Quantcast
Channel: VijayKarnataka
Viewing all articles
Browse latest Browse all 6795

ರಿಂಗ್ ರೋಡ್: ರಿಂಗ್‌ರೋಡ್‌ನಲ್ಲಿ ಟ್ರಾಫಿಕ್ ಜಾಮ್

$
0
0

ಚಿತ್ರ : ರಿಂಗ್ ರೋಡ್

* ಎಚ್. ಮಹೇಶ್

ಹುಡುಗಿಯರೇ ಸೇರಿಕೊಂಡು ಮಾಡಿದ ರಿಂಗ್‌ರೋಡ್ ಸುಮಾ ಚಿತ್ರದಲ್ಲಿ ಯಾರಿಗೂ ಗೊತ್ತಿಲ್ಲದ ಸರ್‌ಪ್ರೈಸ್ ಎಲಿಮೆಂಟ್ ಇದೆ. ಇದುವರೆಗೂ ಆ ಗುಟ್ಟು ಬಿಟ್ಟು ಕೊಡದೇ ಇದ್ದ ಹುಡುಗಿಯರ ತಂಡ ಅದನ್ನು ಪರಿಣಾಮಕಾರಿಯಾಗಿ ತೆರೆಯ ಮೇಲೆ ತಂದಿದೆೆ. ಇದು 2003ರಲ್ಲಿ ರಿಂಗ್‌ರೋಡ್‌ನಲ್ಲಿ ನಡೆದ ಗಿರೀಶ್ ಕೊಲೆಯೇ ಚಿತ್ರಕ್ಕೆ ಪ್ರೇರಣೆಯಾಗಿದೆ. ಶುಭಾ, ಪ್ರಿಯಕರನಿಗಾಗಿ ಬಾವಿ ಪತಿಯನ್ನು ಕೊಲೆ ಮಾಡಿಸುತ್ತಾಳೆ ಎಂಬುದು ಇದುವರೆಗೂ ಗೊತ್ತಿರುವ ಸಂಗತಿ. ಆದರೆ ಚಿತ್ರದಲ್ಲಿ ಅದಕ್ಕೊಂದು ಟ್ವಿಸ್ಟ್ ಇದೆ. ಅದು ಏನು ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು.

ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ರಿಂಗ್‌ರೋಡ್‌ನಲ್ಲಿ ನಡೆದ ಕೊಲೆ ಕೇಸ್ ಅನ್ನು ಚೆನ್ನಾಗಿಯೇ ತನಿಖೆ ಮಾಡಿದ್ದಾರೆ. ಆದರೆ ಅದನ್ನು ಹೇಳಲು ಆರಿಸಿಕೊಂಡಿರುವ ಕಥಾ ನಿರೂಪಣೆ ಕನ್ನಡದ ಪ್ರೇಕ್ಷಕನಿಗೆ ಗೊಂದಲ ಸೃಷ್ಟಿಸುತ್ತದೆ. ಒಂದು ಕತೆಗೆ ಹಲವಾರು ಉಪಕತೆಗಳು ಬಂದು ಕ್ಲೈಮಾಕ್ಸ್‌ನಲ್ಲಿ ಅಷ್ಟೂ ಕತೆಗಳಿಗೆ ಮುಕ್ತಿ ಸಿಗುತ್ತದೆ. ಇಲ್ಲಿ ನಿರ್ದೇಶಕಿ ಪ್ರಿಯಾ ಇಂಗ್ಲಿಷ್ ಸಿನಿಮಾಗಳ ಸ್ಕ್ರೀನ್ ಪ್ಲೇ ವಿಧಾನ (ರಿವರ್ಸ್ ಸ್ಕ್ರೀನ್ ಪ್ಲೇ) ಆರಿಸಿಕೊಂಡಿದ್ದಾರೆ. ಇಲ್ಲಿ ಅನೇಕ ಕತೆಗಳಿಗೆ ಅವರು ಚಿತ್ರದ ಕೊನೆಯಲ್ಲಿ ಉತ್ತರ ಕೊಡುವುದಕ್ಕೆ ಸಾಧ್ಯವಾಗಿಲ್ಲ. ಚಿತ್ರಕತೆ ಹೇಳುವ ವಿಧಾನ ಚೆನ್ನಾಗಿದೆ. ಆದರೆ ಅದನ್ನು ಸ್ಲೋ ಮೂವಿಂಗ್ ಟ್ರಾಫಿಕ್‌ನಂತಿದೆ. ಇನ್ನಷ್ಟು ಫಾಸ್ಟ್ ಮಾಡಬೇಕಿತ್ತು. ಚಿತ್ರದ ಮೊದಲಾರ್ಧ ಸ್ವಲ್ಪ ಟ್ರಾಫಿಕ್ ಜಾಮ್‌ನಂತೆ ತೆವಳುತ್ತದೆ. ವಿರಾಮದ ನಂತರ ಟ್ರಾಫಿಕ್ ಜಾಮ್ ಕ್ಲಿಯರ್ ಆಗಿ ಚಿತ್ರಕ್ಕೆ ವೇಗ ಸಿಗುತ್ತದೆ. ಕೊಲೆ ಘಟನೆಯನ್ನೇ ಇಟ್ಟುಕೊಂಡು ನೇರವಾಗಿ ಕತೆ ಹೇಳಿದ್ದಿದ್ದರೆ ಚಿತ್ರ ಇನ್ನಷ್ಟು ಆಪ್ತವಾಗುತ್ತಿತ್ತು. ಹಿನ್ನೆಲೆ ಸಂಗೀತ ಹಾಗೂ ಬಿಟ್ ಸಂಗೀತ ಚಿತ್ರಕ್ಕೆ ಮೆರುಗು ಕೊಡುತ್ತದೆ. ಕ್ಯಾಮೆರಾ ಕೆಲಸ ಚೆನ್ನಾಗಿದೆ. ಎಡಿಟಿಂಗ್ ಶಾರ್ಪ್ ಆಗಬೇಕಿತ್ತು. ಡೈಲಾಗ್‌ಗಳು ಹೊಸ ರೀತಿಯಲ್ಲಿವೆ. ಹೊಸ ಹುಡುಗಿ ಖುಷಿ ಚಿತ್ರದ ಆಕರ್ಷಕ ಬಿಂದು. ಅವರು ಇನ್ನೊಸೆಂಟ್ ಆಗಿ ಹಾಗೂ ವಾಯ್‌ಲೆಂಟ್ ಆಗಿ ಕಾಣಿಸಿಕೊಂಡಿರುವ ರೀತಿ ಶ್ಲಾಘನೀಯ. ಬಾವಿ ಪತಿ ಪಾತ್ರಧಾರಿ ಹರೀಶ್ ಹೆಚ್ಚು ದೃಶ್ಯಗಳಲ್ಲಿ ಕಾಣಿಸಿಕೊಳ್ಳದೇ ಇದ್ದರೂ ನಟನೆ ಮೂಲಕ ಇಂಪ್ರೆಸ್ ಮಾಡುತ್ತಾರೆ. ಖಳ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಗರ್ ಪುರಾಣಿಕ್ ನಟನೆಯಲ್ಲಿ ಗೆದ್ದಿದ್ದಾರೆ. ದುನಿಯಾ ವಿಜಯ್ ಇಲ್ಲಿ ಪೊಲೀಸ್ ಇನ್‌ವೆಸ್ಟಿಗೇಟಿವ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರಕ್ಕೆ ಇನ್ನಷ್ಟು ಫೋರ್ಸ್ ಬೇಕಿತ್ತು. ನಿಖಿತಾ ಓಕೆ ಓಕೆ. ಶ್ರೀನಗರ ಕಿಟ್ಟಿ, ಸಂಜನಾ ಪಾತ್ರಗಳು ಅನವಶ್ಯಕ ಅನಿಸುತ್ತದೆ. ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಚಿತ್ರವನ್ನು ಟ್ರಿಮ್ ಮಾಡಿದರೆ ಒಳ್ಳೆಯದು. ಆದರೂ ಹುಡುಗಿಯರ ತಂಡ ಮಾಡಿರುವ ಈ ಪ್ರಯೋಗಾತ್ಮಕ ಚಿತ್ರವನ್ನು ಫ್ಯಾಮಿಲಿ ಸಮೇತ ಕುಳಿತು ನೋಡಬಹುದು.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)