Quantcast
Channel: VijayKarnataka
Viewing all articles
Browse latest Browse all 6795

ಲೋಕಾ ಕಚೇರಿಯಿಂದ ನಾಪತ್ತೆಯಾಗಿದ್ದ ಕಡತ ಪತ್ತೆ

$
0
0

-ಬೀದರ್‌ ಜಿಲ್ಲೆಯ ನಾಲಾ ಅವ್ಯವಹಾರದ ಮಾಹಿತಿ ಕಡತ-

* ಮಂಜುನಾಥ್‌ ನಾಗಲೀಕರ್‌ ಬೆಂಗಳೂರು

ಲೋಕಾಯುಕ್ತ ಕಚೇರಿಯಿಂದ ಇಬ್ಬರು ವ್ಯಕ್ತಿಗಳು ಎರಡು ಪ್ಲಾಸ್ಟಿಕ್‌ ಕವರ್‌ ಹಾಗೂ ಬಟ್ಟೆ ಸುತ್ತಿದ ನಾಲ್ಕು ಬಂಡಲ್‌ಗಳಲ್ಲಿ ನಾಪತ್ತೆ ಮಾಡಿದ್ದ ಕಡತಗಳನ್ನು ಒಂದು ವರ್ಷದ ನಂತರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಈ ಕಡತಗಳು ಬೀದರ್‌ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ನಾಲೆ ಕಾಮಗಾರಿ ಸಂಬಂಧ ಸುಮಾರು 30 ವರ್ಷಗಳ ಹಿಂದೆ ನಡೆದಿದ್ದ ಅವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಎಂದು ತಿಳಿದುಬಂದಿದೆ.

ಲೋಕಾಯುಕ್ತ ಭ್ರಷ್ಟಾಚಾರ ಆರೋಪ ಪ್ರಕರಣ ಬೆಳಕಿಗೆ ಬಂದ ಬಳಿಕ ಮಾಜಿ ಲೋಕಾಯುಕ್ತ ನ್ಯಾ. ಭಾಸ್ಕರ್‌ ರಾವ್‌ ಅವರ ರಾಜಿನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿದ್ದವು. 2015ರ ಜುಲೈ ಮೊದಲ ವಾರ ನ್ಯಾ. ರಾವ್‌ ಅವರು ಕಚೇರಿಯಿಂದ ಮನೆಗೆ ಹೊರಡುವ ಮುನ್ನ ಈ ಕಡತಗಳನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ತೆಗೆದುಕೊಂಡು ಹೋಗಿದ್ದರು. ಈ ಕುರಿತ ವಿಡಿಯೊ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಆಗ ನ್ಯಾ. ರಾವ್‌ ಉದ್ದೇಶಪೂರ್ವಕವಾಗಿ ಅದನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ ಸಾಮಾಜಿಕ ಕಾರ್ಯಕರ್ತ ಎಸ್‌.ಆರ್‌.ಹಿರೇಮಠ ತನಿಖೆಗೆ ಆಗ್ರಹಿಸಿದ್ದರು. ಈ ಬಗ್ಗೆ ಲೋಕಾಯುಕ್ತ ಕಚೇರಿ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಅಧಿಕಾರಿಗಳು ತನಿಖೆ ಆರಂಭಿಸಿದ್ದರು.

ನಾಲೆ ಕಾಮಗಾರಿಗಳ ಅವ್ಯವಹಾರ ಸಂಬಂಧ ಲೋಕಾಯುಕ್ತದಲ್ಲಿ ವಿಚಾರಣೆ ನಡೆಯುತ್ತಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆಗೆ ತರುವಂತೆ ಲೋಕಾಯುಕ್ತ ಕಚೇರಿ ಅಧಿಕಾರಿಗಳು ನೀರಾವರಿ ಕಚೇರಿ ಸಿಬ್ಬಂದಿಗೆ ಸೂಚಿಸಿದ್ದರಿಂದ ತರಲಾಗಿತ್ತು.

ಪ್ಲಾಸ್ಟಿಕ್‌ ಚೀಲದ ಮೇಲೆ ಹೆಸರು

ಎಸ್‌ಐಟಿ ತನಿಖಾ ತಂಡದಲ್ಲಿರುವ ಅಧಿಕಾರಿ ಹಾಲಿ ಎಸಿಬಿ ಎಸ್ಪಿ ಲಾಬೂರಾಮ್‌ ಅವರ ತಂಡ ಕಡತ ಪತ್ತೆಗೆ ಮುಂದುವರಿಸಿತ್ತು. ವ್ಯಕ್ತಿಗಳು ಕೊಂಡೊಯುತ್ತಿದ್ದ ದಾಖಲೆಗಳ ಪೈಕಿ ಎರಡು ಪ್ಲಾಸ್ಟಿಕ್‌ ಕವರ್‌ ಮೇಲೆ ವಾಣಿಜ್ಯ ಮಳಿಗೆಯೊಂದರ ಹೆಸರಿನ ಆಧಾರದ ಮೇಲೆ ಅಧಿಕಾರಿಗಳ ತಂಡ ಕಲಬುರಗಿ, ಬೀದರ್‌ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಳಿಗೆಗಾಗಿ ಹುಡುಕಾಟ ನಡೆಸಿದರು. ಆಗ ಕಲಬುರಗಿಯ ಒಂದು ಮಳಿಗೆಯವರು ಆ ಪ್ಲಾಸ್ಟಿಕ್‌ ಕವರ್‌ ನಮ್ಮದೇ. ಆದರೆ, ಇಂತಹ ವ್ಯಕ್ತಿಯೇ ಕೊಂಡೊಯ್ದರು ಎಂದು ಹೇಳಲಾಗದು ಎಂದರು.

ಹೀಗಾಗಿ ದಿಕ್ಕು ತೋಚದ ತನಿಖಾಧಿಕಾರಿಗಳು, ಈ ವಿಡಿಯೋವನ್ನು ಮತ್ತೊಮ್ಮೆ ಪ್ರಸಾರ ಮಾಡುವಂತೆ ಸುದ್ದಿ ವಾಹಿನಿಗಳಿಗೆ ಮನವಿ ಮಾಡಿದರು. ಆ ಮರು ಪ್ರಸಾರ ನೋಡಿದ ನೀರಾವರಿ ಇಲಾಖೆಯ ಸಿಬ್ಬಂದಿ, ವಿವಾದದಲ್ಲಿ ಸಿಲುಕಿಕೊಳ್ಳುವುದು ಬೇಡ ಎಂದು ಎಸ್‌ಐಟಿ ಅಧಿಕಾರಿಗಳನ್ನು ಭೇಟಿ ಮಾಡಿ ಆ ದಾಖಲೆಗಳ ಬಗ್ಗೆ ವಿವರಣೆ ನೀಡಿದರು.

''ಈಗ ಅನುಮಾನಾಸ್ಪದ ಕಡತ ನಾಪತ್ತೆ ಪ್ರಕರಣಕ್ಕೆ ತೆರೆ ಬಿದ್ದಂತಾಗಿದೆ,'' ಎಂದು ಭ್ರಷ್ಟಾಚಾರ ನಿಗ್ರಹ ದಳದ ಹಿರಿಯ ಅಧಿಕಾರಿ ತಿಳಿಸಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>