Quantcast
Channel: VijayKarnataka
Viewing all articles
Browse latest Browse all 6795

ಊಟಿ ವಿಮರ್ಶೆ: ಅಬ್ಬರದ ನಡುವೆ ತಂಪಾಗಿ ಹರಿವ ಝರಿ

$
0
0

ಕನ್ನಡ ಚಿತ್ರ

* ಪದ್ಮಾ ಶಿವಮೊಗ್ಗ

ಪ್ರೀತಿ ಪ್ರೇಮ ಎಂದರೆ ತ್ರಿಕೋನ ಪ್ರೇಮಕಥೆ ಅಥವಾ ಬೇರೆಯವರಿಗಾಗಿ ಪ್ರೀತಿಸುವವರನ್ನು ತ್ಯಾಗ ಮಾಡುವುದು, ಇಲ್ಲಾಂದ್ರೆ ಪ್ರೇಮಿಗಾಗಿ ಹೊಡೆದಾಡುವುದನ್ನು ನಾವು ಅನೇಕ ಸಿನಿಮಾಗಳಲ್ಲಿ ನೋಡುತ್ತೇವೆ. ಆದರೆ, ಪ್ರೀತಿಯನ್ನು ನೈಜತೆಯ ಹತ್ತಿರಕ್ಕೆ ತಂದು ತೋರಿಸಿದ 'ಮೈ ಆಟೋಗ್ರಾಫ್', 'ಬೆಳದಿಂಗಳ ಬಾಲೆ'ಯಂಥ ಅಪರೂಪದ ಚಿತ್ರಗಳೂ ಬಂದಿವೆ. ಅದೇ ರೀತಿ ಎದೆಯಲ್ಲಿ ಬೆಚ್ಚಗೆ ಉಳಿದ ಪ್ರೀತಿಯನ್ನು ಅರಸಿ ಬರುವ ಯುವಕ ಮತ್ತವನ ನೆನಪಲ್ಲೇ ಇರುವ ಯುವತಿಯ ಕತೆ 'ಊಟಿ' ಸಿನಿಮಾದಲ್ಲಿದೆ.

ಈ ಚಿತ್ರದಲ್ಲಿ ಹುಡುಕಾಟವಿದೆ, ಟ್ರಾವೆಲ್ ಇದೆ, ಅಚಲವಾದ ಪ್ರೀತಿಯೂ ಇದೆ. ಅಬ್ಬರದ ಚಿತ್ರಗಳ ನಡುವೆ ತಣ್ಣಗೆ ಹರಿವ ಝರಿಯಂತೆ ಪ್ರೇಕ್ಷಕನಿಗೆ ಹಿತಾನುಭವ ನೀಡುತ್ತದೆ. ಡಬಲ್ ಮೀನಿಂಗ್ ಡೈಲಾಗ್, ಐಟಂ ಡಾನ್ಸ್, ಫೈಟ್‌ಗಳಿಲ್ಲದ ಸಿನಿಮಾ ಇದು.

'ಪ್ರೀತಿಯ ಅರಸಿ' ಕಾದಂಬರಿ ಆಧರಿಸಿದ 'ಊಟಿ' ಲೇಖಕ ಕೃಷ್ಣಮೂರ್ತಿ ಚಮರಂ ಅವರ ಜೀವನದ ಕತೆಯೂ ಹೌದು.

ವಿದೇಶದಲ್ಲಿ ವಿಜ್ಞಾನಿ ಆಗಿದ್ದ ನಾಯಕ (ಅವಿನಾಶ್ ನರಸಿಂಹರಾಜು) ತನ್ನ ಹುಟ್ಟೂರಿಗೆ ಹಿಂತಿರುಗಿದವನು ಹತ್ತು ವರ್ಷಗಳ ಹಿಂದೆಯೇ ತಾನು ಪ್ರೀತಿಸಿದ ಹುಡುಗಿಯನ್ನು ಹುಡುಕಲು ಪ್ರಾರಂಭಿಸುತ್ತಾನೆ. ಇಲ್ಲಿಂದ ಶುರುವಾಗುವ ಕತೆ ಫ್ಲಾಶ್‌ಬ್ಯಾಕ್‌ಗೆ ಹೋಗುತ್ತದೆ.

ಪಿಕ್‌ನಿಕ್ ಸ್ಟಾಟ್ ಆಗಿರುವ ಊಟಿಯ ಹಿಂದೆ ಇನ್ನೊಂದು ಬದುಕು ಇದೆ. ಅದು ಕಾರ್ಮಿಕರದ್ದು. ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳವರು ಇಲ್ಲಿ ಒಂದೇ ಕುಟುಂಬದಂತೆ ವಾಸಿಸುತ್ತಿದ್ದಾರೆ. ಭಾಷೆ ಬೇರೆಯಾದರೂ ಅವರ‌್ಲೆರೂ ಅನ್ಯೋನ್ಯವಾಗಿರುತ್ತಾರೆ. ಹದಿಹರೆಯದ ನಾಯಕ ಮತ್ತು ತನ್ನ ಅಕ್ಕನ ಮನೆಗೆ ಕೇರಳದಿಂದ ಬಂದು ನೆಲೆಸುವ ಕ್ರಿಶ್ಚಿಯನ್ ಮಲಯಾಳಿ ಹುಡುಗಿ (ನೈನಾ) ನಡುವೆ ಮೊದಲ ಪ್ರೇಮ ಅರಳುತ್ತದೆ. ಇವರ ಮುಗ್ಧ ಪ್ರೀತಿ ಸ್ವಚ್ಛಂದ ಹಕ್ಕಿಗಳಂತೆ ಊಟಿ ರಮಣೀಯ ಪರಿಸರದಲ್ಲಿ ಹಾರಾಡುತ್ತಿರುತ್ತದೆ. ಆದರೆ, ಕಾವೇರಿ ಗಲಭೆಯಿಂದ ಬಹುಭಾಷೆಯ ಜನರಿರುವ ಎಸ್ಟೇಟ್‌ನ ಕಾರ್ಮಿಕ ವಲಯ ಆತಂಕದಿಂದ ಊರು ಬಿಡುತ್ತಾರೆ. ಈ ಸಂದರ್ಭದಲ್ಲಿ ಪ್ರೀತಿಸಿದ ಹುಡುಗಿ ಎಲ್ಲಿ ಹೋದಳೆಂದು ತಿಳಿಯದ ಯುವಕ ಕಂಗಾಲಾಗುತ್ತಾನೆ. ನಂತರ ವಿದೇಶ ಸೇರಿಕೊಳ್ಳುತ್ತಾನೆ.

ಚಿತ್ರದ ಮೊದಲರ್ಧ ಇಬ್ಬರ ನಡುವಿನ ಪ್ರೇಮವನ್ನು ತೋರಿಸಲಾಗಿದೆ. ದ್ವಿತಿಯಾರ್ಧದಲ್ಲಿ ನಾಯಕಿಯನ್ನು ಹುಡುಕುವ ನಾಯಕನ ಪಯಣ ಇದ್ದು, ಪ್ರತಿ ಹೆಜ್ಜೆಗೂ ಕುತೂಹಲ ಉಳಿಸಿಕೊಂಡಿದೆ. ಇಷ್ಟಲ್ಲದೆ, ಕತೆಯ ಎಳೆಯೊಂದಿಗೆ ಸಾಮಾಜಿಕ ಕಳಕಳಿಯನ್ನೂ ಬೆಸೆಯಲಾಗಿದೆ. ಕೊನೆಗೆ ಆ ಹುಡುಗಿ ಸಿಗುತ್ತಾಳಾ? ಇಲ್ಲವಾ? ಎನ್ನುವುದನ್ನು ಚಿತ್ರದಲ್ಲಿ ನೋಡಿ.

ಹದಿಹರೆಯದ ನಾಯಕನಾಗಿ ನಿಖಿಲ್ ನಟನೆ ಇಷ್ಟವಾಗುತ್ತದೆ. ಮೌನವಾಗಿ ಪ್ರೀತಿಸುವ ಹುಡುಗನಲ್ಲಿ ಮುಗ್ಧತೆ ಕಾಣುತ್ತದೆ. ಹತ್ತು ವರ್ಷದ ನಂತರ ಅದೇ ಪಾತ್ರದಲ್ಲಿ ಅವಿನಾಶ್ ಪ್ರಬುದ್ಧವಾಗಿ ನಟಿಸಿದ್ದಾರೆ. ನೈನಾ ಮೇಕಪ್ ಇಲ್ಲದೆಯೂ ಸುಂದರವಾಗಿ ಕಾಣಿಸುತ್ತಾರಲ್ಲದೆ, ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಲೇಖಕ ಕೃಷ್ಣಮೂರ್ತಿ, ನಿರ್ಮಾಪಕ ಮೋಹನ್ ಕುಮಾರ್ ಕೂಡಾ ನಟಿಸಿದ್ದು, ಹೆಚ್ಚಿನವರು ಹೊಸಬರು. ಹಾಡುಗಳು ಮತ್ತು ಚಾಮರಾಜನಗರ ಭಾಗದ ಕನ್ನಡದ ಸಂಭಾಷಣೆ ಚೆನ್ನಾಗಿದೆ. ಮಹೇಶ್ ಕುಮಾರ್ ಚೊಚ್ಚಲ ನಿರ್ದೇಶನದ ಚಿತ್ರವಿದು. ಹೀಗಾಗಿ ತಪ್ಪುಗಳಾಗಿವೆ. ಹತ್ತು ವರ್ಷದ ಹಿಂದಿನ ದೃಶ್ಯಗಳೆಂಬ ಕಾರಣಕ್ಕೆ ಸಿನಿಮಾ ಕಲರ್ ಬದಲಾಯಿಸುವ ಅಗತ್ಯವಿರಲಿಲ್ಲ. ಸಂಭಾಷಣೆಗಳಿಗೆ ಸ್ವಲ್ಪ ಕತ್ತರಿ ಹಾಕಿ ಬಿಗಿ ಮಾಡಬಹುದಿತ್ತು. ಇಷ್ಟಾಗಿಯೂ ಒಮ್ಮೆ ನೋಡಬಹುದಾದ ಚಿತ್ರ ಇದು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>