Quantcast
Channel: VijayKarnataka
Viewing all articles
Browse latest Browse all 6795

ದೇವರಲ್ಲಿ ಭಕ್ತಿಯಿದ್ದರೆ ಭಯವಿಲ್ಲ

$
0
0

* ದಾರಿ ದೀಪ: ಹರೀಶ್‌ ಕಾಶ್ಯಪ್‌

*ನನಗೆ ಕಾಲಸರ್ಪ ದೋಷವಿದೆ. ಹೀಗಾಗಿ ಅನಾರೋಗ್ಯ ಎನ್ನುವರು. ವಿವರ ನೋಡಿ ನೀವೇ ಪರಿಹಾರ ಹೇಳಬೇಕು.

- ಪ್ರಭಾ, ಮೈಸೂರು

ದ್ವಾದಶ ರಾಶಿಯಲ್ಲಿ ಯಾವುದೇ ಆರು ರಾಶಿ ಗ್ರಹವಿದ್ದು, ಮತ್ತಾರು ರಾಶಿ ಗ್ರಹ ಶೂನ್ಯವಾದರೆ ಅದು ಕಾಲ ಸರ್ಪ ಯೋಗ ಎನಿಸುವುದು. ಮತ್ತಿದು 12 ಬಗೆಯ ವಿವಿಧ ದೋಷಗಳಾಗಿಯೂ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಕಷ್ಟಗಳು ಬರುತ್ತದೆ. ಹುಟ್ಟಿದ 12 ವಯಸ್ಸಿನ ಒಳಗೆ ತಿಳಿದು ಶಾಂತಿ-ಪ್ರಾಯಶ್ಚಿತ್ತಗಳ ಮಾಡಿಸಿದರೆ ಅತ್ಯಂತ ಒಳ್ಳೆಯದು. ನಂತರ ಮಾಡಿದ ಕರ್ಮಗಳಿಗೆ ಪೂರ್ಣ ಫಲವಿರದು. ಆದರೂ ವಿಧಿವತ್ತಾಗಿ ಯಾವುದೇ ವಯಸ್ಸಿನಲ್ಲಿ ಮಾಡಿದರಂತೂ ಶುಭವೇ ಸರಿ. ಕ್ರಮ ತಿಳಿದ ಉತ್ತಮ ಪುರೋಹಿತರಿಂದ ಯಥೇಷ್ಟ ದಾನ ಧರ್ಮದಿಂದ ಮಾಡಿಸಬೇಕು.

*ಕಟ್ಟಡ ಗುತ್ತಿಗೆ ಕೆಲಸದಲ್ಲಿ ಬರಿದೇ ಬಾಧೆಗಳು. ಮಂತ್ರ-ಮದ್ದೇನಾದರೂ ಮಾಡಿಸಿದ್ದಾರಾ ಶಂಕೆ.

ಈ ಬಗೆಯ ಅನುಮಾನವೇ ದೋಷ ಎನ್ನುವುದು ಶಾಸ್ತ್ರಗಳು! ನಮ್ಮ ನಡೆ ಒಳ್ಳೆಯದಿದ್ದರೆ, ದೇವರಲ್ಲಿ ಭಕ್ತಿಯಿದ್ದರೆ ಇಂಥ ಶಂಕೆಯು-ಭಯ ಬರುವುದೇ ಇಲ್ಲ. ಯಾರೂ ಏನೂ ಮಾಡಿಸೋಕ್ಕೂ ಆಗೋಲ್ಲ. ನಿಮ್ಮ ಅತಿ ಆಸೆ-ಲಾಲಸೆ-ನಿಯಮ ಕ್ರಮ-ಶ್ರಮವಿಲ್ಲದೇ ಗಳಿಸುವ ನಡೆಗಳನ್ನು ಸರಿಪಡಿಸಿಕೊಳ್ಳಿ. ತಾನೇ ಸರಿಯಾಗುವುದು.

*ಎರಡು ಹೆಣ್ಣು ಮಕ್ಕಳು. ಮುಂದೆ ಗಂಡು ಮಗು ಆಗುವುದೇ?

ನಾಗಮಣಿ, ಮಾರತ್‌ಹಳ್ಳಿ

ಅಜ್ಞಾನಂ ಪರಮಂ ಸುಖಂ! ಎಂದ ಹಾಗೆ ಜನರ ನಡಾವಳಿ ಈ ಕಾಲದಲ್ಲೂ ಮೂರು ನಾಲ್ಕು ಮಕ್ಕಳು ಬೇಕಾ? ಸಾಕಲಾಗುವುದೇ? ಆದರೂ ಅದರಿಂದ ನೆಮ್ಮದಿ ಬರುವುದೇ? ಯಾರದೋ ಕೊಂಕು ನುಡಿ, ಒತ್ತಡಕ್ಕೆ ಈ ಬೇಗುದಿ ತುಂಬಿದ ಸಮಾಜಕ್ಕೆ ಇನ್ನೊಂದು ಮಗು ಯಾಕೆ ಬೇಕು? ಇದೆಲ್ಲ ಚಿಂತನೆ ನಡೆಸಿ. ನಿಮಗೇ ಉತ್ತರ ದೊರೆವುದು.

*ವಿದೇಶದಲ್ಲಿ ಕೆಲ ವರ್ಷವಿದ್ದು ಈಗ ಇಲ್ಲಿ ಸಂಸಾರ ಸರಿಯಾಗುತ್ತಿಲ್ಲ. ದಾರಿ ತೋರಿ.

ರಾಜೀವ, ಯಲಹಂಕ

ನೀವು ಹಲವು ವರ್ಷ ಒಬ್ಬರೇ ಕೊಲ್ಲಿ ದೇಶದಲ್ಲಿ ಇದ್ದು-ಇಲ್ಲಿ ಪತ್ನಿ-ತಂದೆ, ತಾಯಿ ಕುಟುಂಬವನ್ನು ಅವಗಣನೆ ಮಾಡಿದ್ದೀರಿ. ಈಗ ಮಕ್ಕಳಾಗುತ್ತಿಲ್ಲ. ಪತ್ನಿ ಸರಿ ಹೊಂದುತ್ತಿಲ್ಲ ಎಂದರೆ! ದಂಪತಿಗಳು ವೈದ್ಯ ತಪಾಸಣೆ-ಮನೋವೈದ್ಯರಲ್ಲಿ ಆಪ್ತ ಸಲಹೆ ಮೊದಲು ಪಡೆಯಿರಿ. ಸ್ವಲ್ಪ ಕಾಲಾವಕಾಶ ಕೊಡಿ. ಆ ನಂತರ ಜಾತಕ ಪರಿಶೀಲನೆ ಮಾಡಿಸಿ. ತಹಬದಿಗೆ ಬರುವುದು.

*ಪ್ರೀತಿಯಿಂದ ಸಾಕಿದ ಬೆಕ್ಕು ಕಾಣದಾಗಿದೆ. ಬಹಳ ಆತಂಕವಾಗಿದೆ. ಸಿಗುವುದೇ?

ವೀರಭದ್ರ ಪಿ, ಲಕ್ಷ್ಮೀದೇವಿನಗರ

ಊರು ಕೊಳ್ಳೆ ಹೋಗುತ್ತಿರುವಾಗ ತನ್ನ ಪಂಚೆಗೆ ಅತ್ತನಂತೆ! ಹಾಗಿದೆ ನಿಮ್ಮ ಸ್ಥಿತಿ. ಬಹು ಮೋಹಗಳಲ್ಲಿ ಪಶು ಮೋಹವೂ ಒಂದು. ಈ ಮೋಹವೇ ಬಂಧನವಲ್ಲವೇ? ಬೆಕ್ಕು ತನ್ನ ಸ್ವತಂತ್ರ ಬಯಸಿ ನಿಮ್ಮ ಮೋಹದಿಂದ ಜಿಗಿದ ಮೇಲೆ, ನಿಮಗದರ ಮೋಹವೇಕೇ?! ಚಿಂತಿಸುವುದಕ್ಕೆ ಅರ್ಹವಾದ ಅನೇಕ ವಿಷಯಗಳಿವೆ.

*ಮಗಳಿಗೆ ಕುಜ ದೋಷವೆಂದು ಮದುವೆ ಆಗದು ಎನ್ನುವರು. ನಿಜವೇ ಗುರುಗಳೇ?

ಜ್ಯೋತಿಷ್ಯ ತಿಳಿದವರಲ್ಲಿ ಕೇಳಿದೆ ಎನ್ನುವಿರಿ! ಅವರು ತಿಳಿದವರು ಎಂದು ತಿಳಿಯಲು ಜ್ಯೋತಿಷ್ಯದ ಬಗ್ಗೆ ನಿಮಗೇನು ತಿಳಿದಿದೆ?! ಸೋಜಿಗ ಜಗವಿದು! ದೋಷವಿದ್ದರೆ ಅದಕ್ಕೆ ಸಮರ್ಥ ಪರಿಹಾರಗಳೂ ಶಾಸ್ತ್ರವೇ ಹೇಳಿದೆ. ಅದರಂತೆ ಶ್ರಮವಹಿಸಿ ತಿಳಿದವರನ್ನೇ ಕೇಳಿ ಪರಿಹರಿಸಿಕೊಳ್ಳಿ.


Viewing all articles
Browse latest Browse all 6795

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ವಚನಗಳಿಂದ ಸಂಗೀತ ಲೋಕ ಶ್ರೀಮಂತ


Final chapter from Krishnamacharya's Yogasanagalu Part II Pranayam. Plus the...


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಆಲೋಚನೆಗೂ ಕ್ರಿಯೆಯಷ್ಟೇ ಮಹತ್ವವಿದೆ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>