Quantcast
Channel: VijayKarnataka
Viewing all articles
Browse latest Browse all 6795

ಜನ ನನ್ನ ಹಾಡು ಮೆಚ್ಚಿದರೆ ಅದುವೇ ದೊಡ್ಡ ಅವಾರ್ಡ್‌

$
0
0

* ಪದ್ಮಿನಿ ಜೈನ್‌ ಎಸ್‌.

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಹಾಡುಗಳು ಎಲ್ಲ ಕಡೆ ರಿಂಗಣಿಸುತ್ತಿವೆ. ಕಾರಣ ಅದರ ವಿಭಿನ್ನ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನ. ಹತ್ತರಲ್ಲಿ ಹನ್ನೊಂದು ಎಂಬಂತೆ ಮಾಮೂಲು ಸಂಗೀತವನ್ನು ನೀಡದೆ ಡಿಫರೆಂಟ್‌ ಆದ ಪ್ರಯತ್ನ ಮಾಡಿದೆ ಚಿತ್ರತಂಡ. ಈ ಪ್ರಯತ್ನದಲ್ಲಿ ಗೆದ್ದಿದ್ದು ನಿರ್ದೇಶಕ ಹೇಮಂತ್‌ಗೆ ಖುಷಿ ತಂದಿದೆ. ಇವರ ಡ್ರೀಂ ಪ್ರಾಜೆಕ್ಟ್ನ ಈ ಬಿಗ್‌ ಸಕ್ಸಸ್‌ನಲ್ಲಿ ಸಂಗೀತ ನಿರ್ದೇಶಕ ಚರಣ್‌ ರಾಜ್‌ ಎಮ್‌.ಆರ್‌. ಅವರ ಪಾತ್ರ ದೊಡ್ಡದು. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಸಂಗೀತವನ್ನು ಕಟ್ಟಿಕೊಟ್ಟಿದ್ದಾರೆ.

'ನಾನು ಪ್ರಯೋಗಪ್ರಿಯ. ಆದರೆ ನನ್ನ ಎಕ್ಸ್‌ಪಿರಿಮೆಂಟ್‌ಗಳು ನಿರ್ದೇಶಕರಿಗೆ ಇಷ್ಟವಾಗದೇ ಹೋದರೆ ಹೊಸದನ್ನು ಕೊಡಲು ಸಾಧ್ಯವಾಗಲ್ಲ. ಗೋಧಿ ಬಣ್ಣ... ಚಿತ್ರದಲ್ಲಿ ನನಗೆ ಸಿಕ್ಕ ತಂಡವೂ ನನ್ನ ಹಾಗೆ ಪ್ರಯೋಗಗಳನ್ನು ಮಾಡುವ ಮನಸ್ಥಿತಿಯದ್ದು. ನಿರ್ದೇಶಕ ಹೇಮಂತ್‌ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ಒಂದೇ ಅಭಿರುಚಿಯ ವ್ಯಕ್ತಿಗಳು ಸಿಕ್ಕಾಗ ಕೆಲಸದಲ್ಲಿ ಕ್ರಿಯಾಶೀಲತೆ ತೋರಬಹುದು. ಇದರ ಫಲವಾಗಿ ಚಿತ್ರದ ಹಾಡುಗಳಿಗೆ ಸಕ್ಸಸ್‌ ಸಿಕ್ಕಿದೆ' ಎನ್ನುತ್ತಾರೆ ಚರಣ್‌ ರಾಜ್‌.

'ಬೇರೆ ಚಿತ್ರಗಳನ್ನು ಟ್ರೀಟ್‌ ಮಾಡಿದಂತೆ ಈ ಚಿತ್ರವನ್ನು ಟ್ರೀಟ್‌ ಮಾಡಲು ಸಾಧ್ಯವಿಲ್ಲ. ಸ್ಕ್ರಿಪ್ಟ್‌ ತುಂಬ ಡಿಫರೆಂಟ್‌ ಆಗಿತ್ತು. ಅಲ್ಲದೆ ಎಲ್ಲ ಪಾತ್ರಕ್ಕೂ ವೇಟೇಜ್‌ ಇತ್ತು. ಹಾಗಾಗಿ ಮ್ಯೂಸಿಕಲ್‌ ಟ್ರೀಟ್‌ಮೆಂಟ್‌ ಕೂಡ ಅಷ್ಟೇ ಪರಿಣಾಮಕಾರಿಯಾಗಿ ಕೊಡಬೇಕಾಗಿತ್ತು. ಹಾಡಿಗಾಗಿ ಸನ್ನಿವೇಶವನ್ನು ಕ್ರಿಯೇಟ್‌ ಮಾಡಿಲ್ಲ. ಬದಲಿಗೆ ಹಾಡಿನ ಮೂಲಕ ಕತೆ ಮುಂದುವರಿಯುತ್ತದೆ, ಮುಂದಿನ ದೃಶ್ಯಗಳಿಗಾಗಿ ಹಾಡು ಗಟ್ಟಿ ಪರಿಸರವನ್ನು ನಿರ್ಮಿಸಿ ಕೊಡುತ್ತದೆ' ಎಂದು ಹಾಡುಗಳ ಸ್ಪೆಷಾಲಿಟಿ ಬಗ್ಗೆ ಮ್ಯೂಸಿಕ್‌ ಡೈರೆಕ್ಟರ್‌ ಮಾತನಾಡುತ್ತಾರೆ.

ಚರಣ್‌ ಈ ಹಿಂದೆ 'ಹರಿವು' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. 'ಗೋಧಿ ಬಣ್ಣ...' ಚಿತ್ರಕ್ಕೂ ಅಂತಹ ಪ್ರಶಸ್ತಿ ನಿರೀಕ್ಷಿಸುತ್ತಿದ್ದೀರಾ ಎಂದು ಕೇಳಿದರೆ, ಒಂದು ಹಂಬಲ್‌ ಉತ್ತರ ಸಿಗುತ್ತದೆ 'ಯಾವ ಕಲಾವಿದನೂ ಪ್ರಶಸ್ತಿಗಾಗಿ ಕೆಲಸ ಮಾಡಲ್ಲ. ಸಿನಿಮಾ ಗೆದ್ದರೆ, ಜನ ಹಾಡನ್ನು ಗುನುಗಿದರೆ ಅದಕ್ಕಿಂತ ಬೆಸ್ಟ್‌ ಪ್ರಶಸ್ತಿ ಬೇರೆ ಇಲ್ಲ' ಎನ್ನುತ್ತಾರೆ.

ಈ ಚಿತ್ರದಲ್ಲಿ ಒಂಬತ್ತು ಹಾಡುಗಳಿದ್ದು ಪ್ರತಿ ಹಾಡಿಗೂ ಬೇರೆ ಬೇರೆ ಉಪಕರಣ ಹಾಗೂ ಸ್ಟೈಲ್‌ ಬಳಸಿದ್ದಾರೆ. ಓಲ್ಡ್‌ ಸ್ಕೂಲ್‌ ಜ್ಯಾಗ್‌, ಶಾಸ್ತ್ರೀಯ, ಹಿಂದೂಸ್ತಾನಿ, ರಾಕ್‌ ಬ್ಯಾಲೆ, ರೆಟ್ರೋ ಫ್ಲೇವರ್‌, ಫಿಲ್ಮಿ ಜಾಂಡರ್‌, ಮಾಡರ್ನ್‌ ಎಲೆಕ್ಟ್ರಾನಿಕ್‌ ಎಲಿಮೆಂಟ್ಸ್‌ ... ಹೀಗೆ ಒಂದೊಂದು ಹಾಡಿಗೆ ಒಂದೊಂದು ರೀತಿಯ ಟ್ರೀಟ್‌ಮೆಂಟ್‌ ಸಿಕ್ಕಿದೆ. ಗೀತೆ ಸಾಹಿತ್ಯ ಕೂಡ ಡಿಫರೆಂಟ್‌ ಆಗಿದ್ದು ನಾಯಕ ರಕ್ಷಿತ್‌ ಶೆಟ್ಟಿ 'ನಾ ಈ ಸಂಜೆಗೆ' ಹಾಡನ್ನು ಬರೆದಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾ ತೆರೆ ಕಾಣಲಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>