Quantcast
Channel: VijayKarnataka
Viewing all articles
Browse latest Browse all 6795

ಟಿ20 ಸರಣಿ: ಬೌಲಿಂಗ್‌ ಸಾಹಸಕ್ಕೆ ಒಲಿದ ಜಯ

$
0
0

ಟಿ20 ಸರಣಿ 2-1ರಿಂದ ಭಾರತದ ಕೈವಶ | 3ನೇ ಪಂದ್ಯದಲ್ಲಿ ಧೋನಿ ಪಡೆಗೆ 3 ರನ್‌ ಗೆಲುವು

ಹರಾರೆ: ಬ್ಯಾಟ್ಸ್‌ಮನ್‌ಗಳು ಕೈ ಕೊಟ್ಟರೂ ಯುವ ಬೌಲರ್‌ಗಳು ಭಾರತದ ಕೈ ಬಿಡಲಿಲ್ಲ. 3ನೇ ಟಿ20 ಪಂದ್ಯದಲ್ಲಿ ಬೌಲಿಂಗ್‌ ಪರಾಕ್ರಮ ಮೆರೆದ ಟೀಮ್‌ ಇಂಡಿಯಾ, 3 ರನ್‌ಗಳಿಂದ ಜಿಂಬಾಬ್ವೆಯನ್ನು ಮಣಿಸಿ 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು.

ಇಲ್ಲಿನ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸೋಲಿನ ಸುಳಿಯಿಂದ ಪಾರಾದ ಧೋನಿ ಪಡೆ, ಸತತ 2ನೇ ಜಯದೊಂದಿಗೆ ಸರಣಿ ಗೆಲುವಿನ ಸಂಭ್ರಮವನ್ನಾಚರಿಸಿತು. ಟಿ20ಗೂ ಮುನ್ನ ನಡೆಸಿದ್ದ ಏಕದಿನ ಸರಣಿಯನ್ನು ಟೀಮ್‌ ಇಂಡಿಯಾ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿತ್ತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 138 ರನ್‌ ಕಲೆ ಹಾಕಿತು. 139 ರನ್‌ಗಳ ಗುರಿ ಬೆನ್ನತ್ತಿದ ಜಿಂಬಾಬ್ವೆ ಒಂದು ಹಂತದಲ್ಲಿ ಗೆಲುವಿನತ್ತ ದಾಪುಗಾಲಿಟ್ಟಿತ್ತು. ಆದರೆ ಕೊನೆಯ ಕ್ಷ ಣದಲ್ಲಿ ಎಡವಿದ ಆತಿಥೇಯರು 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 135 ರನ್‌ ಗಳಿಸಲಷ್ಟೇ ಶಕ್ತರಾದರು.

ಆತಂಕ ತಂದ ಕೊನೆಯ ಓವರ್‌

ಇನಿಂಗ್ಸ್‌ನ 20ನೇ ಓವರ್‌ನಲ್ಲಿ ಜಿಂಬಾಬ್ವೆ ಗೆಲುವಿಗೆ 21 ರನ್‌ಗಳು ಬೇಕಿತ್ತು. ಯುವ ಎಡಗೈ ವೇದಿ ಬರಿಂದರ್‌ ಸ್ರನ್‌ ಅವರ ಮೊದಲ ಎಸೆತವನ್ನು ತಿರಿಸೆನ್‌ ಮರುಮಾ ಸಿಕ್ಸರ್‌ಗಟ್ಟಿದರೆ, ಮುಂದಿನ ಎಸೆತ ವೈಡ್‌ ಆಯಿತು. ಫುಲ್‌ಟಾಸ್‌ ಆಗಿ ಬಂದ 3ನೇ ಎಸೆತವನ್ನು ಅಂಪೈರ್‌ ನೋಬಾಲ್‌ ಎಂದು ಘೋಷಿಸುವಷ್ಟರಲ್ಲಿ ಮರುಮಾ ಎಕ್ಸ್‌ಟ್ರಾ ಕವರ್ಸ್‌ ವಿಭಾಗದಲ್ಲಿ ಚೆಂಡನ್ನು ಬೌಂಡರಿಗಟ್ಟಿದರು. ಹೀಗಾಗಿ ಕೊನೆಯ 5 ಎಸೆತಗಳಲ್ಲಿ ಜಿಂಬಾಬ್ವೆ 9 ರನ್‌ ಗಳಿಸುವ ಸವಾಲು ಪಡೆಯಿತು. ಈ ಹಂತದಲ್ಲಿ ತಪ್ಪಿನಿಂದ ಪಾಠ ಕಲಿತ ಸ್ರನ್‌, ನಿಖರ ದಾಳಿ ನಡೆಸಿ 5 ರನ್‌ ಬಿಟ್ಟುಕೊಟ್ಟು ಭಾರತಕ್ಕೆ 3 ರನ್‌ಗಳ ರೋಚಕ ಗೆಲುವು ತಂದುಕೊಟ್ಟರು.

ಭಾರತದ ಬಿಗು ದಾಳಿ

ಸಾಧಾರಣ ಸವಾಲನ್ನು ಮೆಟ್ಟಿ ನಿಲ್ಲುವ ವಿಶ್ವಾಸದೊಂದಿಗೆ ಆಟ ಆರಂಭಿಸಿದ ಜಿಂಬಾಬ್ವೆ ಬ್ಯಾಟ್ಸ್‌ಮನ್‌ಗಳಿಗೆ ಧೋನಿ ಪಡೆಯ ಯುವ ಬೌಲಿಂಗ್‌ ಅಸ್ತ್ರಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ. ಇನಿಂಗ್ಸ್‌ ಮಧ್ಯದಲ್ಲಿ ವುಸಿ ಸಿಬಾಂಡ (28) ಮತ್ತು ಪೀಟರ್‌ ಮೂರ್‌ (26) ಬಿರುಸಿನ ಆಟದೊಂದಿಗೆ ಆತಂಕ ಮೂಡಿಸಿದರಾದರೂ ಭಾರತೀಯ ಬೌಲರ್‌ಗಳು ಪಟ್ಟು ಬಿಡಲಿಲ್ಲ. ಬರಿಂದರ್‌ ಸ್ರನ್‌ (31ಕ್ಕೆ2), ಧವಳ್‌ ಕುಲಕರ್ಣಿ (23ಕ್ಕೆ2), ಅಕ್ಷ ರ್‌ ಪಟೇಲ್‌ (18ಕ್ಕೆ1), ಯುಜ್ವೇಂದ್ರ ಚಾಹಲ್‌ (32ಕ್ಕೆ1) ನಿರ್ಣಾಯಕ ಸಂದರ್ಭಗಳಲ್ಲಿ ವಿಕೆಟ್‌ ಪಡೆದರೆ, ಜಸ್‌ಪ್ರೀತ್‌ ಬುಮ್ರಾ ತಮ್ಮ ಪಾಲಿನ 4 ಓವರ್‌ಗಳಲ್ಲಿ ಕೇವಲ 23 ರನ್‌ ಬಿಟ್ಟುಕೊಟ್ಟು ಆತಿಥೇಯರ ಮೇಲೆ ಒತ್ತಡ ಹೇರಿದರು.

ಆರಂಭದಲ್ಲಿ ನಡುಗಿದ ಧೋನಿ ಪಡೆ

ಇದಕ್ಕೂ ಮುನ್ನ ಸರಣಿಯಲ್ಲಿ ಮೊದಲ ಬಾರಿ ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಿಧಾನಗತಿಯಿಂದ ಕೂಡಿದ್ದ ಪಿಚ್‌ನಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಆಸರೆಯಾಗಲಿಲ್ಲ. ಸತತ 3ನೇ ಬಾರಿ ಇನಿಂಗ್ಸ್‌ ಆರಂಭಿಸಿದ ಕೆ.ಎಲ್‌.ರಾಹುಲ್‌ ಹಾಗೂ ಮನ್‌ದೀಪ್‌ ಸಿಂಗ್‌ ಜೋಡಿ 20 ರನ್‌ ಸೇರಿಸುವಷ್ಟರಲ್ಲಿ ಬೇರ್ಪಟ್ಟಿತು. ಕಳೆದ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದ್ದ ಮನ್‌ದೀಪ್‌ (4) ದೊಡ್ಡ ಹೊಡೆತ ಬಾರಿಸುವ ಯತ್ನದಲ್ಲಿ ಕೈ ಸುಟ್ಟುಕೊಂಡರು. ಮತ್ತೊಂದೆಡೆ ರಾಹುಲ್‌ (22) 3 ಬೌಂಡರಿ, 1 ಸಿಕ್ಸರ್‌ನೊಂದಿಗೆ ಅಬ್ಬರಿಸುವ ಸೂಚನೆ ನೀಡಿದರಾದರೂ 5ನೇ ಓವರ್‌ನ 3ನೇ ಎಸೆತದಲ್ಲಿ ಔಟಾದರು. 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಾಜ್ಯದ ಮತ್ತೊಬ್ಬ ಬ್ಯಾಟ್ಸ್‌ಮನ್‌ ಮನೀಶ್‌ ಪಾಂಡೆ (0) ಎದುರಿಸಿದ ಪ್ರಪ್ರಥಮ ಎಸೆತದಲ್ಲೇ ಇಲ್ಲದ ರನ್‌ ಕದಿಯಲು ಹೋಗಿ ರನೌಟಾದರು.

ಜಾಧವ್‌ ಅರ್ಧಶತಕದ ಆಸರೆ

27 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿದ್ದಾಗ ಕುಸಿತಕ್ಕೆ ತಡೆಯಾಗಿ ನಿಂತದ್ದು ಅಂಬಾಟಿ ರಾಯುಡು (20) ಹಾಗೂ ಕೇದಾರ್‌ ಜಾಧವ್‌. ಈ ಬಲಗೈ ಜೋಡಿ 4ನೇ ವಿಕೆಟ್‌ಗೆ 49 ಎಸೆತಗಳಲ್ಲಿ 49 ರನ್‌ ಸೇರಿಸಿತು. ಕಳೆದ ವರ್ಷ ಇದೇ ಮೈದಾನದಲ್ಲಿ ಚೊಚ್ಚಲ ಏಕದಿನ ಶತಕ ಸಾಧನೆ ಮಾಡಿದ್ದ ಜಾಧವ್‌ 42 ಎಸೆತಗಳಲ್ಲಿ 58 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು. ಆದರೆ ಪ್ರಸಕ್ತ ಪ್ರವಾಸದಲ್ಲಿ 2ನೇ ಬಾರಿ ಕ್ರೀಸ್‌ಗಿಳಿದ ನಾಯಕ ಧೋನಿ ಕೇವಲ 9 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದರು. ಕೊನೆಯಲ್ಲಿ ಅಕ್ಷ ರ್‌ ಪಟೇಲ್‌ 11 ಎಸೆತಗಳಲ್ಲಿ ಅಜೇಯ 20 ರನ್‌ ಸಿಡಿಸಿದ್ದರಿಂದ ಭಾರತ 138 ರನ್‌ ಗಳಿಸುವಂತಾಯಿತು.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>