Quantcast
Channel: VijayKarnataka
Viewing all articles
Browse latest Browse all 6795

ಸರಕಾರ ಉರುಳಿಸುವುದರಲ್ಲಿ ಕಾಂಗ್ರೆಸ್‌ ಎತ್ತಿದ ಕೈ: ಭಾರದ್ವಾಜ್‌

$
0
0

ಹೊಸದಿಲ್ಲಿ: ಭ್ರಷ್ಟಾಚಾರದ ಆರೋಪದ ಮೇಲೆ ಉತ್ತರ ಪ್ರದೇಶದ ಮುಲಾಯಂ ಸಿಂಗ್‌ ಸರಕಾರವನ್ನು ಉರುಳಿಸಲು ಕಾಂಗ್ರೆಸ್‌ ಯತ್ನಿಸಿತ್ತು ಎಂಬ ಕೇಂದ್ರದ ಮಾಜಿ ಕಾನೂನು ಸಚಿವ ಹೆಚ್.ಆರ್‌. ಭಾರದ್ವಾಜ್‌ ಅವರ ಹೇಳಿಕೆ ಬಗ್ಗೆ ಕಾಂಗ್ರೆಸ್‌ ಮೌನ ವಹಿಸಿದೆ.

2007ರಲ್ಲಿ ಮುಲಾಯಂ ಸರಕಾರವನ್ನು ಕಾಂಗ್ರೆಸ್‌ ಉರುಳಿಸಲು ಯತ್ನಿಸಿತ್ತು. ಕಾನೂನು ಸಚಿವನಾಗಿ ನಾನು ಅದನ್ನು ತಡೆದಿದ್ದೆ ಎಂದು ಕರ್ನಾಟಕದ ಮಾಜಿ ರಾಜ್ಯಪಾಲ ಭಾರದ್ವಾಜ್‌ ಹೇಳಿದ್ದಾರೆ.

ಭಾರದ್ವಾಜ್‌ ಅವರ ಹೇಳಿಕೆ ಬಿಜೆಪಿಗೆ ಹೊಸ ಅಸ್ತ್ರವಾಗಿದೆ. 'ಭಾರದ್ವಾಜ್‌ ಅವರ ಹೇಳಿಕೆಯಲ್ಲಿ ಹೊಸದೇನಿಲ್ಲ. ಸಂವಿಧಾನದ ಕಲಂ 356 ಅನ್ನು ಕಾಂಗ್ರೆಸ್‌ ಈ ಹಿಂದೆಯೂ ಸಾಕಷ್ಟು ಬಾರಿ ದುರ್ಬಳಕೆ ಮಾಡಿಕೊಂಡಿದೆ. ಈಗ ಉತ್ತರಾಖಂಡದಲ್ಲಿ ಕೇಂದ್ರದ ಆಡಳಿತ ಜಾರಿ ತಂದಿರುವ ವಿಚಾರವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಲಾಗುತ್ತಿದೆ. ಅದಕ್ಕೂ ಮೊದಲು ಅರುಣಾಚಲ ಪ್ರದೇಶದ ವಿಚಾರವಾಗಿಯೂ ಕಾಂಗ್ರೆಸ್ ಇಂಥ ಆರೋಪ ಮಾಡಿತ್ತು,'ಎಂದು ಬಿಜೆಪಿ ಗುಡುಗಿದೆ.

ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆಯಿಂದ ಭಾರದ್ವಾಜ್‌ ಪದೇಪದೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ದೂರಿವೆ.

2005ರಲ್ಲಿ ಜೆಡಿಯು-ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರದಂತೆ ತಡೆಯುವ ನಿಟ್ಟಿನಲ್ಲಿ ಬಿಹಾರದಲ್ಲಿ ಹೇರಿದ್ದ ಕೇಂದ್ರದ ಆಡಳಿತದ ಪರವಾಗಿ ಸುಪ್ರೀಂಕೋರ್ಟ್‌ ತೀರ್ಪು ಹೊರಬೀಳುವಂತೆ ನೋಡಿಕೊಳ್ಳಬೇಕು ಎಂದು ಯುಪಿಎ ಸರಕಾರ ತಮ್ಮ ಮೇಲೆ ವಿಪರೀತ ಒತ್ತಡ ಹೇರಿತ್ತು ಎಂದು ಮಾಜಿ ಕಾನೂನು ಸಚಿವರು ಈ ಹಿಂದೆ ದೂರಿದ್ದರು.

ರಾಹುಲ್‌ ಹೃದಯ ಶೂನ್ಯ:

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಎಲ್ಲರನ್ನು ಪ್ರೀತಿಸುವ ಸಹೃದಯಿಯಾಗಿದ್ದರು. ಆದರೆ ಅವರ ಮಗ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಹೃದಯ ಶೂನ್ಯ ಎಂದು ಭಾರದ್ವಾಜ್‌ ದೂರಿದ್ದಾರೆ.

ರಾಹುಲ್‌ ಗಾಂಧಿಯನ್ನು ಟೀಕಿಸಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಸಾಕಷ್ಟು ಬಾರಿ ರಾಹುಲ್‌ ನಾಯಕತ್ವ ಗುಣವನ್ನು ಭಾರದ್ವಾಜ್‌ ಪ್ರಶ್ನಿಸಿದ್ದರು. ಬಿಜೆಪಿ ವಿರುದ್ಧ ಸೆಣೆಸಲು ಪಕ್ಷ ದುರ್ಬಲವಾಗಿದ್ದು, ರಾಹುಲ್‌ಗೆ ವಾಸ್ತವ ಸಂಗತಿಯ ಅರಿವೇ ಇಲ್ಲ ಎಂದು 2104ರ ಸಾರ್ವತ್ರಿಕ ಚುನಾವಣೆಗೆ ಮೊದಲು ಭಾರದ್ವಾಜ್‌ ಹೇಳಿದ್ದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>