Quantcast
Channel: VijayKarnataka
Viewing all articles
Browse latest Browse all 6795

ಸಿದ್ದು ಕೈಯಿಂದಲೇ ಬಹುಮಾನ, ಅವರ ಅವಧಿಯಲ್ಲೇ ನಿರ್ಗಮನ

$
0
0

ಮೈಸೂರಲ್ಲಿ ಅತ್ಯುತ್ತಮ ಪ್ರೊಬೆಷನರಿ ಅಧಿಕಾರಿ ಪ್ರಶಸ್ತಿ ಪಡೆದಿದ್ದ ಅನುಪಮಾ

ಕುಂದೂರು ಉಮೇಶ ಭಟ್ಟ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ 'ಅತ್ಯುತ್ತಮ ಮಹಿಳಾ ಪ್ರೊಬೆಷನರಿ ಪೊಲೀಸ್‌ ಅಧಿಕಾರಿ' ಬಹುಮಾನವನ್ನು ಸ್ವೀಕರಿಸಿದ್ದ ಅನುಪಮಾ ಶೆಣೈ, ಈಗ ಅವರ ಅಧಿಕಾರಾವಧಿಯಲ್ಲೇ ನಿರ್ಗಮಿಸಿರುವುದು ಕಾಕತಾಳೀಯವಾಗಿದೆ.

ಡಿವೈಎಸ್ಪಿ ಹಾಗೂ ಪಿಎಸ್‌ಐ ದರ್ಜೆಯ ಅಧಿಕಾರಿಗಳಿಗೆ ತರಬೇತಿ ನೀಡುವ ಇಲ್ಲಿನ ಪೊಲೀಸ್‌ಅಕಾಡೆಮಿಯಲ್ಲಿ 2012ನೇ ಸಾಲಿನಲ್ಲಿ ತರಬೇತಿ ಆರಂಭಿಸಿ 2013ರಲ್ಲಿ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದ ಡಿವೈಎಸ್ಪಿ ಅನುಪಮಾ, ಇದೀಗ ವೃತ್ತಿಯಿಂದಲೇ ನಿರ್ಗಮಿಸಿದ್ದಾರೆ.

2012ನೇ ಬ್ಯಾಚ್‌ನ 25 ಮಂದಿ ಕೆಎಸ್‌ಪಿಎಸ್‌ ಅಧಿಕಾರಿಗಳ ಪೈಕಿ ಐದು ಮಂದಿ ಹೆಣ್ಣು ಮಕ್ಕಳೂ ಇದ್ದರು. ಅನುಪಮಾ ಶೆಣೈ, ಡಾ.ಸ್ನೇಹ, ಶ್ರುತಿ, ಲಾವಣ್ಯ, ನಂದಿನಿ ಪೈಕಿ ಅನುಪಮಾ ಅವರೇ ಅತ್ಯುತ್ತಮ ಮಹಿಳಾ ಪ್ರೊಬೆಷನರಿ ಅಧಿಕಾರಿ ಎನ್ನುವ ಪ್ರಶಸ್ತಿಗೆ ಭಾಜನರಾಗಿದ್ದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅನುಮಪಾಗೆ ಪ್ರಶಸ್ತಿ ಪ್ರದಾನ ಮಾಡಿದ್ದರು...! ಅಷ್ಟೇ ಅಲ್ಲ, ರೈಫಲ್‌ ಶೂಟಿಂಗ್‌ನಲ್ಲೂ ಅವರಿಗೆ ಬಹುಮಾನ ಲಭಿಸಿತ್ತು.

ಇಲಾಖೆ ಸೇರುವ ಮುನ್ನ...: ಅನುಪಮಾ ಶೆಣೈಗೆ 2012ರ ಸಾಲಿನ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ನಿರೀಕ್ಷಿತ ರಾರ‍ಯಂಕ್‌ಸಿಗದೇ ಇದ್ದುದರಿಂದ ಪೊಲೀಸ್‌ ಇಲಾಖೆಯಲ್ಲಿ ಅವಕಾಶ ಸಿಗುವ ಸೂಚನೆ ಇತ್ತು. ಇದರಿಂದಲೇ ಅನುಪಮಾ, ಪೊಲೀಸ್‌ ಇಲಾಖೆ ಸೇರಬೇಕೆ, ಬೇಡವೇ, ಒತ್ತಡಗಳೇನಾದರೂ ಇರುತ್ತವೆಯೇ, ಕೆಲಸಕ್ಕೆ ಸೇರಲು ಹಣ ನೀಡಬೇಕಾಗುತ್ತದೆಯೆ ಮುಂತಾದ ಮಾಹಿತಿಯನ್ನೆಲ್ಲಾ ಎಸ್ಪಿ ದರ್ಜೆ ಅಧಿಕಾರಿಯಾಗಿರುವ ಡಾ.ಧರಣಿದೇವಿ ಮಾಲಗತ್ತಿ ಅವರಲ್ಲಿ ಪಡೆದಿದ್ದರು.

''ಪ್ರತಿಭಾವಂತರಿಗೆ ಹಣ ಕೊಟ್ಟು ಕೆಲಸಕ್ಕೆ ಸೇರುವ ಅಗತ್ಯವಿಲ್ಲ. ನೀವು ದುಡ್ಡು ಕೊಡಬೇಡಿ. ನಿಮಗೆ ಕೆಲಸ ಸಿಕ್ಕೇ ಸಿಗುತ್ತದೆ. ಇಲ್ಲಿ ಒತ್ತಡ ಇರುತ್ತದೆ ಎನ್ನುವುದಕ್ಕಿಂತ ನಾವು ನಿರ್ವಹಿಸಿಕೊಂಡು ಹೋಗುವುದರಲ್ಲಿ ಅದು ಅಡಗಿದೆ,''ಎಂದು ಡಾ.ಧರಣಿದೇವಿ ಕಿವಿಮಾತು ಹೇಳಿದ್ದರು. ಇದಾದ ಸ್ವಲ್ಪೇ ದಿನದಲ್ಲಿ ಅನುಪಮಾ ಪೊಲೀಸ್‌ ಸೇವೆಗೆ ಆಯ್ಕೆಯಾಗಿ, ಮೈಸೂರಿನ ಕರ್ನಾಟಕ ಪೊಲೀಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಬಂದಿದ್ದರು.

ಆಗಲೇ ಪ್ರಶ್ನಿಸುತ್ತಿದ್ದರು...: ಪ್ರತಿಭಾವಂತರಾಗಿದ್ದ ಅನುಪಮಾ ಶೆಣೈ, ಒಳಾಂಗಣ, ಹೊರಾಂಗಣದ ಎಲ್ಲಾ ತರಬೇತಿಯಲ್ಲಿ ಸಕ್ರಿಯವಾಗಿಯೇ ಪಾಲ್ಗೊಳ್ಳುತ್ತಿದ್ದರು. ತರಗತಿಗಳಲ್ಲಿ ಮುಕ್ತವಾಗಿಯೇ ಹಲವಾರು ಪ್ರಶ್ನೆಗಳನ್ನು ಅಧಿಕಾರಿಗಳಿಗೆ ಕೇಳಿ ಉತ್ತರ ಪಡೆಯುತ್ತಿದ್ದರು. ಇವರ ಚಟುವಟಿಕೆ ನೋಡಿ ಅತ್ಯುತ್ತಮ ಅಧಿಕಾರಿ ಆಗಬಹುದು ಎಂದು ಆಗಲೇ ಬಹುತೇಕರು ನಿರೀಕ್ಷಿಸಿದ್ದರು. ಅವರ ಚಟುವಟಿಕೆ ಕಾರಣಕ್ಕೆ ಅವರಿಗೆ ಆ ಬ್ಯಾಚ್‌ನ ಅತ್ಯುತ್ತಮ ಮಹಿಳಾ ಪ್ರೊಬೆಷನರ್‌ ಪ್ರಶಸ್ತಿಯೂ ಲಭಿಸಿತ್ತು.

---

ಅನುಪಮಾ ಇಲಾಖೆಗೆ ಸೇರುವ ಮುನ್ನ ಎಲ್ಲಾ ರೀತಿಯ ಅನುಮಾನಗಳನ್ನು ಬಗೆಹರಿಸಿಕೊಂಡಿದ್ದರು. ವ್ಯವಸ್ಥೆಯಲ್ಲಿ ಕೆಲವೊಮ್ಮೆ ಪರಿಸ್ಥಿತಿ ನಿಭಾಯಿಸುವುದನ್ನೂ ಕಲಿಯಬೇಕಾಗುತ್ತದೆ. ಅದೆಲ್ಲವನ್ನೂ ಸಂವಹಿಸುವ ಬಗ್ಗೆ ನಾವು ಹೇಳಿಕೊಟ್ಟಿದ್ದೆವು. ಆದರೂ ಕೂಡ್ಲಿಗಿಯಲ್ಲಿ ವೃತ್ತಿ ಜೀವನ ಆರಂಭಿಸಿ ಕೆಲವೇ ದಿನದಲ್ಲಿ ಬಿಟ್ಟು ಹೋಗುವಂತೆ ಆಗಿದೆ. ಫೇಸ್‌ಬುಕ್‌ನಂಥ ಸಾಮಾಜಿಕ ಮಾಧ್ಯಮವನ್ನು ಸರಕಾರವನ್ನು ಟೀಕಿಸಲು ಬಳಸಬಾರದಿತ್ತು

- ಡಾ.ಧರಣಿ ದೇವಿ ಮಾಲಗತ್ತಿ, ಡೆಪ್ಯೂಟಿ ಡೈರೆಕ್ಟರ್‌, ಮೈಸೂರು


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>