ಸತತ ಕಳೆದ 29 ವರ್ಷಗಳಿಂದಲೂ ಲಾಲ್ಬಾಬು ಎಂಬ ಇವರು ರಂಜಾನ್ ಉಪವಾಸ ಕೈಗೊಳ್ಳುತ್ತಿದ್ದಾನೆ. ಇಲ್ಲಿನ ಉರ್ದು ಬಜಾರ್ನಲ್ಲಿ ಗೊಂಬೆ ಅಂಗಡಿ ಇಟ್ಟಿಕೊಂಡಿರುವ ಇವರಿಗೆ, ಇಂಥ ಸತ್ಕಾರ್ಯದಿಂದ ಆಂಜನೇಯ ಮುನಿಸಿಕೊಳ್ಳುವುದಿಲ್ಲವೆಂಬ ವಿಶ್ವಾಸವಿದೆ.
'ಎಲ್ಲ ಧರ್ಮಗಳ ಉದ್ದೇಶವೂ ಒಂದೇ ಆಗಿದ್ದು, ಅವಿಚ್ಛಿನ್ನ ಶಕ್ತಿಯನ್ನು ಎಲ್ಲರೂ ನಂಬುತ್ತಾರೆ. ಅದಕ್ಕಾಗಿಯೇ ಎಲ್ಲರೂ ಪ್ರಾರ್ಥಿಸುವುದು,' ಎನ್ನುತ್ತಾರೆ ಬಾಬು.
'ನನ್ನ ತಂದೆ ತನ್ನದೇ ಅಂಗಡಿಯೊಂದನ್ನು ತೆರೆದಾಗ ರಂಜಾನ್ ಉಪವಾಸ ಮಾಡುತ್ತೇನೆಂದು ಹರಕೆ ಹೊತ್ತಿದ್ದರು. ಆಸೆ ಈಡೇರಿದ್ದು, ನಂತರ ಪ್ರತಿ ವರ್ಷವೂ ಅದಕ್ಕೆ ಬದ್ಧರಾಗಿರುತ್ತಿದ್ದರು. ನನಗೂ ಒಂದು ಮಗು ಕರುಣಿಸಿದರೆ, 10 ದಿನ ಉಪವಾಸ ಮಾಡುವುದಾಗಿ ಹರಕೆ ಹೊತ್ತಿದ್ದೆ. ದೇವರು ಕಣ್ಣು ತೆರೆದ. ಅದಕ್ಕೆ ಕಳೆದ 29 ವರ್ಷಗಳಿಂದ ರಂಜಾನ್ನ ಮೊದಲ 10 ದಿನಗಳ ಕಾಲ ತಪ್ಪದೇ ಉಪವಾಸ ಮಾಡುತ್ತಿದ್ದೇನೆ,' ಎನ್ನುತ್ತಾರೆ ಬಾಬು.
ರಂಜಾನ್ ವೇಳೆಯಲ್ಲಿ ಬಾಬು ಸಾಕಷ್ಟು ಧರ್ಮ ಕಾರ್ಯಗಳನ್ನೂ ಮಾಡುತ್ತಾರೆ. 'ಈ ಪವಿತ್ರ ಮಾಸ ಕೇವಲ ಉಪವಾಸ ಮಾಡುವುದಲ್ಲ, ಬದಲಾಗಿ ಶ್ರದ್ಧಾ ಭಕ್ತಿಯುಳ್ಳ ಜೀವನ ನಡೆಸಲು ಸಹಕಾರಿ. ಈ ವೇಳೆಯಲ್ಲಿ ಅನ್ಯರಿಗೆ ಸಹಾಯ ಮಾಡಬೇಕು. ವಿಶೇಷವಾಗಿ ಮಂಗಳವಾರದಂದು ಆಂಜನೇಯನ ಪೂಜೆಗೆ ಮೀಸಲಿಡುವ ಜತೆಗೆ, ಹೆಚ್ಚಿನ ದಾನ ಧರ್ಮಗಳಲ್ಲಿ ತೊಡಗಿಕೊಳ್ಳುತ್ತೇನೆ. ಯಾವುದೇ ಧರ್ಮದಲ್ಲಿ ಒಳ್ಳೆಯದಿದ್ದರೂ ಅದನ್ನು ಸ್ವೀಕರಿಸಬೇಕು,' ಎನ್ನುತ್ತಾರೆ ಬಾಬು.
ಗೋರಖ್ಪುರ್: ಎಲ್ಲಿ ನೋಡಿದರೂ ಧಾರ್ಮಿಕ ಅಸಹಿಷ್ಣುತೆಯದ್ದೇ ಸುದ್ದಿ. ಇದರಿಂದ ಬೇಸತ್ತ ಮಂದಿಗೆ ಮುದ ನೀಡುವಂಥ ಸುದ್ದಿಯೊಂದು ಇಲ್ಲಿದೆ. ಆಂಜನೇಯನ ಭಕ್ತರೊಬ್ಬರು ರಂಜಾನ್ ಉಪವಾಸ ಮಾಡುವ ಮೂಲಕ ಕೋಮು ಸಾಮರಸ್ಯ ಮೆರೆಯುತ್ತಿದ್ದಾರೆ.