Quantcast
Channel: VijayKarnataka
Viewing all articles
Browse latest Browse all 6795

ದಾರಿ ದೀಪ: ವಿಖ್ಯಾತರು ಜನಿಸಿದ್ದೂ ಅಮವಾಸ್ಯೆಯಂದು

$
0
0

1. ಮದುವೆ ಜಾತಕ ಹೊಂದಾಣಿಕೆಗೆ ಒಬ್ಬೊಬ್ಬರು ಒಂದೊಂದು ಹೇಳುವರು. ಮುಖ್ಯ ವಿಷಯ ನೋಡಬೇಕಾದ್ದೇನು ಗುರುಗಳೇ?

ನೈನಾಶ್ರೀ, ಬೆಂಗಳೂರು

ಜ್ಯೋತಿಷ್ಯ ಗ್ರಂಥಗಳು ಬಹಳ ಮತ್ತು ಬಹು ಅರ್ಥ ಬಾಹುಳ್ಯದ್ದು. ಹೀಗಾಗಿ ಜ್ಯೋತಿಷಿಗಳು ಅವರವರ ತಿಳಿವು ಮತ್ತು ಜಾತಕರ ಭಾಗ್ಯದಂತೆ ಮೇಳಾಮೇಳಿ ಮಾಡುವರು. ಈ ಯುಗಕ್ಕೆ ನಕ್ಷತ್ರ ಯೋಗ, ಗ್ರಹಬಲ, ಶುಕ್ರ ಸ್ಥಿತಿ ಮತ್ತು ನವಾಂಶ ನೋಡಿದರೆ ಸಾಕು. ಅನೇಕಾನೇಕ ಜಟಿಲ ವಿಷಯಗಳು ಈ ವಿಷಯದಲ್ಲಿ ಇದ್ದು, ಇಂದಿನ ಕಾಲಮಾನಕ್ಕೆ ಮೇಲಿನ ಮುಖ್ಯ ವಿಚಾರ ಹೊಂದಿಸಿ ಹೇಳಿದರೆ ಸಾಕು.

2. ಎಂಜಿನಿಯರಿಂಗ್‌ ಮುಗಿಸಿ ಯಾವ ಕೆಲಸವೂ ಸಿಗದೆ ಕಂಗೆಟ್ಟಿರುವೆ. ದಾರಿ ತೋರಿ.

ವಿವೇಕ್‌ ಬಿ.ಆರ್‌, ಬೆಂಗಳೂರು

ತಾಳ್ಮೆ ಬಹುದೊಡ್ಡ ತಪಸ್ಸಾಗಿದೆ. ಎಲ್ಲವೂ ನಮ್ಮ ನೇರಕ್ಕೆ ನಡೆವಂತಾದರೆ ಈ ಜಗತ್ತು ಹೀಗಿರುತ್ತಿರಲಿಲ್ಲ. ಪ್ರಯತ್ನ ಜಾರಿಯಲ್ಲಿರಲಿ. ಕುಲ ದೇವತಾ ದರ್ಶನ ಮಾಡಿ ಮತ್ತು ಮಂತ್ರಾಲಯ ಪ್ರಭುಗಳ ದರ್ಶನವನ್ನೂ ಮಾಡಿ ಬನ್ನಿ. ನವರಾತ್ರಿ ಹೊತ್ತಿಗೆ ಒಳ್ಳೆಯ ಕೆಲಸ ದೊರೆಯುವುದು.

3. ಅಮಾವಾಸ್ಯೆ ಹುಟ್ಟಿನಿಂದ ದೋಷವಿದೆಯೇ? ಇದರಿಂದ ಮನೆಗೆ ತೊಂದರೆಯೇ?

ಮೀನಾಕ್ಷಿ, ಚಾಮರಾಜನಗರ

ಕೃಷ್ಣ ಪಕ್ಷ ಚತುರ್ದಶಿ, ಅಮಾವಾಸ್ಯೆ-ಪಾಡ್ಯದವರೆಗೂ ಸಂಜೆಯ ಮೇಲೆ ಹುಟ್ಟಿದರೆ ಚಂದ್ರ-ರವಿ ಬಲ ಎರಡಕ್ಕೂ ತೊಂದರೆ. ಅದನ್ನು ಕ್ಷೀಣ ಗ್ರಹಯೋಗ ಎನ್ನುವರು. ಅದಕ್ಕೆ ತಕ್ಕ ಶಾಂತಿ ಮಾಡಿದರೆ ಒಳಿತು. ಆದರೆ ಅದು ಅಶುಭ ಎನ್ನುವುದು ಮಾತ್ರ ತಪ್ಪು. ಅನೇಕಾನೇಕ ವಿಖ್ಯಾತರು ಅಮಾವಾಸ್ಯೆಯಂದು ಜನಿಸಿದವರು. ಅವರವರ ಕುಲಪುಣ್ಯ, ಜೀವರ ಕರ್ಮಪಾಕದ ಮೇಲೆ ಶುಭಾಶುಭ ನಿರ್ಧಾರವಾಗುವುದೇ ಹೊರತು ಬರಿದೇ ತಿಥಿ ವಿಶೇಷದಿಂದ ಅಲ್ಲ.

4. ಬಿ.ಕಾಂ ಮುಗಿಸಿ ಟೀಚರ್‌ ಆಗಬೇಕೆಂಬ ಇರಾದೆಯಿದೆ. ಆದರೆ ಓದಿನಲ್ಲಿ ಅಡೆತಡೆಯಿದ್ದು, ಏಕಾಗ್ರತೆಯಿಲ್ಲ. ಜಾತಕ ಪರಿಶೀಲಿಸಿ.

ಲಕ್ಷ್ಮಿ, ಕುಣಿಗಲ್‌

ನಿಮಗೆ ಮದುವೆ ತಡ ಆಗುತ್ತಿದೆ ಎಂಬ ಚಿಂತೆ ಮತ್ತು ವಯಸ್ಸು ಮೀರುತ್ತಿದೆ ಎಂಬ ಆತಂಕವಿದೆ. ಹೀಗಾಗಿ ಓದಿನಲ್ಲಿ ಏಕಾಗ್ರತೆ ಮೂಡುತ್ತಿಲ್ಲ. ಇದು ಸಹಜ. ಸದ್ಯಕ್ಕೆ ಪರೀಕ್ಷೆ ಮುಗಿಸಿ ಅದರಲ್ಲಿಯೇ ಮಗ್ನರಾಗಿ. ಆನಂತರ ನೀವಿಷ್ಟಪಡುವ ಹುಡುಗನೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಿ. ಆತಂಕಪಟ್ಟರೆ ಪರೀಕ್ಷೆಯೂ ಇಲ್ಲ, ಮದುವೆಯೂ ಇಲ್ಲ ಎಂದಾಗುವುದು ಎಚ್ಚರ.

5. ಓದು ಇನ್ನೂ ಮುಗಿದಿಲ್ಲ. ಮನೆಯಲ್ಲಿ ಹಣದ ಅನುಕೂಲವಿಲ್ಲ. ಮುಂದೆ ಏನಾಗುವುದೋ ಎಂದು ಗಾಬರಿಯಾಗಿದೆ.

ಮೇಘನಾ, ಬೆಂಗಳೂರು

'ಕೊಡುವ ಕರ್ತೃ ಬೇರೆ ಇರುತಿರೆ, ಬಿಡು ಬಿಡು ಚಿಂತೆಯನು' ಎಂದಿದ್ದಾರೆ ದಾಸರು. ಸದ್ಯಕ್ಕೆ ರವಿದೆಶೆಯಿದ್ದು ಸಮರ್ಥವಾಗಿ ಅಡ್ಡಿ, ಆತಂಕವನ್ನು ನೀಗುವಿರಿ. ಧೈರ್ಯ ತಾಳಿರಿ. ನಿಮಗೆ ವಿದ್ಯಾವಂತರ ಸಂಗಕ್ಕಿಂತ ಅನ್ಯರ ಒಡನಾಟ ಹೆಚ್ಚು. ಇದು ಮಾರಕವಾದೀತು ಜೋಕೆ. ಇಷ್ಟ ದೇವರ ಮತ್ತು ಶ್ರೀರಾಯರ ಸೇವೆಯಿಂದ ಶುಭವಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>