Quantcast
Channel: VijayKarnataka
Viewing all articles
Browse latest Browse all 6795

ಆಷಾಢ ಪೌರ್ಣಿಮೆ ಮತ್ತು ಮಳೆ

$
0
0

- ಶ್ರೀಪಾದ ಆರ್‌. ಕುಲಕರ್ಣಿ

ಆಷಾಢ ಮಾಸದ ಶುಕ್ಷ ಪಕ್ಷದ ಅಂತಿಮ ತಿಥಿ ಅಂದರೆ ಹುಣ್ಣಿಮೆಯಂದು ರಾತ್ರಿಯ ಪ್ರಾರಂಭಕಾಲ ಅಂದರೆ ಸಂಧ್ಯಾಕಾಲದಲ್ಲಿ ಪೂರ್ವದ ಗಾಳಿ ಬೀಸಿದರೆ ಮಳೆ ಸುರಿಯುವುದು ಖಚಿತ. ಪೂರ್ವದ ಗಾಳಿ ಮತ್ತು ಹುಣ್ಣಿಮೆಯ ಯೋಗವು ಧಾನ್ಯಗಳ ಉತ್ಪತ್ತಿಗೆ ಅತ್ಯುತ್ಕೃಷ್ಟವಾಗಿದೆ.

ಆಷಾಢ ಪೌರ್ಣಿಮೆಯ ಸಾಯಂಕಾಲ ಆಗ್ನೇಯದ ಗಾಳಿ ಬೀಸಿದರೆ ಭೂಮಿಯು ಅಗ್ನಿದಾಹದಿಂದ ಪರಿತಪಿಸುತ್ತದೆ ಮತ್ತು ಬೂದಿ ಉತ್ಪನ್ನವಾಗುತ್ತದೆ. ಸಾಯಂಕಾಲ ಹೊತ್ತಿನಲ್ಲಿ ದಕ್ಷಿಣದ ಗಾಳಿಯು ಬೀಸುತ್ತ ಮೋಡಗಳನ್ನು ತಿರುಗಿಸುತ್ತ ಮುನ್ನಡೆದರೆ ತುಂತುರು ಮಳೆಯಾಗುವುದು. ಜತೆಗೆ ಭೂಲೋಕದಲ್ಲಿ ಭೀತಿ ಉತ್ಪನ್ನವಾಗುತ್ತದೆ. ಅನಾವೃಷ್ಟಿ, ಪ್ರಜೆಗಳಿಗೆ ತೊಂದರೆ, ಬೆಲೆ ಏರಿಕೆ ಉಂಟಾಗುತ್ತವೆ. ಆ ದಿನ ಸಂಜೆ ನೈಋುತ್ಯದಿಂದ ಗಾಳಿಯು ಬೀಸಿದರೆ ಮೋಡಗಳಲ್ಲಿ ನೀರಿರುವುದಿಲ್ಲ. ಅಂದರೆ ಮಳೆಯಾಗುವುದಿಲ್ಲ. ಅನಾವೃಷ್ಟಿ, ದುರ್ಭಿಕ್ಷ,ಭಯದ ವಾತಾವರಣುಂಟಾಗುತ್ತದೆ. ಭೂಮಿಯು ಮುಂಡಮಾಲೆ ಧರಿಸಿ ಅಳುತ್ತಿರುವಂತೆ ಕಂಡು ಬರುತ್ತಾಳೆ.

ಆಷಾಢ ಪೌರ್ಣಿಮೆಯ ದಿನ ಸಂಜೆ ಪಶ್ಚಿಮದಿಂದ ಗಾಳಿ ಧೂಳಿನ ಕಣಗಳನ್ನು ಹಾರಿಸುತ್ತ ಬೀಸಿದರೆ ಅತಿವೃಷ್ಟಿಯಾಗುತ್ತದೆ. ಜನ, ಧನ, ಸೇನಾ ಬಲಾದಿಗಳು ನಾಶವಾಗುತ್ತವೆ. ಫಲಭರಿತವಾಗುತ್ತವೆ. ಈ ದಿನದ ಸಂಧ್ಯಾಕಾಲದಲ್ಲಿ ವಾಯವ್ಯ ದಿಕ್ಕಿನಿಂದ ಗಾಳಿ ಬೀಸಿದರೆ, ಹೇರಳವಾಗಿ ಮಳೆಯಾಗುತ್ತದೆ. ಮೇಲಿಂದ ಮೇಲೆ ಮಳೆಯಾಗುವುದರಿಂದ ವೃಕ್ಷಗಳು ಫಲಭರಿತವಾಗುತ್ತವೆ. ಈ ದಿನ ಸಾಯಂ ಸಂಧ್ಯಾಕಾಲದಲ್ಲಿ ಸೂರ್ಯಾಸ್ತದ ಸಮಯದಲ್ಲಿ ಉತ್ತರ ದಿಕ್ಕಿನಿಂದ ಗಾಳಿ ಬೀಸಿದರೆ ಭಯಂಕರ ಗುಡುಗು ಸಿಡಿಲಿನೊಂದಿಗೆ ಭಾರಿ ಮಳೆಯಾಗುತ್ತದೆ. ಸೂರ್ಯನು ಮುಳುಗುವ ಸಮಯದಲ್ಲಿ ಮಾತ್ರ ಈ ಯೋಗವು ಫಲಕಾರಿಯಾಗುತ್ತದೆ. ಸೂರ್ಯಾಸ್ತದ ನಂತರ ಹೆಚ್ಚು ಪ್ರಭಾವಶಾಲಿಯಾಗುವುದಿಲ್ಲ.

ಸೂರ್ಯನು ಮುಳುಗುತ್ತಿರುವಾಗ ಈಶಾನ್ಯ ದಿಕ್ಕಿನಿಂದ ಗಾಳಿ ಬೀಸಿದರೆ ಸುವೃಷ್ಟಿಯಾಗುತ್ತದೆ. ಭೂಮಿಯು ಹಸಿರಿನಿಂದ ಕಂಗೊಳಿಸುತ್ತದೆ. ಧಾನ್ಯಗಳ ಇಳುವರಿ ಚೆನ್ನಾಗಿರುತ್ತದೆ. ಗೋ ಸಂತಾನ ವೃದ್ಧಿಯಾಗುತ್ತದೆ.

ಮಂಗಲನು ಸೂರ್ಯನೊಂದಿಗೆ ಒಂದೇ ರಾಶಿಯಲ್ಲಿದ್ದರೆ ಅಥವಾ ಸಿಂಹರಾಶಿಯಲ್ಲಿ ಮಂಗಲನೊಬ್ಬನೇ ಇದ್ದರೆ ಮೋಡಗಳು ದೂರದಲ್ಲಿ ಕಾಣಿಸುತ್ತವೆ. ಮಳೆಯಾಗುವುದಿಲ್ಲ. ಸೂರ್ಯ-ಮಂಗಲ ಯೋಗವು ವೃಷ್ಟಿ ವಿನಾಶಕವಾಗುತ್ತದೆ.

ಕೃಷ್ಣಪಕ್ಷದ ಅಷ್ಟಮಿ, ಚತುರ್ದಶಿ, ಅಮಾವಾಸ್ಯೆಗಳಂದು ಶುಕ್ರನು ಉದಯ ಅಥವಾ ಅಸ್ತವಾದರೆ ಹೇರಳ ಮಳೆಯಾಗುತ್ತದೆ. ಬುಧ-ಗುರು ಒಂದೇ ರಾಶಿಯಲ್ಲಿದ್ದರೆ ಮಳೆ ಚೆನ್ನಾಗಿ ಬೀಳುತ್ತದೆ. ಅದೇ ರಾಶಿಯಲ್ಲಿ ಸೂರ್ಯ ಅಥವಾ ಮಂಗಲರು ಜತೆಯಾದರೆ ಅನಾವೃಷ್ಟಿ ಉಂಟಾಗುತ್ತದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>