Quantcast
Channel: VijayKarnataka
Viewing all articles
Browse latest Browse all 6795

ಕೆಎಸ್‌ಸಿಎಗೆ ಲೋಧಾ ಎಫೆಕ್ಟ್‌?

$
0
0

ಚುನಾವಣಾ ಸಿದ್ಧತೆಯಲ್ಲಿ ರಾಜ್ಯ ಕ್ರಿಕೆಟ್‌ ಸಂಸ್ಥೆ | 6 ತಿಂಗಳಲ್ಲಿ ಎದುರಾಗಲಿದೆ ಮತ್ತೊಂದು ಎಲೆಕ್ಷನ್‌?

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಯ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆಗೆ ಆಗಸ್ಟ್‌ 7ರಂದು ಚುನಾವಣೆ ನಿಗದಿಯಾಗಿದೆ. ಆದರೆ ನ್ಯಾ.ಲೋಧಾ ಶಿಫಾರಸುಗಳನ್ನು 6 ತಿಂಗಳ ಒಳಗೆ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್‌ ಮಾಡಿರುವ ಕಟ್ಟಪ್ಪಣೆ ಮುಂದಿನ ದಿನಗಳಲ್ಲಿ ರಾಜ್ಯ ಕ್ರಿಕೆಟ್‌ನಲ್ಲೂ ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಿದೆ.

ಭಾರತದಲ್ಲಿ ಕ್ರಿಕೆಟ್‌ ಸುಧಾರಣೆಗಾಗಿ ನ್ಯಾ.ಲೋಧಾ ಶಿಫಾರಸುಗಳನ್ನು ಆರು ತಿಂಗಳುಗಳೊಳಗಾಗಿ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್‌ ಬಿಸಿಸಿಐಗೆ ಸೋಮವಾರ ಖಡಕ್‌ ಸೂಚನೆ ನೀಡಿತ್ತು. ಈ ಶಿಫಾರಸುಗಳಲ್ಲಿ ಅಡಕವಾಗಿರುವ '70 ವರ್ಷಕ್ಕಿಂತ ಮೇಲ್ಪಟ್ಟವರು ಕ್ರಿಕೆಟ್‌ ಸಂಸ್ಥೆಗಳಲ್ಲಿ ಅಧಿಕಾರ ಹೊಂದಿರುವಂತಿಲ್ಲ' ಎಂಬ ಅಂಶ ಹಾಗೂ 'ಒಂದು ಆಡಳಿತಾವಧಿಯ ನಂತರ ಮತ್ತೊಂದು ಅವಧಿಗೆ ಸ್ಪರ್ಧಿಸುವ ಮುನ್ನ ಕೂಲಿಂಗ್‌ ಆಫ್‌ ಅವಧಿಯನ್ನು ಕಡ್ಡಾಯವಾಗಿ ಪಾಲಿಸಬೇಕು' ಅಂಶ ರಾಜ್ಯ ಕ್ರಿಕೆಟ್‌ನ ದೊಡ್ಡ ದೊಡ್ಡ ಹೆಸರುಗಳಿಗೆ ಮುಳ್ಳಾಗಲಿದೆ.

ಕೆಎಸ್‌ಸಿಎನ ಹಾಲಿ ಅಧ್ಯಕ್ಷ ಅಶೋಕಾನಂದ್‌, ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್‌, ಖಜಾಂಚಿ ದಯಾನಂದ ಪೈ, ಉಪಾಧ್ಯಕ್ಷ ಸುಧಾಕರ್‌ ರಾವ್‌, ಆಡಳಿತ ಮಂಡಳಿಯ ಸದಸ್ಯರಾದ ದೊಡ್ಡ ಗಣೇಶ್‌, ರಘುರಾಮ್‌ ಭಟ್‌, ಮಂಜುನಾಥ್‌ ವಿ.ಎಂ., ಶ್ರೀನಿವಾಸ್‌ ಮೂರ್ತಿ ಎನ್‌.ಎಸ್‌., ಮಲ್ಲಿಕಾರ್ಜುನ ಸ್ವಾಮಿ, ಲಚ್ಮನ್‌ ಕೆ. ಮೆಹ್ತಾನಿ ಮತ್ತೆ ಚುನಾವಣೆಗೆ ಸ್ಪರ್ಧಿಸಿ ಪುನರಾಯ್ಕೆಯಾದರೂ ಇವರ ಅಧಿಕಾರ 6 ತಿಂಗಳಿಗೆ ಮೊಟಕುಗೊಳ್ಳಲಿದೆ. 6 ತಿಂಗಳಲ್ಲಿ ಲೋಧಾ ಶಿಫಾರಸು ಜಾರಿಯಾಗಲೇಬೇಕು ಎಂಬ ಸುಪ್ರೀಂ ಸೂಚನೆ ಇವರೆಲ್ಲರೂ ಅಧಿಕಾರ ಕಳೆದುಕೊಳ್ಳುವಂತೆ ಮಾಡಲಿದೆ. ಆಗ ಕೆಎಸ್‌ಸಿಎಗೆ ಮತ್ತೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ಆರು ತಿಂಗಳ ನಂತರ ಮತ್ತೆ ಚುನಾವಣೆ?

ಆ.7ಕ್ಕೆ ಕೆಎಸ್‌ಸಿಎ ಚುನಾವಣೆ ನಡೆದರೂ 6 ತಿಂಗಳ ನಂತರ ಮತ್ತೆ ಚುನಾವಣೆ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ. ಇದಕ್ಕೆ ಕಾರಣ ಲೋಧಾ ಶಿಫಾರಸುಗಳನ್ನು ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್‌ ನೀಡಿರುವ 6 ತಿಂಗಳ ಡೆಡ್‌ಲೈನ್‌. ಪ್ರಸಕ್ತ ಕೆಎಸ್‌ಸಿಎ ಕಾರ್ಯದರ್ಶಿಯಾಗಿರುವ ಬ್ರಿಜೇಶ್‌ ಪಟೇಲ್‌, ಉಪಾಧ್ಯಕ್ಷ ರಾದ ಸುಧಾಕರ್‌ ರಾವ್‌, ಸಂಜಯ್‌ ದೇಸಾಯಿ ಹಾಗೂ ಅಡಳಿತ ಮಂಡಳಿ ಸದಸ್ಯರು ಮುಂದಿನ ಚುನಾವಣೆಯಲ್ಲಿ ಪುನರಾಯ್ಕೆಯಾದರೂ ಅವರ ಸ್ಥಾನ ಭದ್ರವಲ್ಲ. ಏಕೆಂದರೆ 6 ತಿಂಗಳಲ್ಲಿ ಜಾರಿಯಾಗಲಿರುವ ಕೂಲಿಂಪ್‌ ಆಫ್‌ ಅವಧಿ ಈ ಎಲ್ಲರ ಅಧಿಕಾರವನ್ನು ಕಸಿದುಕೊಳ್ಳಲಿದ್ದು, ಆಗ ಎಲ್ಲರೂ ಕೆಎಸ್‌ಸಿಎನಿಂದ 3 ವರ್ಷ ಹೊರಗಿರಲೇಬೇಕಾಗುತ್ತದೆ. ಇನ್ನು ಹಾಲಿ ಅಧ್ಯಕ್ಷ ಅಶೋಕಾನಂದ್‌, ಖಜಾಂಚಿ ದಯಾನಂದ ಪೈ ಅವರ ವಯಸ್ಸು ಈಗಾಗಲೇ 70 ದಾಟಿದೆ. ಇವರಿಬ್ಬರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಅಧಿಕಾರ ಹಿಡಿದರೂ 6 ತಿಂಗಳಲ್ಲಿ ಲೋಧಾ ಶಿಫಾರಸು ಜಾರಿಯಾದ ಬಳಿಕ ಅಧಿಕಾರ ಕಳೆದುಕೊಳ್ಳುವುದು ಖಚಿತ.

ಏನಿದು ಕೂಲಿಂಗ್‌ ಆಫ್‌ ಅವಧಿ?

ಉದಾಹರಣೆಗೆ ಕೆಎಸ್‌ಸಿಎ ಆಡಳಿತ ಮಂಡಳಿ ಸದಸ್ಯರಾಗಿ ಮೂರು ವರ್ಷ ಪೂರೈಸಿದ ಒಬ್ಬ ವ್ಯಕ್ತಿ ಅಧಿಕಾರಾವಧಿ ಮುಗಿದ ಬೆನ್ನಲ್ಲೇ ನಡೆಯುವ ಮುಂದಿನ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಒಂದು ಅಧಿಕಾರವಧಿಯ ನಂತರ ಮೂರು ವರ್ಷಗಳ ವಿರಾಮ ಪಡೆಯುವುದೇ ಕೂಲಿಂಗ್‌ ಆಫ್‌ ಅವಧಿ. ಈ ಅವಧಿ ಮುಗಿದ ನಂತರ ಮತ್ತೊಂದು ಚುನಾವಣೆಗೆ ಸ್ಪರ್ಧಿಸಬಹುದು. ಹೀಗೆ ನಡುವೆ ಎರಡು ಕೂಲಿಂಗ್‌ ಆಫ್‌ ಅವಧಿಗಳ ಸಹಿತ ಮೂರು ಅವಧಿ (ಒಟ್ಟು 9 ವರ್ಷ) ಮಾತ್ರ ಕೆಎಸ್‌ಸಿಎನಲ್ಲಿ ಅಧಿಕಾರ ಹೊಂದಿರಬಹುದು.

'ವಯಸ್ಸಿನ ಮಿತಿ' ಯಾರಿ ಮುಳ್ಳಾಗಲಿದೆ?

ಅಶೋಕಾನಂದ್‌(ಅಧ್ಯಕ್ಷ )

ದಯಾನಂದ ಪೈ(ಖಜಾಂಚಿ)

'ಕೂಲಿಂಗ್‌ ಆಫ್‌ ಅವಧಿ' ಯಾರಿಗೆ ತಟ್ಟಲಿದೆ?

ಬ್ರಿಜೇಶ್‌ ಪಟೇಲ್‌(ಕಾರ್ಯದರ್ಶಿ)

ಸುಧಾಕರ್‌ ರಾವ್‌, ಸಂಜಯ್‌ ದೇಸಾಯಿ (ಉಪಾಧ್ಯಕ್ಷ ರು)

ದೊಡ್ಡ ಗಣೇಶ್‌, ರಘುರಾಮ್‌ ಭಟ್‌, ಮಂಜುನಾಥ್‌ ವಿ.ಎಂ., ಶ್ರೀನಿವಾಸ್‌ ಮೂರ್ತಿ ಎನ್‌.ಎಸ್‌., ಮಲ್ಲಿಕಾರ್ಜುನ ಸ್ವಾಮಿ, ಲಚ್ಮನ್‌ ಕೆ. ಮೆಹ್ತಾನಿ (ಆಡಳಿತ ಮಂಡಳಿ ಸದಸ್ಯರು)

ಲೋಧಾ ಶಿಫಾರಸುಗಳನ್ನು ಜಾರಿಗೊಳಿಸಲು ಕನಿಷ್ಠ ಒಂದೂವರೆ ವರ್ಷ ಬೇಕಾಗುತ್ತದೆ ಎಂಬ ಮಾತುಗಳು ಈಗಾಗಲೇ ಕ್ರಿಕೆಟ್‌ ವಲಯದಲ್ಲಿ ಕೇಳಿ ಬರುತ್ತಿವೆ. ಆದರೆ ಎಷ್ಟೇ ಕಸರತ್ತು ಮಾಡಿದರೂ ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲಿಸಲೇಬೇಕಾಗಿದೆ. ಜತೆಗೆ ಶಿಫಾರಸ್ಸು ಜಾರಿಗೊಂಡ ನಂತರದ ಮೇಲ್ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಲೋಧಾ ಸಮಿತಿಗೆ ವಹಿಸಿರುವುದರಿಂದ ಬಿಸಿಸಿಐ ಅಥವಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಲ್ಲಿ ಅಧಿಕಾರದಲ್ಲಿರುವವರ ಹಾದಿ ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್