Quantcast
Channel: VijayKarnataka
Viewing all articles
Browse latest Browse all 6795

ಮಲ್ಯ ಅಕ್ರಮ ಆಸ್ತಿ ಪತ್ತೆಗೆ ಇ.ಡಿ ಯತ್ನ

$
0
0

-ಆಸ್ತಿ ಮಾಹಿತಿ ಕೋರಿ ಬ್ರಿಟನ್‌, ದ.ಆಫ್ರಿಕಾ ಮತ್ತಿತರ ದೇಶಗಳಿಗೆ ಪತ್ರ-
ಹೊಸದಿಲ್ಲಿ : ಕಿಂಗ್‌ಫಿಷರ್‌ ಏರ್‌ಲೈನ್ಸ್‌ನಲ್ಲಿ ತೀವ್ರ ನಷ್ಟ ಅನುಭವಿಸಿ ವಿದೇಶಕ್ಕೆ ಪಲಾಯನವಾಗಿರುವ ಉದ್ಯಮಿ ವಿಜಯ ಮಲ್ಯ ವಿರುದ್ಧದ ತನಿಖೆಯನ್ನು ಜಾರಿ ನಿರ್ದೇಶನಾಲಯ(ಇ.ಡಿ) ಮತ್ತಷ್ಟು ವಿಸ್ತರಿಸಿದೆ. ಮಲ್ಯ ಅವರು ವಿದೇಶಗಳಲ್ಲಿ ಹೊಂದಿರಬಹುದಾದ ಅಕ್ರಮ ಆಸ್ತಿಗಳ ವಿವರ ಸಂಗ್ರಹಿಸಲು ಪ್ರಯತ್ನ ನಡೆಸಿದೆ.

ಈ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ, ಬ್ರಿಟನ್‌, ಫ್ರಾನ್ಸ್‌, ಹಾಂಕಾಂಗ್‌ ಮತ್ತಿತರ ದೇಶಗಳಿಗೆ ಪತ್ರ ಬರೆದು ಮಲ್ಯ ಆಸ್ತಿಗಳ ಮಾಹಿತಿ ಪಡೆಯಲು ಇ.ಡಿ. ಸಿದ್ಧತೆ ನಡೆಸಿದೆ. ಮಲ್ಯ ಒಡೆತನದ ಯುನೈಟೆಡ್‌ ಬ್ರೂವರೀಸ್‌ನ(ಯುಪಿ) ಸ್ಥಿರ ಮತ್ತು ಚರ ಆಸ್ತಿಗಳ ಮಾಹಿತಿಯನ್ನು ಇ.ಡಿ. ಸಂಗ್ರಹಿಸಿದ್ದು, ವಿದೇಶಗಳಲ್ಲಿನ ಆಸ್ತಿಗಳತ್ತ ಈಗ ಕಣ್ಣಾಯಿಸಿದೆ ಎಂದು ಮೂಲಗಳು ತಿಳಿಸಿವೆ.

ಮಲ್ಯಗೆ ಸಂಬಂಧಿಸಿದಂತೆ ವಿದೇಶಗಳಲ್ಲಿ ಆಸ್ತಿ ಖರೀದಿ, ನೋಂದಣಿ ಮತ್ತಿತರ ಮಾಹಿತಿಗಳನ್ನು ಇ.ಡಿ. ಸಂಗ್ರಹಿಸುತ್ತಿದೆ. ಕಾಳಧನ ನಿಗ್ರಹ ಕಾಯ್ದೆಯನ್ವಯ ತನಿಖೆ ಕೈಗೊಂಡಿರುವ ಇ.ಡಿ. ಮಲ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ವಿಮಾನಯಾನ ಉದ್ಯಮಕ್ಕೆ ಪೂರಕವಾಗಿ ಕಾರ್ಪೊರೆಟ್‌ ಸಾಲಗಳ ಮರುರಚನೆ ಕುರಿತಾದ 2010ರ ನೀತಿ ಕುರಿತಾಗಿ ಆರ್‌ಬಿಐಗೂ ಇ.ಡಿ ಪತ್ರ ಬರೆದಿದೆ. ಅಂದಿನ ತಪ್ಪು ನೀತಿಯು ಕಿಂಗ್‌ಫಿಷರ್‌ ಏರ್‌ಲೈನ್ಸ್‌ನಂಥ ಕೆಲವು ವಿಮಾನಯಾನ ಸಂಸ್ಥೆಗಳಿಗೆ ಪೂರಕವಾಗಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಮಲ್ಯ ಅವರ ಹೆಚ್ಚಿನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಇ.ಡಿಗೆ ಸಾಧ್ಯವಾಗದು. ಏಕೆಂದರೆ ಹೆಚ್ಚಿನ ಆಸ್ತಿಗಳ ಹಕ್ಕುಸ್ವಾಮ್ಯವನ್ನು ಬ್ಯಾಂಕ್‌ಗಳು ಹೊಂದಿವೆ.

ಐಡಿಬಿಐ ಬ್ಯಾಂಕ್‌ಗೆ ಮಲ್ಯ ಅವರಿಂದ ಆದ 900 ಕೋಟಿ ರೂ.ಗಳ ವಂಚನೆ ಸಂಬಂಧ ಇ.ಡಿ ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದೆ. ಅಲ್ಲದೇ 300 ಕೋಟಿ ರೂ.ಗಳು ವಿದೇಶಗಳಿಗೆ ರವಾನೆಯಾದ ಕುರಿತಾಗಿಯೂ ತನಿಖೆ ನಡೆದಿದೆ. ಈ ನಿಟ್ಟಿನಲ್ಲಿಯೇ ವಿದೇಶಗಳಲ್ಲಿನ ಮಲ್ಯ ಆಸ್ತಿಯ ಮಾಹಿತಿಗಳನ್ನು ಇ.ಡಿ ಸಂಗ್ರಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಜಾರಿ ನಿರ್ದೇಶನಾಲಯವು ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಮತ್ತು ಐಡಿಬಿಐ ಬ್ಯಾಂಕ್‌ನ ಕೆಲವು ಅಧಿಕಾರಿಗಳ ವಿಚಾರಣೆ ನಡೆಸಿದೆ. ಏ.9ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಮಲ್ಯಗೆ ಮೂರನೇ ಸಮನ್ಸ್‌ ಅನ್ನೂ ಶನಿವಾರ ಜಾರಿ ಮಾಡಿದೆ. ಅದಕ್ಕೆ ಅವರು ಸ್ಪಂದಿಸದೇ ಹೋದರೆ, ಬಂಧನದ ವಾರಂಟ್‌ ಅನ್ನು ಎದುರಿಸಬೇಕಾಗುತ್ತದೆ.

ಬ್ಯಾಂಕ್‌ಗಳ ಸಾಲ ತೀರಿಸುವ ನಿಟ್ಟಿನಲ್ಲಿ ಹೆಚ್ಚಿನ ಸಮಯ ಕೇಳಿರುವ ಮಲ್ಯ, 7000 ಕೋಟಿ ಸಾಲದಲ್ಲಿ, ಸದ್ಯಕ್ಕೆ 4000 ಕೋಟಿ ರೂ.ಗಳನ್ನು ಪಾವತಿಸುವುದಾಗಿ ಭರವಸೆ ನೀಡಿದ್ದರು. ಬಂಧನ ಭೀತಿಯಿಂದ ಮಾ.2ರಂದು ಬ್ರಿಟನ್‌ಗೆ ಮಲ್ಯ ಪಲಾಯನ ಮಾಡಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>