ಬೇಲೂರು: ಪಟ್ಟಣವನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ಇಡಲಾಗುವ ಕಸ ಸಂಗ್ರಹ ಡ್ರಮ್ಗಳನ್ನು ವಿತರಿಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಟಿ.ಎ.ಶ್ರೀನಿಧಿ ಹೇಳಿದರು. ಇಲ್ಲಿನ ಐಡಿಎಸ್ಎಂಟಿ ವಾಣಿಜ್ಯ ಮಳಿಗೆಯ ತರಕಾರಿ ವರ್ತಕರಿಗೆ ಡ್ರಮ್ ವಿತರಣೆ ಮಾಡಿ ಮಾತನಾಡಿದರು. ಹಿಂದಿನ ಅಧ್ಯಕ್ಷ ರ ಅವಧಿಯಲ್ಲೆ ಡ್ರಮ್ ವಿತರಣೆ ಮಾಡಲಾಗಿದೆ. ಇದೀಗ ಎರಡನೆ ಕಂತಾಗಿ ಪುನಃ ವಿತರಿಸುತ್ತಿದ್ದೇವೆ. ಮಳಿಗೆಯಲ್ಲಿನ ತರಕಾರಿಗೆ ಸಂಬಂಧಿಸಿದ ಬೇಡದ ಪದಾರ್ಥಗಳನ್ನು ಡ್ರಮ್ ಒಳಗೆ ಹಾಕಿದೆ ಪುರಸಭೆ ಪೌರಕಾರ್ಮಿಕರು ಆಗಮಿಸಿ ಟ್ರ್ಯಾಕ್ಟರ್ಗೆ ತುಂಬಿಕೊಂಡು ಹೋಗಲಿದ್ದಾರೆ ಎಂದು ತಿಳಿಸಿದರು. ಮುಖ್ಯಾಧಿಕಾರಿ ಬಸವರಾಜು ಮಾತನಾಡಿ, ''ಈಗಾಗಲೇ ದೇಗುಲದ ರಸ್ತೆ ಹಾಗೂ ಮುಖ್ಯರಸ್ತೆಯಲ್ಲಿ ಡ್ರಮ್ಗಳನ್ನು ಇಡಲಾಗಿದೆ. ಇದರಿಂದ ಮುಖ್ಯರಸ್ತೆ ಶೇ.80 ಭಾಗ ಸ್ವಚ್ಛತೆಯಿಂದ ಕೂಡಿದೆ. ಇನ್ನೂ ಕೆಲವರು ಡ್ರಮ್ ಇದ್ದರೂ ಅದರೊಳಗೆ ಕಸವನ್ನು ಹಾಕದೆ ರಸ್ತೆಗೆ ಎಸೆಯುವುದು ಕಂಡು ಬರುತ್ತಿದೆ. ಅಂತಹವರಿಂದ ಸ್ವಚ್ಛತೆ ದಕ್ಕೆ ಬರುವುದರಿಂದ ಕ್ರಮ ಕೈಗೊಳ್ಳಲಾಗುವುದು'' ಎಂದರು. ಉಪಾಧ್ಯಕ್ಷೆ ಜಯಂತಿಧರ್ಮೇಗೌಡ, ಸದಸ್ಯ ಜುಬೇರ್ಅಹ್ಮದ್, ಹೆಚ್.ಐ. ವೆಂಕಟೇಶ್ ಇತರರು ಇದ್ದರು.
↧
ಬೇಲೂರು: ವರ್ತಕರಿಗೆ ಕಸ ಸಂಗ್ರಹ ಡ್ರಮ್ ವಿತರಣೆ
↧