Quantcast
Channel: VijayKarnataka
Viewing all articles
Browse latest Browse all 6795

ವಾಟೆಹೊಳೆ ಮೂಲಕ ನೀರು ಸಂಗ್ರಹಕ್ಕೆ ಯತ್ನ

$
0
0

* ಪರ್ಯಾಯ ಮಾರ್ಗವಾಗಿ ಪಟ್ಟಣ ಪಂಚಾಯಿತಿ ಹುಡುಕಾಟ

ಆಲೂರು: ಯಗಚಿ ನದಿಯಲ್ಲಿ ನೀರಿನ ಹರಿವು ನಿಂತಿರುವ ಕಾರಣ ಪಟ್ಟಣ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು, ಪರ್ಯಾಯ ಮಾರ್ಗವಾಗಿ ಪಪಂ ಅಧಿಕಾರಿಗಳು ನೀರು ಸರಬರಾಜು ಮಾಡುತ್ತಿದ್ದಾರೆ.

ನಾಲ್ಕು ದಿನಗಳಿಂದ ನೀರಿನ ಹರಿವು ಯಗಚಿ ನದಿಯಲ್ಲಿ ಸಂಪೂರ್ಣ ನಿಂತು ಹೋಗಿತ್ತು. ತಕ್ಷ ಣ ಎಚ್ಚೆತ್ತುಕೊಂಡ ಪಪಂ ಸಿಬ್ಬಂದಿ, ಪಪಂ ವ್ಯಾಪ್ತಿಯಲ್ಲಿರುವ ಕೊಳವೆ ಬಾವಿಗಳ ಮೂಲಕ ನೀರನ್ನು ಟ್ಯಾಂಕರ್‌ ಮೂಲಕ ಸಂಗ್ರಹಿಸಿ ಜನರಿಗೆ ವಿತರಣೆ ಮಾಡಲು ಕ್ರಮ ಕೈಗೊಂಡರು. ಬಿಸಿಲ ಬೇಗೆ ಧಗೆಯಿಂದ ಕೊಳವೆ ಬಾವಿಗಳ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ವಾಟೆಹೊಳೆ ಜಲಾಶಯದಿಂದ ನೀರು ಬಿಡಿಸಿಕೊಳ್ಳಲು ಮುಂದಾದರೂ ಪಪಂ ಮನವಿ ಮೇರೆಗೆ, ವಾಟೆಹೊಳೆ ಜಲಾಶಯದಲ್ಲಿ 5 ಕ್ಯೂಸೆಕ್‌ ನೀರನ್ನು ನಾಲೆ ಮೂಲಕ ಯಗಚಿ ನದಿಗೆ ಹರಿಯಬಿಡಲಾಗಿದೆ. ಸೋರಿಕೆಯನ್ನು ತಡೆಗಟ್ಟುವ ಸಲುವಾಗಿ ಪೈಪು ರಿಪೇರಿ ಮಾಡಲು ಮತ್ತು ಪಪಂ ಮನವಿ ಮೇರೆಗೆ, ಈಗ 5 ಕ್ಯೂಸೆಕ್‌ ನೀರನ್ನು ನಾಲೆಗೆ ಹರಿಸಲಾಗುತ್ತಿದೆ. ಈ 5 ಕ್ಯೂಸೆಕ್‌ ನೀರು ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿ ತಲುಪಲು ಸುಮಾರು 12-14 ಕಿಮೀ ದೂರ ಸಾಗಬೇಕಾಗಿದೆ. ಅಷ್ಟರಲ್ಲಿ ಕೆಲವು ಕೆರೆ, ಕಟ್ಟೆಗಳು ತುಂಬಿ ಬರಬೇಕಾಗುತ್ತದೆ. ನೀರು ಅಗತ್ಯ ಇರುವ ಕಡೆ ರೈತರು ತಮ್ಮ ಕೃಷಿಗೆ ಬಳಸಿಕೊಳ್ಳುವ ಸಾಧ್ಯತೆಯೂ ಇದೆ. 5 ಕ್ಯೂಸೆಕ್‌ ಹೊರತುಪಡಿಸಿದರೆ ಹೆಚ್ಚಿನ ಪ್ರಮಾಣದ ನೀರನ್ನು ಜಲಾಶಯದಿಂದ ಹೊರ ಹರಿಯಲು ಬಿಡಲಾಗುವುದಿಲ್ಲ. ಈ ಕಾರಣದಿಂದ ನೀರು ಪಪಂ ವ್ಯಾಪ್ತಿ ತಲುಪುತ್ತದೊ ಇಲ್ಲವೊ ಎಂಬುದು ವಾಟೆಹೊಳೆ ಜಲಾಶಯ ಅಧಿಕಾರಿಗಳ ಅನುಮಾನ.

ಫಿಲ್ಟರ್‌ ಪಂಪ್‌ಗೆ ಚಾಲನೆ: ಯಗಚಿ ನದಿಯಲ್ಲಿ ನೀರು ಹರಿವು ನಿಂತ ಕಾರಣ ವಾಟೆಹೊಳೆ ಜಲಾಶಯ ಅಧಿಕಾರಿಗಳ ಸಹಕಾರದಿಂದ ಜಲಾಶಯದ ನೀರನ್ನು ಯಗಚಿ ನದಿಗೆ ಹರಿಯಬಿಡಲಾಗಿದೆ. ಜಲಾಶಯಕ್ಕೆ ಬಂಡ್‌ ಅಡ್ಡಗಟ್ಟಿ ನೀರು ಸಂಗ್ರಹ ಮಾಡಿ, ಪಂಪ್‌ ಮೂಲಕ ನೀರೆತ್ತುವ ಕಾರ್ಯವನ್ನು ಪಪಂ ಅಧಿಕಾರಿಗಳು ತಕ್ಷ ಣಕ್ಕೆ ಮಾಡುತ್ತಿದ್ದಾರೆ. ನೀರು ಸಂಗ್ರಹವಾದ ನಂತರ ನಾಲ್ಕು ದಿನಗಳಿಂದ ತಟಸ್ಥವಾಗಿದ್ದ ಫಿಲ್ಟರ್‌ ಪಂಪು ಇಂದು ಚಾಲನೆಗೊಳ್ಳಲಿದೆ. ಆದರೆ ನೀರು ಸಂಗ್ರಹವಾಗಿ ಸುರಕ್ಷಿತವಾಗಿ ತಲುಪುವವರೆಗೆ ಕೊಳವೆ ಬಾವಿ ನೀರನ್ನು ಟ್ಯಾಂಕರ್‌ ಮೂಲಕ ವಿತರಣೆ ಮಾಡಲಾಗುತ್ತಿದೆ. ಮೂರು ದಿನಗಳಿಂದ ಪ್ರತಿದಿನ ಮಳೆಯಾಗುತ್ತಿರುವುದರಿಂದ ಪಟ್ಟಣದಲ್ಲಿ ಹವಾಮಾನ ಸ್ವಲ್ಪ ತಂಪಾಗಿದೆ.

''ಪಪಂ ವ್ಯಾಪ್ತಿಯಲ್ಲಿ ಸುಮಾರು 6000 ಜನಸಂಖ್ಯೆ ಇರುವುದರಿಂದ ಪ್ರತಿದಿನ ಸುಮಾರು 1.30 ಮಿಲಿಯನ್‌ ಲೀಟರ್‌ ನೀರು ಬೇಕಾಗುತ್ತದೆ. ವ್ಯಾಪ್ತಿಗೊಳಪಟ್ಟಂತೆ 63 ಕೊಳವೆ ಬಾವಿಗಳಿವೆ. 61 ಬಾವಿಗಳು ಕಾರ್ಯ ನಿರ್ವಹಿಸುತ್ತಿವೆ. 2 ಬಾವಿಗಳು ರಿಪೇರಿ ಹಂತಕ್ಕೆ ತಲುಪಿವೆ. ಇನ್ನೆರಡು ದಿನಗಳಲ್ಲಿ ರಿಪೇರಿ ಮಾಡಿ ಎಲ್ಲ ಕೊಳವೆ ಬಾವಿಗಳನ್ನು ಬ್ರಷ್‌ ಮಾಡಲಾಗುವುದು'' ಎನ್ನುತ್ತಾರೆ ಪಪಂ ಅಧ್ಯಕ್ಷೆ ನಿಲೂಫರ್‌.

''ವಾಟೆಹೊಳೆ ಜಲಾಶಯದಿಂದ ಹರಿದು ಬರುತ್ತಿರುವ ನೀರನ್ನು ಮಧ್ಯದಲ್ಲಿ ಯಾರೂ ತಡೆಯದಂತೆ ಜಾಗ್ರತೆ ವಹಿಸಲಾಗಿದೆ. ಯಗಚಿ ನದಿಯಲ್ಲಿ ಹಾಸನ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ ನಿರ್ದೇಶನದಂತೆ ನದಿಗೆ ಅಡ್ಡಲಾಗಿ ಬಂಡ್‌ ಕಟ್ಟಲಾಗಿದೆ. ನೀರನ್ನು ಸಂಗ್ರಹಿಸಿ ಪಂಪ್‌ ಮೂಲಕ ನೀರು ವಿತರಣೆ ಮಾಡಲಾಗುವುದು. ವಾಟೆಹೊಳೆ ಜಲಾಶಯದ ನೀರು ಹರಿವು ನಿಲ್ಲುವ ಸೂಚನೆ ಕಂಡ ಕೂಡಲೆ ಯಗಚಿ ಜಲಾಶಯದಿಂದ ನೀರು ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಕುಡಿಯಲು ನೀರು ತೊಂದರೆಯಾಗದಂತೆ ಜಾಗ್ರತೆ ವಹಿಸಿ ನೀರು ಸರಬರಾಜು ಮಾಡಲಾಗುವುದು. ಸಾರ್ವಜನಿಕರು ನೀರನ್ನು ಪೋಲು ಮಾಡದೆ ಬಳಸಬೇಕು'' ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಜೂನಿಯರ್‌ ಎಂಜಿನಿಯರ್‌ ಶ್ಯಾಮ್‌.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್