Quantcast
Channel: VijayKarnataka
Viewing all articles
Browse latest Browse all 6795

ಮೊಹಮ್ಮದ್ ಶಹೀದ್ ಯಾವತ್ತಿಗೂ 'ಜಿಲೇಬಿ ಮ್ಯಾನ್'

$
0
0

ಅಗಲಿದ ಭಾರತದ ಹಾಕಿ ಮಾಂತ್ರಿಕ ಶಹೀದ್ ನೆನಪಿಗೆ ಕಣ್ಣೀರಾಗುತ್ತೇನೆ, ಆತ ಯಾವತ್ತಿದ್ದರೂ 'ದಿ ಜಿಲೇಬಿ ಮ್ಯಾನ್'.

ತವಾದಲ್ಲಿ ಜಿಲೇಬಿಯನ್ನು ತಿರುಗಿಸುವಂತೆ ಮೈದಾನದಲ್ಲಿ ಆತ ಹಾಕಿ ಸ್ಟಿಕ್ ತಿರುಗಿಸುತ್ತಿದ್ದ ಮತ್ತು ಆಟ ಆಡುತ್ತಿದ್ದ ಶೈಲಿಯೇ ಅದ್ಭುತ. ಹೀಗಾಗಿ ಶಹೀದ್ ಎಂದೆಂದಿಗೂ ಹಾಕಿ ಹೀರೋ ಆಗಿ ಉಳಿಯುವವರು.

ಸಮಯದ ಪರಿವೆಯೇ ಇಲ್ಲದೆ ಹಾಕಿಗಾಗಿ ಸಿದ್ಧತೆ ನಡೆಸುತ್ತಿದ್ದವ ಶಹೀದ್. ಮುಂಬಯಿನಲ್ಲಿ 1982ರಲ್ಲಿ ನಡೆದ ವಿಶ್ವಕಪ್‌ ಹಾಕಿ ಪಂದ್ಯದಲ್ಲಿ ಶಹೀದ್ ಮತ್ತು ಜಾಫರ್ ಚಮತ್ಕಾರವನ್ನು ನನ್ನ ಆಪ್ತ ಸ್ನೇಹಿತ ಸೈನಿ ಜತೆ ವೀಕ್ಷಿಸಿದ್ದೆ. ಚೆಂಡು ತಿರುಗಿಸುವ ಮತ್ತು ಸ್ಟಿಕ್‌ನ ಅದ್ಭುತ ಕೈಚಳಕವನ್ನು ಎಂ.ಎಫ್ ಹುಸೇನ್ ಕೂಡ ಶ್ಲಾಘಿಸಿದ್ದರು.ಮಿರ್ಜಾ ಗಾಲಿಬ್, ಶಮ್ಮಿ ಕಪೂರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರು ಯಾರೂ ಹಾಕಿ ಆಟಗಾರರು ಅಲ್ಲ. ಅವರು ಹಾಕಿಯನ್ನು ಚಿತ್ರಿಸಿದರು, ಸಂಯೋಜಿಸಿದರು ಮತ್ತು ಡಾನ್ಸ್ ಮಾಡಿದರು. ಇದಕ್ಕೆ ಶಹೀದ್ ಯಾವತ್ತಿಗೂ 'ಜಿಲೇಬಿ ಮ್ಯಾನ್'.

1984ರಲ್ಲಿ ನಾವು ಒಲಿಂಪಿಕ್‌ ಗೋಲ್ಡ್ ಗೆಲ್ಲಬೇಕಿತ್ತು. ಆ ವೇಳೆ ಮಾರ್ಚ್‌ ಫಾಸ್ಟ್‌ನಲ್ಲಿ ಸುಂದರ ಹಾಗೂ ಸೊಗಸುಗಾರ ಜಾಫರ್ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದ್ದರು. ಆದರೆ ಜರ್ಮನ್ ಅನ್ನು ಮಣಿಸಲಾಗದೆ ಕ್ವಾರ್ಟರ್ ಫೈನಲ್‌ನಿಂದ ಹೊರ ಬಂದೆವು. ಆ ದಿನ ರಾತ್ರಿ ಶಹೀದ್ ಮತ್ತು ಜಾಫರ್ ಕಣ್ಣೀರಿಟ್ಟಿದ್ದರು.

1985ರಲ್ಲಿ ಪಾಕಿಸ್ತಾನ ಏಳು ಚಾರಿತ್ರಿಕ ಪಂದ್ಯಗಳಿಗಾಗಿ ಪ್ರವಾಸ ಮಾಡಿತ್ತು. ಶಹೀದ್ ಮತ್ತು ಹಸನ್ ಸರ್ದಾರ್ ಜಗತ್ತಿನ ಅತ್ಯುತ್ತಮ ಹಾಕಿ ಪಟುಗಳಾಗಿದ್ದರು. ಭಾರತ ಮತ್ತು ಪಾಕಿಸ್ತಾನ ಹಾಕಿಯಲ್ಲಿ ಅಗ್ರಗಣ್ಯ ರಾಷ್ಟ್ರಗಳಾಗಿದ್ದವು.

ಚಿನ್ನ ಗೆದ್ದ 1980 ನಮ್ಮ ಹಾಕಿ ಕ್ಷೇತ್ರ ಆಶಾದಾಯಕವಾಗಿ ಇರಲಿಲ್ಲ. 1984 ಪರವಾಗಿರಲಿಲ್ಲ, 1996 ಕೂಡ ಪರವಾಗಿರಲಿಲ್ಲ. 1988ರಲ್ಲಿ ಶಹೀದ್ ಅವರ ಮಗಳಿಗೆ ಅನಾರೋಗ್ಯ ಕಾಡಿದ್ದರಿಂದ ಅನುಭವಿಸಿದ ನೋವು ಹಾಕಿ ವರ್ಚಸ್ಸನ್ನೂ ಮಬ್ಬುಗೊಳಿಸಿತು. ಶಹೀದ್ ಮತ್ತು ಜಾಫರ್ ಯಾವತ್ತೂ ನನ್ನ ಮತ್ತು ಭಾರತದ ಹೃದಯಗಳಲ್ಲಿ ಇರುತ್ತಾರೆ ಎಂಬುದು ಸತ್ಯ.

-ಟಾಮ್ ಅಟ್ಲೆರ್

ಪದ್ಮಶ್ರೀ ಪುರಸ್ಕೃತ ಟಾಮ್ ಅಟ್ಲೆರ್ ಒಬ್ಬ ನಟ, ಕ್ರೀಡಾ ವಿಶ್ಲೇಷಕ. ಭಾರತದಲ್ಲಿ ಟ್ರೈಯಥ್ಲಾನ್ ಪ್ರವರ್ತಕರೂ ಹೌದು. 'ದಿ ಲಾಂಗೆಸ್ಟ್ ರೇಸ್' ಕಾದಂಬರಿ ಸೇರಿದಂತೆ ಮೂರು ಪುಸ್ತಕಗಳನ್ನೂ ಬರೆದಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>