Quantcast
Channel: VijayKarnataka
Viewing all articles
Browse latest Browse all 6795

ಅಂದರ್ ಬಾಹರ್: ಮುಲಾಯಂ ಪಟ್ಟುಗಳು

$
0
0

ಪಕ್ಷದಿಂದ ಹೊರಹಾಕಿದ ಅಮರ್‌ಸಿಂಗ್ ಅವರನ್ನು ಮುಲಾಯಂ ಮತ್ತೆ ಏಕೆ ಸೈಕಲ್ ಹತ್ತಿಸಿಕೊಂಡು ರಾಜ್ಯಸಭೆಗೆ ಲೈಸೆನ್ಸ್ ಕೊಟ್ಟಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಎಸ್‌ಪಿ ನಾಯಕರು ತಲೆ ಪರ ಪರ ಕೆರೆದುಕೊಳ್ಳುತ್ತಿದ್ದಾರೆ. ಅಜಂ ಖಾನ್ ಮತ್ತು ಆರ್ ಜಿ ಯಾದವ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ಛೆ ಛೆ ಇದು ಸರಿಯಲ್ಲ ಎಂದು ಶತಪಥ ತಿರುಗುತ್ತ ಗೊಣಗುತ್ತಿದ್ದಾರೆ. ಎಷ್ಟಿದ್ದರೂ ಹಳೇ ದೊಸ್ತಿಯಲ್ಲವೇ ಅಮರ್ ಬಗ್ಗೆ ಅಮರವಾದ ಪ್ರೀತಿ ಇಟ್ಟುಕೊಂಡವರು ಹೇಳುವ ಪ್ರಕಾರ, ಸಿಂಗ್‌ಗೂ ಬಿಜೆಪಿಗೂ ಒಳ್ಳೆಯ ನಂಟಿದೆ. ಇದನ್ನು ಬಳಸಿಕೊಂಡು ಉತ್ತರಪ್ರದೇಶದ ವಿಧಾನಸಭೆ ಚುನಾವಣೆ ನಡೆಯುವವರೆಗೂ ಯಾವುದೇ ಕಾಳಗ ನಡೆಯದಂತೆ ನೋಡಿಕೊಳ್ಳುವ ಅಂದರೆ ಎದುರಾಳಿಗಳನ್ನು ಹೋರಾಟಕ್ಕೆ ಬಿಡದೆ ಅತ್ತ ಇತ್ತ ಕೈ ಜಗ್ಗಿ ನಿಲ್ಲಿಸಿಕೊಳ್ಳುವ ಪಾತ್ರವನ್ನು ಈ ಮಾಜಿ ಪೈಲ್ವಾನ್ ತಮ್ಮ ಹಳೆಯ ದೋಸ್ತಿಗೆ ವಹಿಸಿದ್ದಾರಂತೆ. ಮುಲಾಯಂಗೂ ಬಿಜೆಪಿಗೂ ಏನು ವಿರಸ? ಅವರೇಕೆ ಸೈಕಲ್ ಪಂಚರ್ ಮಾಡುತ್ತಾರೆ? ನೆನಪಿರಲಿ 2003-07ರ ವರೆಗೆ ಮುಲಾಯಂ ಉತ್ತರ ಪ್ರದೇಶದ ಸಿಎಂ ಆಗಿದ್ದಾಗ 100 ಕೋಟಿ ಅಕ್ರಮ ಆಸ್ತಿ ಗಳಿಸಿದರು ಎಂಬ ಆರೋಪ ಸುಪ್ರೀಂ ಕಟ್ಟೆ ಹತ್ತಿ, ಇದರ ಕುರಿತು ಸಿಬಿಐ ತನಿಖೆ ನಡೆಯುತ್ತಿದೆ. ಯುಪಿಎ ಜತೆ ಸ್ನೇಹ ಕುದುರಿಸಿಕೊಂಡು ಅವರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಒಂದು ವೇಳೆ ನಿದ್ರಿಸುತ್ತಿರುವ ಈ ಪ್ರಕರಣವನ್ನು ಮೋದಿ ತಿವಿದು ಎಬ್ಬಿಸಿದರೆ ಮುಲಾಯಂ ಕುಟುಂಬಕ್ಕೆ ಯಮಗಂಡಕಾಲ ಗ್ಯಾರಂಟಿ. ಕಮಲ ಪಾಳೆಯವನ್ನು ಸಮಾಧಾನದಿಂದ ಇಡುವುದಕ್ಕೆ ಅಮರ್ ಸಮರ್ಥ. ಹುಣಸೆ ಮುಪ್ಪಾದರೂ ಹುಳಿ ಮುಪ್ಪಲ್ಲ ಕುಸ್ತಿ ಆಡದಿದ್ದರೂ ಪಟ್ಟುಗಳನ್ನು ಯಾರೂ ಮರೆಯೋಲ್ಲ.

**

ಶೆಟ್ಟರ್ ಸಿಕ್ಸರ್ ಬಾರಿಸಿದರ್ !

ಮೂರು ವರ್ಷ ಆಟ ಮರೆತವರಂತೆ ಬ್ಯಾಟ್ ಬೀಸಿದ ಜಗದೀಶ್ ಶೆಟ್ಟರ್ ಇದೀಗ ಇದ್ದಕ್ಕಿದ್ದಂತೆ ವಿರಾಟ್ ಕೊಹ್ಲಿಯಂತೆ ಸಿದ್ದು ಸರಕಾರವನ್ನು ಸಿಕ್ಸರ್ ಎತ್ತುತ್ತಿದ್ದಾರೆ. ಜಸ್ಟ್ ಪಾಸ್ ಎಂದುಕೊಂಡವರು ಕಣ್ಣ ಮುಂದೆ ರ‌್ಯಾಂಕ್ ಅಂಕಪಟ್ಟಿ ಕಾಣಿಸುತ್ತಿದೆ! ಯಡಿಯೂರಪ್ಪ ಬಿಜೆಪಿ ರಾಜ್ಯಘಟಕದ ಅಧ್ಯಕ್ಷರಾದ ಕೂಡಲೇ ಶೆಟ್ಟರ್ ಫಾರ್ಮ್‌ಗೆ ಬಂದಿದ್ದಾರೆ ಎಂಬುದು ಹಲವರ ಅಭಿಮತ. ಯಡಿಯೂರಪ್ಪ ಮುಖ್ಯರಂಗಕ್ಕೆ ಬಂದ ನಂತರ ತಾವೆಲ್ಲ ಸೈಡ್ ಆ್ಯಕ್ಟರ್‌ಗಳಾಗಿ ಬಿಡುತ್ತೇವೆ ಎಂಬ ಭಯವೇ ಬಿಜೆಪಿ ಎರಡನೇ ಮೂರನೇ ಶ್ರೇಣಿಯ ನಾಯಕರ ಕ್ರಿಯಾಶೀಲತೆಗೆ ಕಾರಣ. ತನ್ನ ಅಸ್ತಿತ್ವಕ್ಕೆ ಸಂಚಕಾರ ಬಂದಾಗ ಜ್ಞಾನೇಂದ್ರಿಯಗಳು ಚುರುಕಾಗಿಬಿಡುವುದು ಸಹಜ ಬಿಡಿ. ಮೃದು ಸ್ವಭಾವದ ಶೆಟ್ಟರ್ ಗರ್ಜಿಸುತ್ತಿದ್ದಾರೆ. ಕಮಲ ಪಾಳೆಯದಿಂದ ಇನ್ನಷ್ಟು ರಣಗರ್ಜನೆಗಳು ಕೇಳಿ ಬರುತ್ತವೆ. ಕಾಯ್ತಾ ಇರಿ....


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>