Quantcast
Channel: VijayKarnataka
Viewing all articles
Browse latest Browse all 6795

ಧನಂಜಯ್ ದಶಾವತಾರ

$
0
0

* ಶರಣು ಹುಲ್ಲೂರು

ಸುಳ್ಳೇ ಸತ್ಯ ಕಿರುಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದವರು ನಿರ್ದೇಶಕ ಆಕಾಶ್‌ ಶ್ರೀವತ್ಸ ಮತ್ತು ನಿರ್ಮಾಪಕ ರವಿ ಕಶ್ಯಪ್‌. ಸದ್ಯ ಈ ಜೋಡಿ 'ಬದ್ಮಾಶ್‌' ಎಂಬ ನೆಗೆಟಿವ್‌ ಫೀಲ್‌ ಕೊಡುವ ಶೀರ್ಷಿಕೆ ಇಟ್ಟು ಚಿತ್ರ ಮಾಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್‌ ರಿಲೀಸ್‌ ಆಗಿದ್ದು, ಅದನ್ನು ಬಾಲಿವುಡ್‌ ಸುಲ್ತಾನ್‌ ಸಲ್ಮಾನ್‌ ಖಾನ್‌ ಮೆಚ್ಚಿಕೊಂಡಿದ್ದಾರೆ. ಬಾಲಿವುಡ್‌ಗೆ ರೀಮೇಕ್‌ ಮಾಡುವ ಒಲವು ತೋರಿದ್ದಾರೆ. ಹೀಗೆ ಹಲವು ಕಾರಣಗಳಿಂದಾಗಿ ನಿರೀಕ್ಷೆ ಮೂಡಿಸಿರುವ ಸಿನಿಮಾದ ಬಗೆಗಿನ ಮಾತುಕತೆ ಇಲ್ಲಿದೆ.

*ಸಿನಿಮಾದ ಟೀಸರ್‌ ಕಲರ್‌ಫುಲ್‌ ಆಗಿದೆ. ಆದರೆ, ಶೀರ್ಷಿಕೆ ಯಾಕೆ ನೆಗೆಟೀವ್‌ ಫೀಲ್‌ ಕೊಡುತ್ತದೆ?

ಬದ್ಮಾಶ್‌ ಪದವನ್ನು ಬೇರೆ ಬೇರೆ ಭಾವಕ್ಕೆ ಬಳಸಿಕೊಂಡಿದ್ದಿದೆ. ಸಾಮಾನ್ಯವಾಗಿ ಕೆಟ್ಟ ಪದದಂತೆ ಇದು ಬಳಕೆಯಾದರೂ, ತಾಯಿಯು ಪ್ರೀತಿಯಿಂದ ಮಗನಿಗೆ 'ಏ ಬದ್ಮಾಶ್‌' ಎಂದು ಕರೆದದ್ದನ್ನು ನಾನು ಕೇಳಿದ್ದೇನೆ. ತುಂಟತನ ಮಾಡಿದಾಗ ಬಹುತೇಕವಾಗಿ ಹಾಗೆಯೇ ಕರೆಯುತ್ತಾರೆ. ಇಲ್ಲಿ ನಾನು ತುಂಟತನಕ್ಕೆ ಪರ್ಯಾಯ ಅನ್ನುವಂತೆ ಉಪಯೋಗಿಸಿದ್ದೇನೆ.

* ನಾಯಕನ ಪಾತ್ರಕ್ಕೂ ಬದ್ಮಾಶ್‌ ಪದಕ್ಕೂ ಸಂಬಂಧವಿದೆಯಾ?

ಹೌದು, ಆಗಲೇ ಹೇಳಿದಂತೆ ತುಂಟತನವೇ ಇಲ್ಲಿ ಬದ್ಮಾಶ್‌ ಆಗಿದೆ. ನಾಯಕನ ಪಾತ್ರವೇ ಹಾಗಿರುವ ಕಾರಣ, ಈ ಸಂಬಂಧ ಕಲ್ಪಿಸಿದ್ದೇನೆ. ಕಿತಾಪತಿ ಮಾಡುವುದೇ ಅವನ ಕ್ಯಾರೆಕ್ಟರ್‌. ಬದ್ಮಾಶ್‌ ಎಂದು ಕರೆದಿದ್ದರೂ, ಮುದ್ದು ಬರುವ ಪಾತ್ರವದು.

* ಸಿನಿಮಾದಲ್ಲಿ ಏನೆಲ್ಲ ವಿಶೇಷತೆಗಳಿವೆ?

ಸ್ಕ್ರೀನ್‌ ಪ್ಲೇ ಸಿನಿಮಾದ ಜೀವಾಳ. ಹೊಸದಾಗಿರುವ ಮೇಕಿಂಗ್‌, ಪಂಚಿಂಗ್‌ ಡೈಲಾಗ್ಸ್‌ ಮತ್ತು ಸ್ಟೈಲಿಶ್‌ ನಟನೆಯಿಂದಾಗಿ ಚಿತ್ರವು ಗಮನ ಸೆಳೆಯಲಿದೆ. ಜತೆಗೆ ಅನುಭವಿ ತಾರಾ ಬಳಗ ಇಲ್ಲಿದೆ. ಹೊಸ ಆಲೋಚನೆಯ ತಾಂತ್ರಿಕ ವರ್ಗ ಚಿತ್ರದ ಮತ್ತೊಂದು ಪ್ಲಸ್‌ ಪಾಯಿಂಟ್‌. ಕರೆಂಟ್‌ ಅಫೇರ್ಸ್‌ ಬಳಸಿಕೊಂಡಿದ್ದೇನೆ. ನಾಲ್ಕು ವರ್ಷದ ಹಿಂದೆ ನಾನು ಏನೆಲ್ಲ ಘಟನೆಗಳನ್ನು ಬರೆದುಕೊಂಡಿದ್ದೇನೋ, ಅದೆಲ್ಲವೂ ಈಗ ನಡೆಯುತ್ತಿವೆ. ರೆಗ್ಯುಲರ್‌ ಆಗಿ ಸುದ್ದಿಯಲ್ಲಿರುವ ಕೆಲವು ಪಾತ್ರಗಳನ್ನು ಸಿನಿಮಾದಲ್ಲಿ ಕಾಣಬಹುದು.

* ಧನಂಜಯ್‌ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಏಕೆ?

ರಂಗಭೂಮಿ ಹಿನ್ನೆಲೆಯ ನಟ ಅವರು. ಪಾತ್ರವನ್ನು ಬೇಗ ಅರ್ಥ ಮಾಡಿಕೊಳ್ಳುತ್ತಾರೆ. ಅಲ್ಲದೇ ನನ್ನ ಕತೆಗೆ ಅವರೇ ಸೂಕ್ತ ಅನಿಸಿತು. ಹೀಗಾಗಿ ಆಯ್ಕೆ ಮಾಡಿಕೊಂಡೆ. ಚಿತ್ರದಲ್ಲಿ ಅವರು ಬರೋಬ್ಬರಿ ಹತ್ತು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೊಟ್ಟೆ ಪಾಡಿಗೊಂದು ಕೆಲಸ ಮಾಡುತ್ತಿದ್ದರೂ, ಆತನ ಗುರಿ ಮಾತ್ರ ಬೇರೆ ಇರುತ್ತದೆ. ಈ ಪಾತ್ರವನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ.

* ನಿಮ್ಮ ಚಿತ್ರದ ಕತೆಯನ್ನು ಒಂದೇ ಲೈನ್‌ನಲ್ಲಿ ಹೇಳುವುದಾದರೆ?

ಕಿಂಗ್‌ ಎಂಬ ಪವರ್‌ಫುಲ್‌ ರಾಜಕಾರಣಿ ಮತ್ತು ಸ್ಮಾರ್ಟ್‌ ಹುಡುಗನ ಮಧ್ಯೆ ನಡೆಯುವ ರೋಚಕ ಕತೆಯೇ ಸಿನಿಮಾ. ರಾಜಕಾರಣಿಯ ಪಾತ್ರವನ್ನು ಅಚ್ಯುತ್‌ ಕುಮಾರ್‌ ನಿರ್ವಹಿಸಿದ್ದಾರೆ. ಇದು ಸರ್‌ಪ್ರೈಸ್‌ ಕ್ಯಾರೆಕ್ಟರ್‌. ಇವರು ರಿಯಲಿಸ್ಟಿಕ್‌ ಆಗಿಯೂ ಕನೆಕ್ಸ್‌ ಆಗುತ್ತಾರೆ.

*ಸಿನಿಮಾದ ಸ್ಕ್ರೀನ್‌ ಪ್ಲೇ ಬಗ್ಗೆ ತುಂಬಾ ಮಾತಾಡುತ್ತಿದ್ದೀರಿ. ಅಂತಹ ವಿಶೇಷತೆ ಏನಿದೆ?

ಕಥೆಯನ್ನು ಬರೆಯಲು ಪ್ರಾರಂಭಿಸಿದಾಗ, ನಮ್ಮ ಮನಸ್ಸಿನಲ್ಲಿದ್ದದ್ದು ಒಂದೇ ವಿಚಾರ ಅದು ನೋಡುಗರನ್ನು ಮಗ್ನರನ್ನಾಗಿಸಬೇಕು ಅಂತ. 2013ರಲ್ಲಿ ಒಂದು ಸಂಪೂರ್ಣ ಚಿತ್ರಕಥೆ ಸಿದ್ಧವಾಯಿತು. ಓದಿದಾಗ, ಎಲ್ಲೋ ಒಂದು ಕಡೆ ಅದು ತುಂಬಾ ಪ್ರಯೋಗಾತ್ಮಕ ಎನಿಸಿತು. ವೀಕ್ಷ ಕರಿಗೆ ಗೊಂದಲವಾಗಬಹುದು ಅನಿಸಿ, ಮತ್ತೆ ಇನ್ನೊಂದು ರೂಪಾಂತರ ಬರೆಯಲು ಪ್ರಾರಂಭಿಸಿದೆವು. ಅಲ್ಲಿಂದ ಹನ್ನೊಂದು ಸಾರಿ ಬರೆದ ಮೇಲೆ ತೃಪ್ತಿ ಅನಿಸಿತು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>