Quantcast
Channel: VijayKarnataka
Viewing all articles
Browse latest Browse all 6795

ಕೌದಿ: ಕೌದಿ ಎಂಬ ಕುದಿಯುವ ಕುಲುಮೆ

$
0
0

ಕನ್ನಡ ಚಿತ್ರ



* ಹರೀಶ್‌ ಬಸವರಾಜ್‌

ಕೌದಿಗೆ ಉತ್ತರ ಕರ್ನಾಟಕದಲ್ಲಿ ಒಂದು ವಿಶೇಷ ಸ್ಥಾನವಿದೆ. ಹೀಗೆಂದರೆ ಹಾಸಲು ಹೌದು, ಹೊದೆಯಲು ಹೌದು. ಗಂಟು ಮೂಟೆ ಕಟ್ಟಲು ಇದನ್ನು ಬಳಸುತ್ತಾರೆ. ಮಕ್ಕಳನ್ನು ತೊಟ್ಟಿಲಿನಲ್ಲಿ ಬೆಚ್ಚಗೆ ಮಲಗಿಸಲು ಸಹ ಬಳಸುತ್ತಾರೆ. ಇದರಲ್ಲಿ ಅಮ್ಮನ ಪ್ರೀತಿಯ ಸೀರೆ, ಅಪ್ಪನ ಹಳೆಯ ಪಂಚೆ, ಅಜ್ಜಿಯ ಸೀರೆ, ತಂಗಿಯ ಅಂಗಿಯ ಚುಂಗು ಹೀಗೆ, ಮನೆಯಲ್ಲಿರುವ ಎಲ್ಲರ ಬಟ್ಟೆಯ ಚೂರು ಚೂರು ಸೇರಿಸಿ ಹೊಲಿದು ಮಾಡುವುದೇ ಕೌದಿ. ಇದು ಗೊಂದಲಿಗ ಸಮುದಾಯದ ಮಹಿಳೆಯರ ಕುಲಕಸುಬು. ಈ ಸಮುದಾಯದ ಕಸುಬಿನ ಹಿನ್ನೆಲೆ ಇಟ್ಟುಕೊಂಡು ಅನಂತ ಶ್ರಾಂದೇಯ ಬರೆದ ಕಥೆಯನ್ನು ತೆರೆಗೆ ತಂದಿದ್ದಾರೆ ರವೀಂದ್ರನಾಥ್‌ ಸಿರಿವರ.

ಚಿತ್ರದ ಪ್ರಮುಖ ಪಾತ್ರ ಅಂಬವ್ವ ಉತ್ತರ ಕರ್ನಾಟಕದ ಹಳ್ಳಿ ಗೊಂದಲಿಗರ ಸಮುದಾಯದವಳು. ತನ್ನ ಮಗ, ಮಗಳೊಂದಿಗೆ ಗಂಡನ ಸಾವಿನ ನಂತರ ಜೀವನಕ್ಕಾಗಿ ಕೌದಿ ಹೊಲೆಯುತ್ತಾ ಬದುಕು ಸವೆಸುವವಳು. ಆ ಊರಿನ ಗೌಡನ ಕಣ್ಣು ಅಂಬವ್ವನ ಮಗಳ ಮೇಲೆ. ಇರುವ ಒಬ್ಬ ಮಗ ಉದ್ಯೋಗವಿಲ್ಲದೆ ಅಲೆಯುವವನು. ಈ ಅಸಹಾಯಕತೆಯನ್ನೇ ಗೌಡ ಬಳಸಿಕೊಳ್ಳಲು ನೋಡುತ್ತಾನೆ. ಅದಕ್ಕೆ ಊರಿನ ಸ್ವಾಮೀಜಿಯೊಬ್ಬರ ವಿರೋಧ ವ್ಯಕ್ತವಾಗುತ್ತದೆ. ಇದರಿಂದ ಕುದ್ದಹೋಗುವ ಗೌಡ ಊರಿನಲ್ಲಿ ಮರ್ಯಾದೆ ಹೋಯಿತು. ತಾನು ಮಾಡಿದ್ದು ಇಡೀ ಹಳ್ಳಿಗೆ ತಿಳಿಯಿತು ಎಂದು ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತ ಕ್ರೂರಿಯಂತೆ ನಡೆದುಕೊಳ್ಳುತ್ತಾನೆ.

ಈ ದೃಶ್ಯಗಳಲ್ಲಿ ಜಯಶ್ರೀ ಅವರಿಗೆ ಜಯಶ್ರಿ ಅವರೇ ಸಾಟಿ. ಇಲ್ಲಿಂದ ಮುಂದೆ ಚಿತ್ರ ಮತ್ತೊಂದು ಮಜಲು ಪಡೆಯುತ್ತದೆ. ಮಗಳ ಮದುವೆಗೆ ಉಡುಗೊರೆ ಕೊಡಲು ವಿಶೇಷ ಕೌದಿ ಹೊಲೆಯುತ್ತಿರುವ ಅಂಬವ್ವ ಕಡುಬಡತನದ ನಡುವೆಯೂ ಅದಕ್ಕೆ ರೇಷ್ಮೆಯ ತುಣುಕಗಳನ್ನು ಪೋಣಿಸುತ್ತಾಳೆ. ಅದೇ ಕತೆ ನಿಜವಾದ ಹೀರೋ ಅನ್ನಬಹುದು.

ಕೆಲವರು ಮುಗ್ಧ ಅಂಬವ್ವನಿಗೆ ಹಣದ ಆಸೆ ತೋರಿಸಿ ಕಡಿಮೆ ಬೆಲೆಗೆ ಕೌದಿ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಲು ಆರಂಭಿಸುತ್ತಾರೆ. ಕೌದಿ ಮಾರಾಟದಿಂದ ನಾಲ್ಕು ಕಾಸು ಹೆಚ್ಚಾಗುತ್ತದೆ ಹೊರತು ಆಕೆಯ ಜೀವನ ಬದಲಾಗದು. ಆಕೆಯ ಕೌದಿಗಳನ್ನು ಮಾರುಕಟ್ಟೆ ಮಾಡುವ ಖಾಸಗಿ ಚಾನೆಲ್‌ನ ಕ್ಯಾಮೆರಾಮೆನ್‌ ಮಾತ್ರ ಭರ್ತಿ ದುಡ್ಡು ಮಾಡುತ್ತಾನೆ. ಕಡೆಗೆ ತನ್ನ ಮಗಳಿಗಾಗಿ ಮಾಡುತ್ತಿರುವ ವಿಶಿಷ್ಟ ಕೌದಿಯ ಮೇಲೆ ಅವನ ಕಣ್ಣು ಬೀಳುತ್ತದೆ. ಆದರೆ ಅಂಬವ್ವ ಅದನ್ನು ನೀಡಲು ನಿರಾಕರಿಸಿದಾಗ ಆಕೆಯ ಮಗನಿಗೆ ಕೆಲಸದ ಆಸೆ ತೋರಿಸಿ ಅವನ ಮೂಲಕ ಕೌದಿ ಲಪಟಾಯಿಸಲು ಯತ್ನಿಸುತ್ತಾನೆ. ಈ ಎಲ್ಲ ದೃಶ್ಯಗಳಲ್ಲಿ ಜಯಶ್ರೀ ಅವರದ್ದು ಮನೋಜ್ಞ ಅಭಿನಯ.

ಕಡೆಗೆ ಆ ಕೌದಿಯ ಕತೆ ಏನಾಯಿತು? ಅದನ್ನು ಅಂಬವ್ವ ನೀಡುತ್ತಾಳಾ? ಇಲ್ಲವಾ? ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು. ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರೆಲ್ಲರೂ ರಂಗಭೂಮಿಯ ಹಿನ್ನೆಲೆಯುಳ್ಳವರು. ಛಾಯಾಗ್ರಹಕ ಬಿ.ಎಲ್‌. ಬಾಬು ಕ್ಯಾಮೆರಾ ಹೂವಿನ ಹಡಗಲಿ ಸುತ್ತಮುತ್ತಲಿನ ಪರಿಸರವನ್ನು ಚೆನ್ನಾಗಿ ಸೆರೆಹಿಡಿದಿದೆ. ಸುಮತಿ ಸಂಗೀತ ಗಮನ ಸೆಳೆಯುತ್ತದೆ. ಮಾನಸಾ ಜೋಷಿ ಭವಿಷ್ಯದಲ್ಲಿ ಉತ್ತಮ ಕಲಾವಿದೆಯಾಗುವ ಸಾಧ್ಯತೆ ಇದೆ. ಅನಂತ ಬರೆದಿರುವ ಡೈಲಾಗ್‌ಗಳು ಗಮನ ಸೆಳೆಯುತ್ತವೆ. ಈಗಾಗಲೇ ಚಿತ್ರಕ್ಕೆ ಎರಡು ರಾಜ್ಯ ಪ್ರಶಸ್ತಿಗಳು ಬಂದಿವೆ. ಜಯಶ್ರಿಗೆ ಉತ್ತಮ ಪೋಷಕ ನಟಿ, ಹುಲಿಕುಂಟೆ ಮೂರ್ತಿಗೆ ಉತ್ತಮ ಗೀತೆ ರಚನೆಗಾಗಿ ಪ್ರಶಸ್ತಿ ಸಂದಿದೆ. ಆದರೆ ಜಯಶ್ರಿ ಪ್ರಶಸ್ತಿ ನಿರಾಕರಿಸಿದ್ದಾರೆ. ಒಟ್ಟಾರೆ ತಪ್ಪದೇ ನೋಡಬೇಕಾದ ಚಿತ್ರವಿದು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>