,'' ಎಂದರು.

750 ಕ್ರೀಡಾಪಟುಗಳಿಗೆ ಉಚಿತ ಶಿಕ್ಷಣ

ದೇಶದಲ್ಲಿ ಯಾವುದೇ ವಿಶ್ವವಿದ್ಯಾನಿಲಯ ಮಾಡದಂಥ ಕೆಲಸವನ್ನು ಅಳ್ವಾಸ್‌ ಶಿಕ್ಷಣ ಸಂಸ್ಥೆ ಕ್ರೀಡಾಪಟುಗಳಿಗಾಗಿ ಮಾಡುತ್ತಿದೆ. ಈಗಾಗಲೇ ಸಂಸ್ಥೆಯಲ್ಲಿ 750 ಮಂದಿ ಕ್ರೀಡಾಪಟುಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವುದು ವಿಶೇಷ. ಗ್ರಾಮೀಣ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಅಳ್ವಾಸ್‌ ಶಿಕ್ಷಣ ಸಂಸ್ಥೆ ದೇಶದ ಕ್ರೀಡಾ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡಿರುವುದು ಸ್ಪಷ್ಟ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>