Quantcast
Channel: VijayKarnataka
Viewing all articles
Browse latest Browse all 6795

ಕ್ವಾರ್ಟರ್‌ ಫೈನಲ್‌ಗೆ ಸೈನಾ, ಶ್ರೀಕಾಂತ್‌

$
0
0

ಆಸ್ಪ್ರೇಲಿಯಾ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಟೂರ್ನಿ

ಸಿಡ್ನಿ: ಒಲಿಂಪಿಕ್‌ನಲ್ಲಿ ಭಾರತದ ಪದಕ ಭರವಸೆಯಾಗಿರುವ ಸೈನಾ ನೆಹ್ವಾಲ್‌ ಮತ್ತು ಕಿಡಂಬಿ ಶ್ರೀಕಾಂತ್‌, ಇಲ್ಲಿ ನಡೆಯುತ್ತಿರುವ ಆಸ್ಪ್ರೇಲಿಯಾ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರತ್ಯೇಕ ಸಿಂಗಲ್ಸ್‌ ವಿಭಾಗಗಳ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

ಐದು ಕೋಟಿ ರೂ. ಬಹುಮಾನ ಮೊತ್ತ ಹೊಂದಿರುವ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಮಿಂಚುತ್ತಿರುವ ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ ನೆಹ್ವಾಲ್‌, ಪ್ರಿ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ 21-12, 21-14 ಅಂತರದ ನೇರ ಗೇಮ್‌ಗಳಿಂದ ಮಲೇಷ್ಯಾದ ಜಿನ್‌ ವೀ ಗೊ ವಿರುದ್ಧ ಸುಲಭ ಜಯ ದಾಖಲಿಸಿದರು. ಕೇವಲ 37 ನಿಮಿಷಗಳಲ್ಲಿ ಪಂದ್ಯ ತಮ್ಮದಾಗಿಸಿಕೊಂಡ ಸೈನಾ, 2013ರ ವಿಶ್ವ ಚಾಂಪಿಯನ್‌ ಥಾಯ್ಲೆಂಡ್‌ನ ರಚಾನೊಕ್‌ ಇಂಟಾನನ್‌ ವಿರುದ್ಧದ ಅಂತಿಮ 8ರ ಘಟ್ಟದ ಹಣಾಹಣಿಗೆ ಅರ್ಹತೆ ಗಿಟ್ಟಿಸಿದರು.

ಮತ್ತೊಂದೆಡೆ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿರುವ ಕಿಡಂಬಿ ಶ್ರೀಕಾಂತ್‌, ಒಂದು ತಿಂಗಳ ವಿಶ್ರಾಂತಿ ನಂತರ ಆಡುತ್ತಿರುವ ಮೊದಲ ಟೂರ್ನಿಯಲ್ಲಿ ಜಯದ ನಾಗಾಲೋಟ ಮುಂದುವರಿಸಿದ್ದಾರೆ. 34 ನಿಮಿಷಗಳ ಕಾಲ ನಡೆದ 16ರ ಘಟ್ಟದ ಪಂದ್ಯದಲ್ಲಿ ಅಧಿಕಾರಯುತ ಆಟವಾಡಿದ ಶ್ರೀಕಾಂತ್‌, 21-19, 21-12 ಅಂತರದ ಗೇಮ್‌ಗಳಿಂದ ಇಂಡೊನೇಷ್ಯಾದ ಸೋನಿ ಡ್ವಿ ಕುಂಕೊರೊ ವಿರುದ್ಧ ಜಯ ತಮ್ಮದಾಗಿಸಿಕೊಂಡರು. ಶ್ರೀಕಾಂತ್‌, ಸೆಮಿಫೈನಲ್‌ ಅರ್ಹತೆಗಾಗಿ ಕೊರಿಯಾದ ಅರ್ಹತಾ ಸುತ್ತಿನ ವಿಜೇತ ಆಟಗಾರ ಕ್ವಾಂಗ್‌ ಹೀ ಹಿಯೊ ಎದುರು ಪೈಪೋಟಿ ನಡೆಸಲಿದ್ದಾರೆ.

ತನ್ವಿ, ಸಮೀರ್‌ಗೆ ನಿರಾಸೆ

ಸಿಂಗಲ್ಸ್‌ ವಿಭಾಗದಲ್ಲಿ ಇನ್ನುಳಿದ ಭಾರತೀಯ ಆಟಗಾರರಾದ ತನ್ವಿ ಲಾಡ್‌ ಮತ್ತು ಸಮೀರ್‌ ವರ್ಮಾ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್‌ ವಿಭಾಗಗಳ ಪ್ರಿ ಕ್ವಾರ್ಟರ್‌ ಫೈನಲ್‌ ಹಣಹಣಿಯಲ್ಲಿ ಮುಗ್ಗರಿಸಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್‌ಅಪ್‌ ಆಗಿರುವ ತನ್ವಿ ಲಾಡ್‌, 18-21, 6-21 ಅಂತರದಲ್ಲಿ ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ ಚೀನಾದ ಯಿಹಾನ್‌ ವ್ಯಾಂಗ್‌ ವಿರುದ್ಧ ಸೋಲೊಪ್ಪಿಕೊಂಡರು. ಆದರೆ, ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಸದಿ ಸಮೀರ್‌ ವರ್ಮಾ, 21-11, 7-21, 19-21 ಅಂತರದ ಗೇಮ್‌ಗಳಿಂದ ಇಂಡೊನೇಷ್ಯಾದ ಆ್ಯಂಟೊನಿ ಸಿನಿಸುಕ ಎದುರು ನಿರಾಸೆ ಅನುಭವಿಸಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>