Quantcast
Channel: VijayKarnataka
Viewing all articles
Browse latest Browse all 6795

ರಿಯೊ ಫಲಿತಾಂಶ ಖಚಿತಕ್ಕೆ ಒಂದು ವರ್ಷ?

$
0
0

ವಿಶ್ವ ಡೋಪಿಂಗ್‌ ನಿಯಂತ್ರಣ ಘಟಕದ ಅಧ್ಯಕ್ಷ ಮಹಾನಿರ್ದೇಶಕ ಒಲಿವರ್‌ ನಿಗ್ಲಿ ಹೇಳಿಕೆ

ಲಂಡನ್‌: ಆಗಸ್ಟ್‌ನಲ್ಲಿ ನಡೆಯುವ ರಿಯೊ ಒಲಿಂಪಿಕ್ಸ್‌ನಲ್ಲಿ ದಕ್ಕಿದ ಫಲಿತಾಂಶದ ಬಗ್ಗೆ ಕ್ರೀಡಾಪಟುಗಳು ಹೆಮ್ಮೆ ಪಟ್ಟು ಬೀಗುವಂತಿಲ್ಲ, ಏಕೆಂದರೆ ನಿಮ್ಮ ಫಲಿತಾಂಶ ಖಚಿತಗೊಳ್ಳಲು ಒಂದು ವರ್ಷವೂ ತಗಲಬಹುದು ಎಂದು ವಿಶ್ವ ಡೋಪಿಂಗ್‌ ನಿಯಂತ್ರಣ ಘಟಕ (ವಾಡಾ)ದ ಮಹಾ ನಿರ್ದೇಶಕ ಒಲಿವರ್‌ ನಿಗ್ಲಿ ಹೇಳಿದ್ದಾರೆ.

ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ಆಸ್ಪ್ರೇಲಿಯಾದ ರೇಸ್‌ ವಾಕರ್‌ ಜಾರ್ಡ್‌ ಟ್ಯಾಲೆಂಟ್‌ ಅವರಿಗೆ 2012ರ ಲಂಡನ್‌ ಒಲಿಂಪಿಕ್ಸ್‌ನ ಚಿನ್ನದ ಪದಕವನ್ನು ಹಸ್ತಾಂತರಿಸಲಾಯಿತು. ರಷ್ಯಾದ ಡೋಪಿಂಗ್‌ ಹಗರಣದಿಂದಾಗಿ ಬೆಳ್ಳಿ ಗೆದ್ದಿದ್ದ ಟ್ಯಾಲೆಂಟ್‌ಗೆ ಚಿನ್ನ ದಕ್ಕಿತು. ಈ ಫಲಿತಾಂಶ ಹೊರ ಬಿದ್ದಿದ್ದು ನಾಲ್ಕು ವರ್ಷಗಳ ನಂತರ. ''ಕ್ರೀಡಾ ಪಟುಗಳ ಮಾದರಿಯನ್ನು ಸಂಗ್ರಹಿಸಿರುವುದು ಫಲಿತಾಂಶಕ್ಕೆ ಅಗತ್ಯವಿರುವ ಪ್ರಮುಖ ಅಂಶ,'' ಎಂದು ನಿಗ್ಲಿ ಹೇಳಿದ್ದಾರೆ.

''ಮೊಸಗೊಳಿಸಿರುವ ವಿಚಾರವನ್ನು ನೀವು ಇಂದು ಹೇಳಬಹುದು, ಏಕೆಂದರೆ ಅದನ್ನು ಪತ್ತೆ ಹಚ್ಚಲು ಅಸಾಧ್ಯ ಎಂದು ನೀವು ತಿಳಿದಿರಬಹುದು, ಆದರೆ ನಾಳೆಯಾದರೂ ಅದು ಪತ್ತೆಯಾಗುತ್ತದೆ ಎಂಬುದು ತಿಳಿದಿರಲಿ,'' ಎಂದು ಸ್ವಿಜರ್ಲೆಂಡ್‌ನ ವಕೀಲರು ಆಗಿರುವ ನಿಗ್ಲಿ ಹೇಳಿದ್ದಾರೆ.

''ನಿಷೇಧಿತ ಔಷಧಗಳ ಸೇವನೆ ಕ್ರೀಡಾ ಪಟುವಿನ ಘನತೆಗೆ ದಕ್ಕೆಯಾಗಲಿದೆ, ಅಲ್ಲದೆ ಅವರು ಗಳಿಸಿದ ಪದಕದಲ್ಲೂ ಬದಲಾವಣೆ ಆಗಬಹುದು, ಮೋಸಗಾರರು ಸುಲಭವಾಗಿ ತಪ್ಪಿಸಿಕೊಳ್ಳಲಿ ಎಂಬುದು ನಿಮ್ಮ ಯೋಚನೆಯೇ? ಹಾಗಾಗಲು ಸಾಧ್ಯವೇ ಇಲ್ಲ, ನಾವು ಅತಿ ವೇಗದಲ್ಲಿ ಅದನ್ನು ಹುಡುಕಬಹುದು, ಆದರೆ ವಿಜ್ಞಾನದ ವೇಗ ಎಂದರೆ ವಿಜ್ಞಾನದ ವೇಗ, ಬೇಗನೆ ಮರು ಪರೀಕ್ಷೆ ನಡೆಸಿ ಮಾದರಿಗಳನ್ನು ನಾವು ನಾಶವಾಗಲು ಅವಕಾಶ ಕಲ್ಬಿಸುವುದಿಲ್ಲ, ಮುಂದೊಂದು ದಿನ ಅತಿ ವೇಗದಲ್ಲೇ ನಿಮ್ಮ ಫಲಿತಾಂಶ ನೀಡುವ ಸಮಯ ಬರಬಹುದು,'' ಎಂದರು.

ಅಂತಾರಾಷ್ಟ್ರೀಯ ಅಥ್ಲೆಟಿಕ್‌ ಸಂಸ್ಥೆ ರಷ್ಯಾ ಕ್ರೀಡಾಪಟುಗಳ ಮೇಲೆ ಹೇರಿರುವ ನಿಷೇಧವನ್ನು ಎತ್ತಿ ಹಿಡಿದಿದೆ, ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಕೂಡ ವಾಡಾ ಕೈಗೊಂಡಿರುವ ತೀರ್ಮಾನಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇದರೊಂದಿಗೆ ರಷ್ಯಾದ ಅಥ್ಲೆಟಿಕ್ಸ್‌ ತಂಡಕ್ಕೆ ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅಸಾಧ್ಯವಾಗಿದೆ. ದೇಶದಿಂದ ಹೊರಗಡೆ ಅಭ್ಯಾಸ ನಡೆಸುತ್ತಿರುವ ರಷ್ಯಾದ ಅಥ್ಲೀಟ್‌ಗಳು ಮಾತ್ರ ರಿಯೊದಲ್ಲಿ ಪಾಲ್ಗೊಳ್ಳಬಹುದು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>