Quantcast
Channel: VijayKarnataka
Viewing all articles
Browse latest Browse all 6795

ಗೊಂದಲದಿಂದ ಶಾಂತಿಯೆಡೆಗೆ

$
0
0

ಸಾಮಾನ್ಯ ಮಾನಸಿಕ ಚಟುವಟಿಕೆಗೆ ಯಾವುದೇ ತೆರನಾದ ಅಡ್ಡಿಗಳು ಉಂಟಾದರೆ ಅವುಗಳನ್ನು ಗೊಂದಲಗಳೆನ್ನಬಹುದು. ಮಾನಸಿಕ ಗೊಂದಲವು ಜೀವಕಾಂತ ಶಕ್ತಿಯ ಕ್ರಿಯೆಗೆ, ದೈಹಿಕ ಖಾಯಿಲೆಗಳು ಅಥವಾ ನಾವು ಊಹಿಸಿದ್ದಕ್ಕೆ ವಿರುದ್ಧವಾಗಿ ನಡೆಯುವ ಘಟನೆಗಳಿಂದ, ತೊಂದರೆಗಳು ಉಂಟಾಗುತ್ತವೆ. ಕಾರಣವೇನೇ ಇರಲಿ, ಮಾನಸಿಕ ಗೊಂದಲಗಳು ಮನಸ್ಸಿನ ಕ್ರಿಯಾ ಶಕ್ತಿಯನ್ನು ಕುಗ್ಗಿಸುತ್ತವೆ. ಆದ್ದರಿಂದ ಇಡೀ ವ್ಯಕ್ತಿತ್ವಕ್ಕೆ ತೊಂದರೆಯಾಗುತ್ತದೆ. ಹೇಗೆ ಎಲೆಕ್ಟ್ರಾನಿಕ್‌ ಯಂತ್ರವೊಂದು ಶಾರ್ಟ್‌ ಸಕ್ರ್ಯುಟ್‌ ಆಗಿದ್ದರಿಂದ, ಪೂರ್ಣವಾಗಿ ಅಥವಾ ಭಾಗಶಃ ತೊಂದರೆಗೊಳಗಾಗುತ್ತದೆಯೋ, ಹಾಗೆಯೇ ಮಾನಸಿಕ ಗೊಂದಲದಿಂದ ಒಬ್ಬಾತನ ಜೀವಕಾಂತ ಶಕ್ತಿಯ ಚಲನೆ ಮತ್ತು ಕ್ರಿಯೆಗಳು ತೊಂದರೆಗೆ ಒಳಗಾಗುತ್ತವೆ. ಈ ತೊಂದರೆ ಇಡಿ ದೇಹ ಮತ್ತು ಇಂದ್ರಿಯಗಳ, ಕೈಕಾಲುಗಳ, ಜಟಿಲ ಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಗೊಂದಲವು ಪದೇ ಪದೆ ಉಂಟಾದರೆ ಅದು ಅಸ್ವಸ್ಥ್ಥತೆಗೆ ದಾರಿ ಮಾಡಿಕೊಡುತ್ತದೆ. ಮನುಷ್ಯನ ಜೀವನದಲ್ಲಿ ಆತನ ಮಾನಸಿಕ ಅಕಾಂಕ್ಷೆಗಳು ಈಡೇರದಿರುವುದರಿಂದಲೇ ಬಹುತೇಕ ಗೊಂದಲಗಳು ಅಥವಾ ದ್ವಂದ್ವಗಳು ಪ್ರಾರಂಭವಾಗಿ ಬೆಳೆಯುತ್ತವೆ. ನಮ್ಮ ಮಾನಸಿಕ ಗೊಂದಲಗಳ ದುಷ್ಪರಿಣಾಮಕ್ಕೆ ನಾವು ಒಳಗಾಗಬಾರದು. ಏಕೆಂದರೆ ಯಾವುದೇ ಕಾಲದಲ್ಲಿ ಮನಸ್ಸಿನಲ್ಲಿ ಗೊಂದಲಗಳು ಅಪೇಕ್ಷ ಣೀಯವಲ್ಲ. ನಾವು ಈ ಅಂಶದ ಬಗೆಗೆ ಅಳವಾಗಿ ಚಿಂತಿಸೋಣ ಮತ್ತು ನಮ್ಮ ವ್ಯಕ್ತಿತ್ವವನ್ನು ಎತ್ತರಕ್ಕೆ ಬೆಳೆಸಿಕೊಂಡು ಎಲ್ಲ ರೀತಿಯ ಗೊಂದಲಗಳನ್ನೂ ಮೀರಿ ನಿಲ್ಲೋಣ.

ಈಗಾಗಲೇ ಹೇಳಿದಂತೆ ಹೆಚ್ಚಿನ ಗೊಂದಲಗಳ ಮೂಲ ಆಶಯಗಳನ್ನು ಈಡೇರಿಸಲಾಗದ ವಿಫಲತೆ. ನಾವು ವಿಶ್ಲೇಷಿಸಿ ಅರ್ಥಮಾಡಿಕೊಳ್ಳಬೇಕಾದದ್ದು ತಪ್ಪುಆಶಯದಲ್ಲಿದೆಯೋ ಅಥವಾ ತಪ್ಪು ಕ್ರಿಯಾ ವೈಫಲ್ಯದಲ್ಲಿದೆಯೋ ಎಂಬುದನ್ನು ಗಮನಿಸೋಣ. ಎಲ್ಲ ಘಟನೆಗಳೂ ಕಾರಣ ಪರಿಣಾಮಗಳ ಪ್ರಕೃತಿ ತತ್ವಕ್ಕನುಗುಣವಾಗಿಯೇ ಆಗುತ್ತವೆ. ವಿಫಲತೆಯೂ ಅಂಥದ್ದೇ ಕಾರಣ ಪರಿಣಾಮಗಳ ದೈವಿಕ ನ್ಯಾಯಕ್ಕನುಗುಣವಾಗಿಯೇ ಉಂಟಾಗುವಂಥದ್ದು. ಯಾವುದೇ ಪರಿಣಾಮವು ತಪ್ಪಾಗಿ ಬಂದಿದೆ ಎಂದು ಯೋಚಿಸುವುದೇ ತಪ್ಪು. ನಮ್ಮ ಸಫಲತೆ ಅಥವಾ ತೃಪ್ತಿಯ ಆಶಯವೇ ತಪ್ಪಾಗಿರಬಹುದು. ಕಾರಣಗಳ ಬಗ್ಗೆ, ಮುಂಬರುವ ಪರಿಣಾಮಗಳ ಬಗ್ಗೆ ಸರಿಯಾಗಿ ತಿಳಿದುಕೊಂಡಿಲ್ಲದಿರಬಹುದು, ಅಥವಾ ಇತರರ ಭಾವನೆಗಳನ್ನು ಅರಿಯಲಾರದ್ದರಿಂದ ಇರಬಹುದು. ಅಥವಾ ಸಾಮಾಜಿಕ ನಿಯಮಗಳಿಗೆ ಮತ್ತು ಅಭ್ಯಾಸಗಳಿಗೆ ನಾವು ಸಾಕಷ್ಟು ಗೌರವ ನೀಡದೆ ಮಾನ್ಯ ಮಾಡದ್ದರಿಂದ ಇರಬಹುದು. ಬೋಧನಾತ್ಮಕ ದೃಷ್ಟಿಕೋನದಿಂದ, ನಾವು ನಮ್ಮ ಅತೃಪ್ತಿಗಳಿಗೆ ಇತರರನ್ನು ದೂರದೆ, ಎಲ್ಲ ವ್ಯಕ್ತಿಗಳನ್ನು ಮತ್ತು ಸಂದರ್ಭಗಳನ್ನು ಸ್ವೀಕರಿಸಲು ಸಿದ್ಧರಾಗಿರಬೇಕು. ಇಂಥ ಬೋಧನಾತ್ಮಕ ಸಂಸ್ಕೃತಿಯನ್ನು ನಾವು ಬೆಳೆಸಿಕೊಂಡದ್ದೇ ಆದರೆ, ಆಗ ಜೀವನದಲ್ಲಿ ಮಾನಸಿಕವಾಗಿ ಯಾವುದೇ ಘಟನೆಯ ಬಗ್ಗೆ ಅಥವಾ ಅನುಭವದ ಬಗ್ಗೆ ಗೊಂದಲಗಳಿರಬೇಕಾಗಿಲ್ಲ. ಮಾನಸಿಕಗೊಂದಲವೊಂದು ಮಹತ್ತರವಾದ ಚಿರಸ್ಥಾಯಿಯಾದ ಸಮಸ್ಯೆಯಾಗಿದ್ದು, ಎಲ್ಲರ ದೈನಂದಿನ ಜೀವನವನ್ನು ತೊಂದರೆಗೀಡುಮಾಡುತ್ತದೆ. ಇದಕ್ಕೆ ಒಂದು ಶಾಶ್ವತ ಪರಿಹಾರ ಅತ್ಯಗತ್ಯ. ಇಂಥದ್ದೊಂದು ಪರಿಹಾರವನ್ನು ಒಬ್ಬಾತ ಸಾಕಷ್ಟು ಧೈರ್ಯಶಾಲಿಯಾಗಿದ್ದರೆ ಮತ್ತು ನಿರ್ಧಾರ ಹೊಂದಿದವನಾಗಿದ್ದರೆ ಮಾತ್ರ ಕಂಡುಕೊಳ್ಳಬಹುದು. ಒಬ್ಬಾತ ಸಾಂಸ್ಕೃತಿಕ ಬೆಳವಣಿಗೆಗೆ ಮನಸ್ಸನ್ನು ಸಿದ್ಧಗೊಳಿಸುವ ತರಬೇತಿಯ ಪ್ರಯತ್ನ ನಡೆಸಿದರೆ ಗೊಂದಲಗಳನ್ನು ನಿವಾರಿಸುವ ಪ್ರಯತ್ನಗಳು ಸುಲಭವಾಗಿ ಫಲ ನೀಡುತ್ತವೆ. ತಾಳ್ಮೆ ಹೊಂದಾಣಿಕೆ ಮತ್ತು ತ್ಯಾಗಮನೋಭಾವಗಳನ್ನು ಬೆಳೆಸಿಕೊಳ್ಳಬೇಕು ಮತ್ತು ವಿಚಾರ ಮತ್ತು ಕ್ರಿಯೆಗಳಲ್ಲಿ, ಎಲ್ಲೆಲ್ಲಿ ಯಾವಾಗ ಸಾಮರಸ್ಯವನ್ನು ಉಳಿಸಿಕೊಳ್ಳುವುದು ಅಗತ್ಯವೋ, ಅಲ್ಲಲ್ಲಿ ಇವುಗಳನ್ನು ಬಳಸಬೇಕು.

-ವೇದಾದ್ರಿ ಮಹರ್ಷಿ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>