Quantcast
Channel: VijayKarnataka
Viewing all articles
Browse latest Browse all 6795

ಬರವಿದ್ದರೂ ರಾಜ್ಯದ ಜಿಡಿಪಿ ಏರಿಕೆ: ಸಿಎಂ

$
0
0

-ಐಟಿ, ಬಿಟಿ ವಲಯದ ಸಾಧನೆಯಿಂದ ಈ ಪ್ರಗತಿ

-ಮೂರು ದಿನಗಳ 'ರಾಷ್ಟ್ರೀಯ ಆಗ್ರೋ ಟೆಕ್' ಆರಂಭ

ಮೈಸೂರು: ಬರದಿಂದ ಕೃಷಿ ಹಾಗೂ ಕೈಗಾರಿಕಾ ವಲಯಗಳಲ್ಲಿ ಪ್ರಗತಿ ಕುಂಠಿತವಾದರೂ ಐಟಿ ಹಾಗೂ ಬಿಟಿ ಕ್ಷೇತ್ರಗಳ ಗಣನೀಯ ಸಾಧನೆ ಫಲವಾಗಿ ಕರ್ನಾಟಕದ ಜಿಡಿಪಿ ಪ್ರಮಾಣ 12.15 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಜಂಟಿಯಾಗಿ ಮೈಸೂರಿನಲ್ಲಿ ಆಯೋಜಿಸಿರುವ ಮೂರು ದಿನಗಳ 'ರಾಷ್ಟ್ರೀಯ ಆಗ್ರೋ ಟೆಕ್-2016'ಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ''ಬರದ ಹಿನ್ನೆಲೆಯಲ್ಲಿ 2015-16ನೇ ಸಾಲಿನಲ್ಲಿ ಜಿಡಿಪಿ ಪ್ರಮಾಣ 7.36 ಲಕ್ಷ ಕೋಟಿ ರೂ.ಗೆ ಮಾತ್ರ ಸೀಮಿತವಾಗಿತ್ತು. ಕೃಷಿ ವಲಯದ ಪ್ರಗತಿ ಶೇ. 4.17ರಷ್ಟಿತ್ತು. ಕೈಗಾರಿಕಾ ವಲಯದಲ್ಲೂ ಉತ್ಪಾದನೆ ಕುಂಠಿತವಾಗಿತ್ತು. ಹೀಗಿದ್ದರೂ ಈ ಸಾಲಿನಲ್ಲಿ ಐಟಿ ಹಾಗೂ ಬಿಟಿ ವಲಯದ ಉತ್ತಮ ಸಾಧನೆ ಜಿಡಿಪಿ ಏರಿಕೆಗೆ ಕಾರಣವಾಗಲಿದೆ. ಹೀಗಾಗಿ 2016-17ನೇ ಸಾಲಿನ ಜಿಡಿಪಿಯನ್ನು 12.15 ಲಕ್ಷ ಕೋಟಿ ರೂ. ನಿರೀಕ್ಷಿಸಲಾಗಿದೆ'' ಎಂದು ಹೇಳಿದರು.

ದುಂಡು ಮೇಜಿನ ಸಭೆ: ಸಣ್ಣ ಕೈಗಾರಿಕೋದ್ಯಮಿಗಳ ಹಲವಾರು ಬೇಡಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ''ಸಣ್ಣ ಕೈಗಾರಿಕೆಗಳ ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಮೇ ತಿಂಗಳಿನಲ್ಲಿ ಸಂಘದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದುಂಡು ಮೇಜಿನ ಸಭೆ ಕರೆದು ಚರ್ಚಿಸುತ್ತೇನೆ'' ಎಂದು ಭರವಸೆ ನೀಡಿದರು.

''ಸಣ್ಣ ಕೈಗಾರಿಕೆಗಳಿಗೆ ನೀಡುತ್ತಿರುವ 2 ಎಕರೆವರೆಗಿನ ಭೂಮಿಯನ್ನು 10 ವರ್ಷ ಲೀಸ್/ಸೇಲ್ ಕಾಯಿದೆಯಲ್ಲಿ ಮಂಜೂರು ಮಾಡಬೇಕು ಎಂದು ಹೇಳಿದ್ದೀರಿ. ಏಕೆಂದರೆ ಕೈಗಾರಿಕೆಗಳಿಗೆ 99 ವರ್ಷದ ಗುತ್ತಿಗೆ ಅಡಿ ಭೂಮಿ ನೀಡಲಾಗುತ್ತಿದೆ. ಇದನ್ನು ಬದಲು ಮಾಡುವುದರಿಂದ ತೊಂದರೆಯೂ ಆಗಬಹುದು. ಆದರೂ ಇದರ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಕ್ರಮ ವಹಿಸುತ್ತೇನೆ'' ಎಂದು ಸಿಎಂ ಹೇಳಿದರು.

ನಾನೂ ಕೈಗಾರಿಕಾ ಸ್ನೇಹಿ

''ಹಿಂದೆಲ್ಲಾ ನನ್ನನ್ನು ಕೈಗಾರಿಕಾ ಸ್ನೇಹಿಯಲ್ಲ ಎಂದು ಟೀಕಿಸುವವರು ಇದ್ದರು. ಇವರು ಅಭಿವೃದ್ಧಿ ಪರವಾಗಿಲ್ಲ ಎಂದೆಲ್ಲಾ ವ್ಯಾಖ್ಯಾನಿಸಿದ್ದರು. ನಮ್ಮ ಸರಕಾರ ಬಂದ ಮೇಲೆ 2014ರಲ್ಲಿ ಆಯೋಜಿಸಿದ್ದ ಬಂಡವಾಳ ಹೂಡಿಕೆದಾರರ ಸಮಾವೇಶ ಇದನ್ನು ಸುಳ್ಳು ಮಾಡಿತು. ಸಮಾವೇಶಕ್ಕೆ ಆಗಮಿಸಿದ್ದ ಪ್ರಮುಖ ಉದ್ಯಮಿಗಳು ನಮ್ಮ ಪ್ರಯತ್ನಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಇಡೀ ದೇಶದಲ್ಲಿಯೇ ಇಂಥ ಸಮಾವೇಶ ನಡೆದಿಲ್ಲ ಎನ್ನುವ ಮಾತು ಹೂಡಿಕೆದಾರರಿಂದ ಕೇಳಿ ಬಂದಿತು. ರಾಜ್ಯಕ್ಕೆ ಪ್ರಗತಿದಾಯಕ ಎನ್ನುವ ನೀತಿ ರೂಪಿಸಿದ್ದೇವೆ. ಅದರಲ್ಲೂ ಕೃಷಿ ಆಧರಿತ ಕೈಗಾರಿಕೆಗಳು ಬೆಳೆಯಬೇಕು ಎನ್ನುವುದು ನಮ್ಮ ಆಶಯ. 2019ರ ವರೆಗೆ ಹೊಸ ಕೈಗಾರಿಕಾ ನೀತಿ ಇರಲಿದ್ದು, ಇದರಡಿ ರಾಜ್ಯದ ಕೈಗಾರಿಕಾ ವಲಯ ಅಪರಿಮಿತ ಬೆಳವಣಿಗೆ ಕಾಣುವ ವಿಶ್ವಾಸವಿದೆ'' ಎಂದು ಹೇಳಿದರು.

ಮೂರು ದಿನ ನಡೆಯುವ ಮೇಳದಲ್ಲಿ ದೇಶದ ನಾನಾ ಭಾಗಗಳಿಂದ ಸಣ್ಣ ಉದ್ಯಮದಾರರು ಪಾಲ್ಗೊಂಡಿದ್ದಾರೆ. 287 ಮಳಿಗೆಗಳನ್ನು ಸ್ಥಾಪಿಸಿ, ಕೃಷಿಗೆ ಪೂರಕವಾಗಿರುವ ತೋಟಗಾರಿಕೆ, ರೇಷ್ಮೆ, ಜೈವಿಕ ತಂತ್ರಜ್ಞಾನ, ಪಶುಸಂಗೋಪನೆ, ಕುಕ್ಕುಟೋದ್ಯಮ, ಆಹಾರ ಸಂಸ್ಕರಣೆ ಮತ್ತು ಮೀನುಗಾರಿಕೆ ಸಂಬಂಧಿತ ಉದ್ಯಮಗಳ ಸಣ್ಣ ಕೈಗಾರಿಕಾ ಉತ್ಪನ್ನಗಳನ್ನು ಪ್ರದರ್ಶಿಸಲಾಗಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>