Quantcast
Channel: VijayKarnataka
Viewing all articles
Browse latest Browse all 6795

ಸಿಜೇರಿಯನ್‌ಗೂ ಜ್ಯೋತಿಷ್ಯದ ನಂಟು

$
0
0

ಈಗ ಎಲ್ಲೆಡೆಯೂ ಸಿಜೇರಿಯನ್‌ ಹೆರಿಗೆ ಸಾಮಾನ್ಯವಾಗಿದೆ. ತಾಯಿ ಮತ್ತು ಮಗುವಿನ ಆರೋಗ್ಯ ದೃಷ್ಟಿಯಿಂದ ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾಡಲಾಗುವ ಇಂಥ ಹೆರಿಗೆಗೆ ಜ್ಯೋತಿಷ್ಯ ವಿಜ್ಞಾನ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಇಲ್ಲಿ ಓದಿ.

- ಶ್ರೀಪಾದ ಆರ್‌. ಕುಲಕರ್ಣಿ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಲ್ಲಿ ಶೇ. 10 ರಿಂದ 15 ರಷ್ಟು ಹೆರಿಗೆಗಳು ಸಿಜೇರಿಯನ್‌ ಶಸ್ತ್ರಚಿಕಿತ್ಸೆಯಿಂದ ಆಗುತ್ತವೆ. ಮುಂದುವರಿದ ದೇಶಗಳಲ್ಲಿ ಅತ್ಯಂತ ಸಾಮಾನ್ಯಹೆರಿಗೆ ಪ್ರಕ್ರಿಯೆಯಾಗಿದ್ದ ಈಗ ಇದು ಭಾರತದಂತಹ ಮುಂದುವರಿಯುತ್ತಿರುವ ದೇಶದಲ್ಲೂ ಸಾಮಾನ್ಯವಾಗಿದೆ. ಸಿಜೇರಿಯನ್‌ ಹೆರಿಗೆಯನ್ನು ಅತ್ಯಂತ ತುರ್ತು ಸಂದರ್ಭಗಳಲ್ಲಿ ಮಾಡಲಾಗುತ್ತದೆ ಅಥವಾ ತಾಯಿ ಮತ್ತು ಮಗುವಿನ ಆರೋಗ್ಯ ದೃಷ್ಟಿಯಿಂದ ಮೊದಲೇ ದಿನ ನಿಗದಿಗೊಳಿಸಿ ಸಿಜೇರಿಯನ್‌ ಮಾಡಿ ಮಗುವನ್ನು ಹೊರಗೆ ತೆಗೆಯಲಾಗುತ್ತದೆ. ಈ ರೀತಿ ಮಾಡುವಾಗ ಜ್ಯೋತಿಷ್ಯಕ್ಕೆ ಸಂಬಂಧಪಟ್ಟಂತೆಯೂ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ದಂಪತಿ ಜಾತಕ ವಿಶ್ಲೇಷಣೆ

ಸಿಜೇರಿಯನ್‌ನಲ್ಲಿ ಜ್ಯೋತಿಷ್ಯ ಶಾಸ್ತ್ರವು ಎರಡು ವಿಧಗಳಲ್ಲಿ ಸಹಾಯಕವಾಗುತ್ತದೆ. ಮೊದಲನೆಯದಾಗಿ ದಂಪತಿ ಜಾತಕಗಳ ವಿಶ್ಲೇಷಣೆಯಿಂದ ಸಿಜೇರಿಯನ್‌ ಹೆರಿಗೆಯ ಸಾಧ್ಯತೆಗಳನ್ನು ಕಂಡು ಹಿಡಿಯುವುದು ಹಾಗೂ ಎರಡನೆಯದಾಗಿ ಸಿಜೇರಿಯನ್‌ ಶಸ್ತ್ರಚಿಕಿತ್ಸೆಗೆ ಶ್ರೇಷ್ಠ ಸಮಯವನ್ನು ನಿರ್ಧರಿಸುವುದು. ತಾಯಿ ಮತ್ತು ಮದು ಆರೋಗ್ಯದಿಂದಿರಲು ಹಾಗೂ ಮಗುವಿನ ಉಜ್ವಲ ಭವಿಷ್ಯಕ್ಕೆ ಉತ್ತಮ ಮುಹೂರ್ತಗಳನ್ನು ನಿರ್ಧರಿಸಲಾಗುತ್ತದೆ.

ಕುಂಡಲಿ ಯೋಗ

ಪತಿ ಅಥವಾ ಪತ್ನಿಯ ಕುಂಡಲಿಯಲ್ಲಿ ಈ ಕೆಳಗೆ ಹೇಳಿರುವ ಯೋಗಗಳಲ್ಲಿ ಯಾವುದಾದರೊಂದು ಯೋಗವಿದ್ದರೆ ಅವರಿಗೆ ಸಿಜೇರಿಯನ್‌ ಹೆರಿಗೆಯ ಮೂಲಕ ಮಗು ಜನಿಸುತ್ತದೆ. ಅವು ಯಾವುವೆಂದರೆ,

1. ಕರ್ಕ ಲಗ್ನವಿದ್ದು, ಪಂಚಮೇಶನು ಅಷ್ಟಮ ಅಥವಾ ದ್ವಾದಶ ಭಾವದಲ್ಲಿರುವುದು.

2. ಧನು ಲಗ್ನವಿದ್ದು, ಮಂಗಳನು ಅಷ್ಟಮ ಅಥವಾ ದ್ವಾದಶ ಭಾವದಲ್ಲಿರುವುದು.

3. ಮಂಗಳನು ಪಂಚಮ, ದಶಮ, ಏಕಾದಶ ಅಥವಾ ದ್ವಿತೀಯ ಭಾವದಲ್ಲಿರುವುದು.

4. ಪಂಚಮೇಶನು ಮಂಗಳನ ಪ್ರಭಾವದಲ್ಲಿರುವುದು.

5. ಪಂಚಮೇಶನು ಷಷ್ಠ, ಅಷ್ಟಮ ಅಥವಾ ದ್ವಾದಶ ಭಾವದಲ್ಲಿರುವುದು

6. ಪಂಚಮೇಶನು ಷಷ್ಠೇಶ, ಅಷ್ಟಮೇಶ ಅಥವಾ ದ್ವಾದಶೇಷರಿಂದ ಯುತ, ದೃಷ್ಟ ಅಥವಾ ರಾಶಿ ಪರಿವರ್ತನದಲ್ಲಿದ್ದರೆ

7. ಶಿಶು ಜನನ ಕಾಲದಲ್ಲಿ ಪಂಚಮ ಭಾವವು ಪಾಪಗ್ರಹಗಳ ಪ್ರಭಾವದಲ್ಲಿರುವುದು

8. ಮಗುವಿನ ಜನನ ಕಾಲದಲ್ಲಿ ತಂದೆ ಅಥವಾ ತಾಯಿಯ ದಶಾನಾಥರು ದ್ವಿತೀಯ, ಷಷ್ಠ, ಸಪ್ತಮ, ಅಷ್ಟಮ ಅಥವಾ ದ್ವಾದಶ ಭಾವಗಳೊಂದಿಗೆ ಅಥವಾ ಮಂಗಳ ಗ್ರಹದೊಂದಿಗಿದ್ದರೆ.

ಈ ಮೇಲಿನ ಎಲ್ಲಾ ಯೋಗಗಳಲ್ಲಿ ಮಗುವಿನ ಜನನವು ಸಿಜೇರಿಯನ್‌ ಮೂಲಕ ಆಗುತ್ತದೆ.

ಉತ್ತಮ ಸಮಯ

ಸಾಮಾನ್ಯವಾಗಿ ಪ್ರಸವದ ಸಂಭಾವ್ಯ ದಿನಗಳಿಗಿಂತ ಮೊದಲು ಗರ್ಭಿಣಿಯ ಮತ್ತು ಗರ್ಭದೊಳಗೆ ಶಿಶುವಿನ ಸ್ಥಿತಿಯ ಅನುಸಾರ ಪ್ರಸವದ ವಿಧಾನವನ್ನು ನಿರ್ಧರಿಸಲಾಗುತ್ತದೆ. ಅಂದರೆ ಸಿಜೇರಿಯನ್‌ ಮಾಡಲು ಕನಿಷ್ಠ ನಾಲ್ಕೈದು ದಿನಗಳ ಸಮಯಾವಕಾಶವಿರುತ್ತದೆ. ಆಗ ನಾವು ಉತ್ತಮವಾದ ಸಮಯ ಅಥವಾ ಮುಹೂರ್ತವನ್ನು ನಿರ್ಧರಿಸಬಹುದು. ಈ ವೇಳೆಯಲ್ಲಿ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.

1. ಜನ್ಮ ಸಮಯದಲ್ಲಿ ಚಂದ್ರನು ರೇವತಿ, ಅಶ್ವಿನಿ, ಆಶ್ಲೇಷಾ, ಮಘಾ, ಜೇಷ್ಠಾ ಮತ್ತು ಮೂಲ ನಕ್ಷ ತ್ರಗಳಲ್ಲಿರಬಾರದು.

2. ಅಮಾವಾಸ್ಯೆ, ಸಂಕ್ರಾಂತಿ ಅಥವಾ ಗ್ರಹಣ ಕಾಲದಲ್ಲಿ ಜನನವಾಗಬಾರದು.

3. ಲಗ್ನದ ಪ್ರಾರಂಭ ಅಥವಾ ಸಮಾಪ್ತಿಯ ಅರ್ಥಾತ್‌ ಸಂಧಿ ಕಾಲವನ್ನು ಸಿಜೇರಿಯನ್‌ಗೆ ನಿಗದಿಪಡಿಸಬಾರದು.

4. ಲಗ್ನ ನಿರ್ಧರಿಸುವ ಸಮಯದಲ್ಲಿ ಕೇಂದ್ರ, ತ್ರಿಕೋನ ಭಾವಗಳಲ್ಲಿ ಅಧಿಕ ಗ್ರಹಗಳಿರಬೇಕು, ಷಷ್ಠ-ಅಷ್ಟಮ-ದ್ವಾದಶ ಭಾವಗಳಲ್ಲಿ ಗ್ರಹಗಳಿರಬಾರದು. ಇದ್ದರೂ ಲಗ್ನೇಶ, ಪಂಚಮೇಶ, ಭಾಗ್ಯೇಶ ಅಥವಾ ದಶಮೇಶನಿರಬಾರದು.

5. ತ್ರಿಕೋನೇಶ ಮತ್ತು ಕೇಂದ್ರೇಶದಲ್ಲಿ ಯುತಿ, ದೃಷ್ಟಿ ಅಥವಾ ರಾಶಿ ಪರಿವರ್ತನಾ ಸಂಬಂಧವಿರಬೇಕು. ಕಾಲ ಸರ್ಪಾದಿ ಯೋಗಗಳಿರಬಾರದು.

6. ಹಂಸ, ಮಾಲವ್ಯ, ಗಜಕೇಸರಿ, ರಾಜಯೋಗಾದಿ ಶುಭ ಯೋಗಗಳಿರಬೇಕು. ಪಂಚಮ ಭಾವವು ರಾಹುವಿನ ಪ್ರಭಾವದಲ್ಲಿರಬಾರದು. ಸಪ್ತಮ ಭಾವವು ಮಂಗಳಾದಿ ಪಾಪ ಗ್ರಹಗಳಿಂದ ಯುಕ್ತ ಅಥವಾ ದೃಷ್ಟವಾಗಿರಬಾರದು.

7. ಅಷ್ಟಮ ಭಾವದಲ್ಲಿ ರಾಹು-ಗುರು, ರಾಹು-ಚಂದ್ರ-ಸೂರ್ಯ ಅಥವಾ ರಾಹು-ಲಗ್ನೇಶರ ಯುತಿಯೂ ಇರಬಾರದು. ಸಿಜೇರಿಯನ್‌ ಸಮಯವನ್ನು ನಿರ್ಧರಿಸುವಾಗ ಲಗ್ನವು ನವಾಂಶದಲ್ಲಿ ಶುಭ ಭಾವದಲ್ಲಿರಬೇಕು.

8. ಶುಭ ಭಾವೇಶರ ದಶಾಗಳು ಜೀವನದ ಪೂರ್ವಾರ್ಧದಲ್ಲಿ ಬರುವಂತೆ ಜನ್ಮ ನಕ್ಷ ತ್ರವನ್ನು ನಿರ್ಧರಿಸಬೇಕು.

ಒಟ್ಟಿನಲ್ಲಿ ಯಾವುದೇ ಕಾರ್ಯವನ್ನು ಆರಂಭಿಸುವ ಪೂರ್ವದಲ್ಲಿ ಮುಹೂರ್ತವನ್ನು ನಿರ್ಧರಿಸುವಂತೆ ಸಿಜೇರಿಯನ್‌ ಮೂಲಕ ಮಗುವಿನ ಜನನದ ಮುಹೂರ್ತವನ್ನು ನಿರ್ಧರಿಸಿ ಅದರ ಜೀವನ ಅಥವಾ ಭಾಗ್ಯದ ದಿಶೆಯನ್ನು ಬದಲಿಸಬಹುದು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>