Quantcast
Channel: VijayKarnataka
Viewing all articles
Browse latest Browse all 6795

ಅತಿಯಾದ ಪ್ರೀತಿಯೂ ಇಲ್ಲಿ ಅಮೃತ

$
0
0

ದುಂಡು ಮುಖದ ಚೆಲುವೆ ಮಯೂರಿಗೆ ಅದೃಷ್ಟದ ಬಾಗಿಲು ತೆರೆದಂತಿದೆ.

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಇಷ್ಟಕಾಮ್ಯ ಚಿತ್ರದಲ್ಲಿ ಇವರಿಗೆ ದೊರೆತಿದ್ದು ಅಪೂರ್ವ ಪಾತ್ರ. ಇನ್ನೇನು ಕೆಲವೇ ದಿನಗಳಲ್ಲಿ ಇದು ತೆರೆಗೂ ಬರಲಿರುವುದರಿಂದ ಈ ನಟಿಯ ನಿರೀಕ್ಷೆ ಗರಿ ಬಿಚ್ಚಿ ಕುಣಿಯುತ್ತಿದೆ. ಈ ವೇಳೆ ಸಿನಿಮಾದ ಬಗ್ಗೆ ಕೇಳಿದರೆ ಪಟಪಟನೆ ಅರಳು ಹುರಿದಂತೆ ಮಾತಿಗೆ ನಿಲ್ಲುತ್ತಾರೆ.

ಇಷ್ಟಕ್ಕೂ ಇಷ್ಟಕಾಮ್ಯ ಹೆಸರಿನ ಬಗ್ಗೆಯೇ ಕುತೂಹಲವಿತ್ತು. ಇದಕ್ಕೆ 'ನಾವು ಯಾವುದೋ ವ್ಯಕ್ತಿಯನ್ನು ಇಲ್ಲವೆ ವಿಷಯವನ್ನು ಅತಿಯಾಗಿ ಪ್ರೀತಿಸುವುದೇ ಇಷ್ಟಕಾಮ್ಯ ಅಂತ ಮೇಷ್ಟ್ರು (ನಾಗತಿಹಳ್ಳಿ ಚಂದ್ರಶೇಖರ್‌) ಹೇಳಿದ್ದಾರೆ. ವಾಟೆವರ್‌ ವಿ ಲವ್‌, ಅದುವೇ ಇಷ್ಟಕಾಮ್ಯ. ದೊಡ್ಡೇರಿ ವೆಂಕಟಗಿರಿ ರಾವ್‌ ಬರೆದ ಕಾದಂಬರಿಯನ್ನು ಆಧರಿಸಿದ ಚಿತ್ರವಿದು' ಎಂದು ಉತ್ತರವಾಗುತ್ತಾರೆ ಮಯೂರಿ.

ಮೇಷ್ಟ್ರ ಜತೆಗಿನ ಕೆಲಸ ಹೇಗಿತ್ತು? 'ಅವರ ಜತೆ ಕೆಲಸ ಮಾಡುವಾಗ ನರ್ವಸ್‌ ಇದ್ದೇ ಇರುತ್ತದೆ. ಯಾವ ಕಲಾವಿದರೇ ಆಗಲಿ ಅತಿಯಾದ ಆತ್ಮವಿಶ್ವಾಸ ಇರಬಾರದು. ಆದರೆ ಕಾನ್ಫಿಡೆನ್ಸ್‌ ಇರಬೇಕು. ನಾನಂತೂ ನನ್ನ ಕಂಪ್ಲೀಟ್‌ ಸಾಮರ್ಥ್ಯ‌ ವಿನಿಯೋಗಿಸಿದ್ದೇನೆ. ಆದರೂ ತುಂಬ ಕಾನ್ಸಿಯಸ್‌ ಆಗಿ ಇರುತ್ತಿದ್ದೆ, ನನ್ನ ಎದುರು ಇರುವುದು ನಾಗತಿಹಳ್ಳಿ ಮೇಷ್ಟ್ರು ಎಂಬ ಸದಾ ಎಚ್ಚರದಿಂದ ಇರುತ್ತಿದ್ದೆ' ಎಂಬುದು ಸುಂದರಿಯ ವಿವರ.

ಭಾಷೆಯ ವಿಚಾರದಲ್ಲಿ ಈ ನಿರ್ದೇಶಕರು ತುಂಬ ಎಚ್ಚರಿಕೆ ವಹಿಸುತ್ತಾರೆ. ಅದು ಮಯೂರಿಗೂ ಗೊತ್ತು. ಅದಕ್ಕೇ ಡೈಲಾಗ್‌ ವಿಚಾರದಲ್ಲಿ ತುಂಬ ಹುಷಾರಾಗಿದ್ದರಂತೆ. ಅದಕ್ಕೇ ಸಂಭಾಷಣೆಗೆಂದೇ ತಯಾರಿ ಮಾಡಿಕೊಳ್ಳುತ್ತಿದ್ದರು. ನಿರ್ದೇಶಕರ ಕಲ್ಪನೆಯಂತೆಯೇ ಡೈಲಾಗ್‌ ಹೊರಬರಬೇಕು ಎಂದು ಇವರು ಯತ್ನಿಸಿದ್ದೂ ಇದೆ.

ಇದರಲ್ಲಿನ ಪಾತ್ರವು ಈ ನಟಿಗೆ ಖುಷಿ ಕೊಟ್ಟಿದೆ. 'ನಾನಿಲ್ಲಿ ಮಲೆನಾಡಿನ ಮುದ್ದು ಹುಡುಗಿಯಾಗಿ ನಟಿಸಿದ್ದೇನೆ. ಪ್ರೀತಿಯಲ್ಲಿ ಬೀಳುವ ವಯಸ್ಸು ನನ್ನದು. ಜತೆಗೆ ಬೆಟ್ಟದಷ್ಟು ಜವಾಬ್ದಾರಿಗಳು ಇರುತ್ತವೆ. ಮನೆಯಲ್ಲಿ ಅಮ್ಮ ಕೆಲಸ ಮಾಡುತ್ತಾಳೆ, ಆದರೆ ಅಣ್ಣ ಬಹಳ ಬೇಜಾವ್ದಾರಿಯವ. ಇಂತಹ ಗೊಂದಲದ ಮನಸ್ಥಿತಿಯಲ್ಲಿ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತೇನೆ' ಎಂಬುದೇ ತಮ್ಮ ಪಾತ್ರದ ವಿಶೇಷ ಎಂದು ಹೇಳಲು ಮಯೂರಿ ಮರೆಯುವುದಿಲ್ಲ.

ಚಿತ್ರದಲ್ಲಿ ವಿಜಯ್‌ ಸೂರ್ಯ ನಾಯಕ. ಮಯೂರಿ ಹಾಗೂ ಕಾವ್ಯಾ ಶೆಟ್ಟಿ ಇಬ್ಬರು ನಾಯಕಿಯರು. ಅಂದಬಳಿಕ ಇದು ತ್ರಿಕೋನ ಪ್ರೇಮ ಕತೆಯಾ ಎಂಬ ಪ್ರಶ್ನೆ ಸಹಜ. ಆದರೆ ಅದರ ಬಗ್ಗೆ ಈ ನಟಿ ಏನನ್ನೂ ಹೇಳಲು ಬಯಸುವುದಿಲ್ಲ. ಏಕೆಂದರೆ ಜನರ ಕ್ಯೂರಿಯಾಸಿಟಿ ಇನ್ನೊಂದಿಷ್ಟು ದಿನ ಹಾಗೆಯೇ ಇರಲೆಂಬ ಆಸೆ. ಅದೇನು ಎಂಬುದು ಇಷ್ಟರಲ್ಲೇ ಗೊತ್ತಾಗುತ್ತೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>