Quantcast
Channel: VijayKarnataka
Viewing all articles
Browse latest Browse all 6795

ಅಂಧರ ರಾಜ್ಯದಲ್ಲಿ ಒಕ್ಕಣ್ಣಿನ ದೊರೆಯಂತೆ ಭಾರತದ ಆರ್ಥವ್ಯವಸ್ಥೆ: ರಾಜನ್‌

$
0
0

ವಾಷಿಂಗ್ಟನ್‌ನಲ್ಲಿ ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌ ಹೇಳಿಕೆ / ಭಾರತದ ಆರ್ಥಿಕತೆ ಸುಧಾರಿಸುತ್ತದೆ ಎಂದ ಗವರ್ನರ್‌

ವಾಷಿಂಗ್ಟನ್‌: ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಭಾರತ ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಿದೆ ಎಂದು ಐಎಂಎಫ್‌ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಬಣ್ಣಿಸಿವೆ. ಆದರೆ ಇಡೀ ಜಗತ್ತಿನ ಆರ್ಥಿಕತೆ ಮಂದಗತಿಯಲ್ಲಿರುವುದರಿಂದ ಭಾರತದ ಪರಿಸ್ಥಿತಿ ' ಅಂಧರ ರಾಜ್ಯದಲ್ಲಿ ಒಕ್ಕಣ್ಣಿನ ವ್ಯಕ್ತಿಯೇ ದೊರೆ' ಎಂಬಂತಾಗಿದೆ ಎಂದು ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌ ಬಣ್ಣಿಸಿದ್ದಾರೆ.

ಜಾಗತಿಕ ಬಿಕ್ಕಟ್ಟುಗಳು ತನ್ನ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಬೀರದಂತೆ ಹಲವಾರು ಕ್ರಮಗಳನ್ನು ಭಾರತ ತೆಗೆದುಕೊಂಡಿದೆ. ಜತೆಗೆ ಹಲವಾರು ಆರ್ಥಿಕ ಸುಧಾರಣಾ ಕ್ರಮಗಳೂ ನಡೆಯುತ್ತಿವೆ. ಹೀಗಿದ್ದರೂ, ಇನ್ನೂ ತೃಪ್ತಿಕರ ಮಟ್ಟಕ್ಕೆ ದೇಶ ಸಾಗಬೇಕಾಗಿದೆ ಎಂದು ರಾಜನ್‌ ಹೇಳಿದ್ದಾರೆ.

ವಿಶ್ವಬ್ಯಾಂಕ್‌ ಮತ್ತು ಐಎಂಎಫ್‌ ಜತೆಗೆ ಸಭೆ ಹಾಗೂ ಜಿ20 ಮಾತುಕತೆಯ ಸಲುವಾಗಿ ವಾಷಿಂಗ್ಟನ್‌ನಲ್ಲಿರುವ ರಘುರಾಮ್‌ ರಾಜನ್‌ ಸಂದರ್ಶನವೊಂದರಲ್ಲಿ, ಭಾರತದ ಅರ್ಥವ್ಯವಸ್ಥೆಯ ಸ್ಥಿತಿ ಗತಿ ಕುರಿತು ಮಾತನಾಡಿದರು.

ಭಾರತದಲ್ಲಿ ಹೂಡಿಕೆಯ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಪ್ರತಿಯೊಂದು ಜಾಗತಿಕ ಮಟ್ಟದ ವಿಪ್ಲವಗಳೆದುರು ನಿರೋಧಕ ಶಕ್ತಿಯನ್ನು ಭಾರತ ಹೊಂದಿರದಿದ್ದರೂ, ಹಲವಾರು ತಲ್ಲಣಗಳನ್ನು ಎದುರಿಸಬಲ್ಲ ಸಾಮರ್ಥ್ಯವನ್ನು ಒಳಗೊಂಡಿದೆ ಎಂದರು.

ದೇಶದಲ್ಲಿ ಶೇ.11ರ ಮಟ್ಟದಲ್ಲಿದ್ದ ಹಣದುಬ್ಬರ ಶೇ.5ಕ್ಕಿಂತ ಕೆಳಕ್ಕೆ ಇಳಿದಿದೆ. ವಿತ್ತೀಯ ಕೊರತೆ ನಿಯಂತ್ರಣದಲ್ಲಿದ್ದು, ಬಡ್ಡಿ ದರಗಳನ್ನು ಇಳಿಸಲು ಅವಕಾಶ ಸೃಷ್ಟಿಯಾಗಿದೆ. ರಚನಾತ್ಮಕ ಸುಧಾರಣೆಗಳು ನಡೆಯುತ್ತಿವೆ ಎಂದು ವಿವರಿಸಿದರು.

ಚೀನಾಕ್ಕಿಂತ 10 ವರ್ಷ ಹಿಂದಿರುವ ಭಾರತ:

''ಸುಧಾರಣೆಯ ಕ್ರಮಗಳ ವಿಚಾರದಲ್ಲಿ ಭಾರತ ಮತ್ತು ಚೀನಾವನ್ನು ಹೋಲಿಸುವುದಿದ್ದರೆ, ಭಾರತವು ಚೀನಾಕ್ಕಿಂತ ಸುಮಾರು 1 ದಶಕದಷ್ಟು ಹಿಂದಿದೆ. ಇದಕ್ಕೆ ಉಭಯ ರಾಷ್ಟ್ರಗಳ ಆರ್ಥಿಕತೆಯ ಗಾತ್ರದಲ್ಲಿರುವ ವ್ಯತ್ಯಾಸವೂ ಕಾರಣ. ಅವರ ಆರ್ಥಿಕತೆಯ ಗಾತ್ರದ ಐದನೇ ಒಂದರಷ್ಟು ನಮ್ಮದಾಗಿದೆ. ಹೀಗಾಗಿ ಚೀನಾವನ್ನು ಸರಿಗಟ್ಟಲು ಮತ್ತಷ್ಟು ಕಾಲಾವಕಾಶ ಅಗತ್ಯ'' ಎಂದು ರಘುರಾಮ್‌ ರಾಜನ್‌ ಹೇಳಿದರು.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>