Quantcast
Channel: VijayKarnataka
Viewing all articles
Browse latest Browse all 6795

ಕೈ ಶಾಸಕರ ಮನೆಯಲ್ಲಿ ಪಕ್ಷ ರಾಜಕೀಯ!

$
0
0

ಹಿರಿಯ ಮಗ ಬಿಜೆಪಿ ಕಾರ‌್ಯಕರ್ತ, ಕಿರಿಯ ಪುತ್ರ ಅಪ್ಪನ ಬೆಂಬಲಿಗ

ಕಲಬುರಗಿ: ಕಲಬುರಗಿ ಗ್ರಾಮೀಣ ಶಾಸಕ ಜಿ. ರಾಮಕೃಷ್ಣ ಅವರ ಮನೆಯಲ್ಲಿ ಪಕ್ಷ ರಾಜಕೀಯ ಶುರುವಾಗಿದೆ. ಶಾಸಕರು, ಅವರ ಪತ್ನಿ ಮತ್ತು ಮಕ್ಕಳ ಮಧ್ಯೆಯೇ ಪರಸ್ಪರ ಆರೋಪ-ಪ್ರತ್ಯಾರೋಪ ಆರಂಭವಾಗಿವೆ.

''ರಾಮಕೃಷ್ಣ ಅವರನ್ನು ಕಿರಿಯ ಪುತ್ರ ವಿಜಯಕುಮಾರ್ ಸರಿಯಾಗಿ ನೋಡಿಕೊಳ್ಳುತ್ತಿಲ್ಲ, 81 ವರ್ಷ ವಯಸ್ಸಾಗಿರುವ ಅವರಿಗೆ ಸರಿಯಾಗಿ ಚಿಕಿತ್ಸೆ ಕೊಡಿಸುತ್ತಿಲ್ಲ,'' ಎಂಬುದಾಗಿ ಅವರ ಪತ್ನಿ ಮತ್ತು ಹಿರಿಯ ಪುತ್ರ ದತ್ತಾತ್ರೇಯ ಆರೋಪಿಸಿದ್ದರು. ಅದಕ್ಕೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡಿದ ರಾಮಕೃಷ್ಣ, ''ನನ್ನ ಪತ್ನಿ ಮುಗ್ಧೆ. ಅವಳಿಗೆ ಹೊರಗಿನ ಪ್ರಪಂಚ ಗೊತ್ತಿಲ್ಲ. ದತ್ತಾತ್ರೇಯ ಕುಮ್ಮಕ್ಕು ನೀಡಿದ್ದಾನೆ. ಪತ್ನಿಯಿಂದ ಮಗ ವಿಜಯಕುಮಾರ ನನ್ನನ್ನು ದೂರ ಮಾಡಿದ್ದಾನೆ ಎಂಬ ಆರೋಪ ಸತ್ಯಕ್ಕೆ ದೂರ. ನಾವೆಲ್ಲರೂ ಒಂದೇ ಮನೆಯಲ್ಲಿ ಇದ್ದೇವೆ. ವಿರೋಧ ಪಕ್ಷಗಳವರು ನಮ್ಮ ಕುಟುಂಬದಲ್ಲಿನ ಸಣ್ಣ ವಿಷಯಗಳನ್ನೇ ವಿವಾದ ಮಾಡುತ್ತಿದ್ದಾರೆ,'' ಎಂದು ಕಿಡಿ ಕಾರಿದರು.

''ದತ್ತಾತ್ರೇಯ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾನೆ. ಅದಕ್ಕಾಗಿಯೇ ಆತನನ್ನು ನಾನು ದೂರ ಇಟ್ಟಿದ್ದೇನೆ, ಹಾಗಾಗಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾನೆ,'' ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ವಿಜಯಕುಮಾರ್ ಸಹ ಇದಕ್ಕೆ ದನಿಗೂಡಿಸಿದರು. ''ನನ್ನ ತಂದೆಯನ್ನು ನಾನು ಆಸ್ಪತ್ರೆಗೆ ತೋರಿಸುತ್ತಿಲ್ಲ ಎಂಬ ತಾಯಿಯ ಆರೋಪ ಸತ್ಯಕ್ಕೆ ದೂರವಾದದ್ದು. ಕಾಲ ಕಾಲಕ್ಕೆ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೇನೆ,'' ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

''ರಾಜ್ಯಸಭಾ ಎಲೆಕ್ಷನ್‌ದಾಗ ನನಗ್ ಭಾಳ್ ಆರಾಮ ಇರ‌್ಲಿಲ್ಲ. ಅದಕ್ ನನ್ ಬದ್ಲಿ ಬ್ಯಾರೆಯವ್ರ ಓಟ್ ಹಾಕಿದ್ರು. ಆದ್ರ ಕಾಂಗ್ರೆಸ್ ಪಾರ್ಟಿನವ್ರ ನನ್ ಮ್ಯಾಲೆ ವಿಶ್ವಾಸ ಇಲ್ಲ ಅಂತ ಅಂದ್ಕೊಂಡು ಬ್ಯಾರೆಯವ್ರಿಗೆ ಓಟ್ ಹಾಕ್ಲಿಕ್ ಚಾನ್ಸ್ ಕೊಟ್ರು ಅಂತ ಅಪಪ್ರಚಾರ ನಡೀತಿದೆ. ಅದೆಲ್ಲ ಸುಳ್ಳು. ನಾ ಕಾಂಗ್ರೆಸ್ ಕಟ್ಟಾಳು ಇದ್ದೀನಿ. ನಾ ಭಾಳ್ ದೊಡ್ಡ ಸೀನಿಯರ್ ಲೀಡ್ರು... ಮಿನಿಸ್ಟರ್ ಆಗಿದ್ದವನು,'' ಎಂದು ಶಾಸಕರು ನುಡಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>