Quantcast
Channel: VijayKarnataka
Viewing all articles
Browse latest Browse all 6795

ಪುಟಿದೇಳುವ ನಿರೀಕ್ಷೆಯಲ್ಲಿ ಬಿಎಫ್‌ಸಿ

$
0
0

ಫೆಡರೇಷನ್‌ ಕಪ್‌ ಫುಟ್ಬಾಲ್‌ ಟೂರ್ನಿ: ಛೆಟ್ರಿ ಪಡೆಗೆ ಐಜ್ವಾಲ್‌ ಸವಾಲು

ಬೆಂಗಳೂರು: ಫೆಡರೇಷನ್‌ ಕಪ್‌ ಫುಟ್ಬಾಲ್‌ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಮುಗ್ಗರಿಸಿದ ನೂತನ ಐ-ಲೀಗ್‌ ಚಾಂಪಿಯನ್‌ ಬೆಂಗಳೂರು ಎಫ್‌ಸಿ ದ್ವಿತೀಯ ಪಂದ್ಯದಲ್ಲಿ ಪ್ರವಾಸಿ ಐಜ್ವಾಲ್‌ ಎಫ್‌ಸಿ ವಿರುದ್ಧ ಪುಟಿದೇಳುವ ನಿರೀಕ್ಷೆಯಲ್ಲಿದೆ.

ಇಲ್ಲಿನ ಶ್ರೀಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಐಜ್ವಾಲ್‌ ಎಫ್‌ಸಿಯನ್ನು ಎದುರಿಸಲಿರುವ ಸುನಿಲ್‌ ಛೆಟ್ರಿ ಪಡೆ ತವರಿಂಗಳದ ಪೂರ್ಣ ಲಾಭ ಪಡೆಯುವ ಗುರಿ ಹೊಂದಿದೆ. ಮೊದಲ ಪಂದ್ಯದಲ್ಲಿ ಐಜ್ವಾಲ್‌ ವಿರುದ್ಧ 1-2ರಲ್ಲಿ ಆಘಾತ ಅನುಭವಿಸಿದ ಬಿಎಫ್‌ಸಿ ಇದೀಗ ಆ ಸೋಲಿಗೆ ತವರಿನಂಗಳದಲ್ಲಿ ಮುಯ್ಯಿ ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಈ ಕುರಿತು ಸೋಮವಾರ ನಡೆದ ಪ್ರತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಫ್‌ಸಿ ಕೋಚ್‌ ಆಷ್ಲೇ ವೆಸ್ಟ್‌ವುಡ್‌,'' ಮೊದಲ ಪಂದ್ಯದಲ್ಲಿ ಅನಿರೀಕ್ಷಿತ ಸೋಲು ಅನುಭವಿಸಿದವು. ಆದರೆ ಎರಡನೇ ಪಂದ್ಯದಲ್ಲಿ ತವರಿನ ಪೂರ್ಣ ಲಾಭದೊಂದಿಗೆ ಪುಟಿದೇಳುವ ವಿಶ್ವಾಸ ಹೊಂದಿದ್ದೇವೆ. ಖಂಡಿತಾವಾಗಿಯೂ ಮನೆಯಂಗಳ ಲಾಭ ಪಡೆಯಲಿದ್ದೇವೆ,ತಂಡದ ಸ್ಟಾರ್‌ ಆಟಗಾರರೆನಿಸಿರುವ ನಾಯಕ ಸುನಿಲ್‌ ಛೆಟ್ರಿ, ಯುಗೆನ್ಸನ್‌ ಲಿಂಗ್ಡೊ ಸೇರಿದಂತೆ ಎಲ್ಲರು ಮಂಗಳವಾರದ ಪಂದ್ಯಕ್ಕೆ ಲಭ್ಯರಿದ್ದು, ಟೂರ್ನಿಯಲ್ಲಿ ಖಾತೆ ತೆರೆಯಲಿದ್ದೇವೆ,'' ಎಂದು ಕೋಚ್‌ ವೆಸ್ಟ್‌ವುಡ್‌ ಹೇಳಿದ್ದಾರೆ.

ಈ ಮಧ್ಯೆ, ಪ್ರಸಕ್ತ ಐ-ಲೀಗ್‌ ಚಾಂಪಿಯನ್ನರಿಗೆ ಆಘಾತ ನೀಡಿ ಆತ್ಮವಿಶ್ವಾಸದ ಅಲೆಯಲ್ಲಿ ತೆಲುತ್ತಿರುವ ಐಜ್ವಾಲ್‌ ತಂಡ ಆತಿಥೇಯರಿಗೆ ಮತ್ತೊಂದು ಅಚ್ಚರಿ ಫಲಿತಾಂಶ ನೀಡುವ ಇರಾದೆ ಹೊಂದಿದೆ. ''ಮೊದಲ ಪಂದ್ಯದಲ್ಲಿ ನಾವು ಗೆಲುವು ಸಾಧಿಸಿದ್ದರೂ ಎರಡನೇ ಪಂದ್ಯದಲ್ಲಿ ಬಿಎಫ್‌ಸಿಗಿಂತ ಹೆಚ್ಚಿನ ಅನುಕೂಲ ಹೊಂದಿಲ್ಲ. ಆದರೂ ಸಮಬಲದ ಹೋರಾಟ ತೋರಲು ಎಲ್ಲ ರೀತಿಯಲ್ಲೂ ಶ್ರಮಿಸಲಿದ್ದೇವೆ. ಹಿಂದಿನ ಗೆಲುವಿನ ಅಲೆಯಲ್ಲಿ ಮುಳಗದೆ ಮುಂದಿರುವ ಪಂದ್ಯದ ಮೇಲೆ ಗಮನ ಹರಿಸಿದ್ದೇವೆ, ಸಾಧ್ಯವಾದಷ್ಟು ಶ್ರೇಷ್ಠ ಪ್ರದರ್ಶನ ನೀಡಲು ಯತ್ನಿಸಲಿದ್ದೇವೆ,'' ಎಂದು ಐಜ್ವಾಲ್‌ ತಂಡದ ಕೋಚ್‌ ಭರವಸೆ ಮಾತುಗಳನ್ನಾಡಿದ್ದಾರೆ.

ಇದೇ ಮಧ್ಯೆ, ''ಕಳೆದ ಪಂದ್ಯದ ಕೊನೆಯ ಕ್ಷ ಣದಲ್ಲಿ ಗೋಲು ಬಾರಿಸಿ ಐಜ್ವಾಲ್‌ಗೆ ಜಯ ತಂದಿಟ್ಟ ಜುಯೋಲ್‌ ಸಂಡೆ, ಗೋಲು ಬಾರಿಸುವ ಮೂಲಕ ತಂಡದ ಗೆಲುವಿಗೆ ನೆರವಾಗಿದ್ದು, ಅತೀವ ಸಂತಸವಾಗಿದೆ. ಇದನ್ನು ಮುಂದುವರಿಸುವ ವಿಶ್ವಾಸ ಹೊಂದಿದ್ದೇನೆ,'' ಎಂದು ಹೇಳಿದ್ದಾರೆ.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>