Quantcast
Channel: VijayKarnataka
Viewing all articles
Browse latest Browse all 6795

ಗುಹಾಲೋಕ ಬತು ಕೇವ್ಸ್

$
0
0

ಅಪರೂಪದ ಗುಹೆಗಳು, ಬೃಹತ್ ಶಿಖರಗಳು, ಪ್ರಕೃತಿಯ ವೈವಿಧ್ಯ ಎಲ್ಲವನ್ನು ಕಣ್ತುಂಬಿಸಿಕೊಳ್ಳಲು ಕೌಲಾಲಂಪುರಕ್ಕೆ ಭೇಟಿ ನೀಡಬೇಕು. ಇಲ್ಲಿನ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳನ್ನೊಮ್ಮೆ ಪ್ರದಕ್ಷಿಣೆ ಹಾಕಲೇಬೇಕು.

- ವಿಕಾಸ್ ಹೆಗಡೆ

ನೋಡಿದಷ್ಟೆ ಎತ್ತರಕ್ಕೆ ಏರುವ ಪರ್ವತಗಳ ಸಾಲು. ಅಲ್ಲಲ್ಲಿ ಸುಣ್ಣದ ಕಲ್ಲಿನ ರಚನೆಗಳು. ಕಲ್ಲುಮುಳ್ಳುಗಳ ನಡುವೆ ಅಲ್ಲಲ್ಲಿ ಗುಹೆಗಳು ಎಲ್ಲವನ್ನು ಗೌಪ್ಯವಾಗಿಟ್ಟುಕೊಂಡಂತೆ ನೋಡುಗರ ಕುತೂಹಲ ಹೆಚ್ಚಿಸಿ ಪ್ರವಾಸಿಗರನ್ನು ಸೆಳೆಯುತ್ತದೆ.

ಮಲೇಷ್ಯಾ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಆ ದೇಶದ ರಾಜಧಾನಿ ಕೌಲಾಲಂಪುರದ ಸುತ್ತಮುತ್ತ ಹಲವಾರು ಪ್ರವಾಸಿ ಕೇಂದ್ರಗಳಿವೆ. ರಾಜಧಾನಿಯಿಂದ ಸ್ವಲ್ಪ ದೂರ ಪ್ರಯಾಣಿಸಿದರೆ ಗೊಂಬಾಕ್ ಎನ್ನುವ ಪ್ರದೇಶ ನಿಮ್ಮನ್ನು ಸೆಳೆಯುತ್ತದೆ. ಈ ಪ್ರದೇಶದಲ್ಲಿರುವ ಬತು ಕೇವ್ಸ್ ಎಂಬ ಸ್ಥಳ ಪ್ರೇಕ್ಷಕರ ಆಕರ್ಷಣೀಯ ಕೇಂದ್ರ. ಅಂಥದ್ದೊಂದು ನೆಲದ ಮೇಲೆ ಕಾಲಿಟ್ಟಾಗ ಕಂಡಿದ್ದು ಎತ್ತರೆತ್ತರದ ಶಿಲಾಪರ್ವತಗಳು, ಅವುಗಳೆದುರಲ್ಲಿ ಬೃಹತ್ ಗಾತ್ರದ ಪ್ರಸನ್ನವದನ 'ಮುರುಗನ್' ಮೂರ್ತಿ! ಬಂಗಾರವರ್ಣದ ಆ ಮೂರ್ತಿ ದೂರದಿಂದಲೇ ಬಿಸಿಲಿಗೆ ಫಳ ಫಳ ಹೊಳೆಯುತ್ತಿತ್ತು. ಈ 'ಬತು ಗುಹೆಗಳು' ಕೌಲಾಲಂಪುರದ ಪ್ರಸಿದ್ಧ ಪ್ರವಾಸಿ ಹಾಗೂ ಹಿಂದೂ ಧಾರ್ಮಿಕ ತಾಣ. ಹಾಗಾಗಿ ಅಲ್ಲಿ ದೇಶವಿದೇಶಗಳ ಜನರ ದಂಡೇ ನೆರೆದಿತ್ತು. ಇಲ್ಲಿನ ಪರ್ವತಗಳು 40 ಕೋಟಿ ವರ್ಷಗಳಷ್ಟು ಹಳೆಯವೆಂದು ಅಂದಾಜಿಸಲಾದ ಸುಣ್ಣದ ಕಲ್ಲಿನ ರಚನೆಗಳು. ಇಲ್ಲಿ ಅನೇಕ ಗುಹೆಗಳಿದ್ದು, ಮುಖ್ಯವಾಗಿ ಮೂರು ಗುಹೆಗಳಿವೆ. ಟೆಂಪಲ್ ಕೇವ್ ಎಂದು ಕರೆಯಲ್ಪಡುವ ದೊಡ್ಡ ಗುಹೆಯಲ್ಲಿ ಮುರುಗನ್ ದೇವಾಲಯವಿದೆ. 1982ರಲ್ಲಿ ತಂಬುಸಾಮಿ ಪಿಳ್ಳೈ ಅವರಿಂದ ಇಲ್ಲಿ ದೇವಾಲಯ ಸ್ಥಾಪಿಸಲ್ಪಟ್ಟಿತಂತೆ. 2006ರಲ್ಲಿ 140 ಅಡಿಯ ಮುರುಗನ್ ಮೂರ್ತಿ ಸ್ಥಾಪಿಸಲ್ಪಟ್ಟಿತು. ಈ ಗುಹೆಗಳನ್ನು ಪ್ರವೇಶಿಸಲು ಸುಮಾರು 280 ಮೆಟ್ಟಿಲುಗಳನ್ನು ಹತ್ತಬೇಕು. ಅಲ್ಲಿನ ಪುಂಡ ಮಂಗಗಳ ಕಾಟದ ನಡುವೆಯೇ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋದೆವು. ಆ ಗುಹೆಯ ಪ್ರವೇಶದ್ವಾರ ಒಳಗೆ ದೊಡ್ಡ ಪ್ರಾಂಗಣದೊಳಕ್ಕೆ ತೆರೆದುಕೊಳ್ಳುತ್ತದೆ. ಎತ್ತರೆತ್ತರ ಕಲ್ಲಿನ ನೈಸರ್ಗಿಕ ರಚನೆಯ ಆ ಪ್ರಾಂಗಣ ಮೇಲ್ಭಾಗದಿಂದಲೂ ಆವೃತವಾಗಿದೆ. ಕರಗಿ ಬೀಳುತ್ತಿರುವ ಜ್ವಾಲಾಮುಖಿಯ ಲಾವಾ ಹಾಗೇ ಗಟ್ಟಿಯಾದಂತೆ ತೋರುವ ರಚನೆಗಳು ಕಾಣುತ್ತಿದ್ದವು. ಬತು ಗುಹೆಗಳ ಒಳಭಾಗವೆಲ್ಲವೂ ಇದೇ ರೀತಿಯ ಅದ್ಭುತ ರಚನೆಯಿಂದ ಕೂಡಿದೆ. ಒಳಗೆಲ್ಲಾ ಹಿಂದೂ ದೇವತೆಗಳ ಹಾಗೂ ಪುರಾಣ ಪಾತ್ರಗಳ ಮೂರ್ತಿಗಳನ್ನು ಹಾಗೂ ಸಣ್ಣ ಸಣ್ಣ ಗುಡಿಗಳನ್ನು ಮಾಡಿಟ್ಟಿದ್ದಾರೆ. ಹಾಗೇ ಆ ಪ್ರಾಂಗಣವನ್ನು ದಾಟಿ ಮತ್ತೆ ಒಂದಿಷ್ಟು ಮೆಟ್ಟಿಲುಗಳನ್ನು ಹತ್ತಿ ಹೋದರೆ ಅಲ್ಲಿ ಮುರುಗನ್ ಮುಖ್ಯ ಗುಡಿಯಿದೆ. ನಿತ್ಯ ಪೂಜೆ ನಡೆಯುತ್ತದೆ.

ಲೇಕ್ ಗಾರ್ಡನ್

92 ಎಕರೆ ಪ್ರದೇಶದಲ್ಲಿರುವ ಈ ಗಾರ್ಡನ್ ಒಂದು ಸುಂದರ ಉದ್ಯಾನ. ಕಾರಂಜಿಗಳು, ಸಣ್ಣ ಕೃತಕ ಜಲಪಾತಗಳು, ಹುಲ್ಲುಹಾಸು, ನೀರಿನಕೊಳಗಳಿರುವ ಸುಂದರ ವಿಶಾಲ ತಾಣ. ಇಲ್ಲಿ ಬರ್ಡ್ ಪಾರ್ಕ್, ಚಿಟ್ಟೆ ಪಾರ್ಕ್ ಕೂಡ ಇದೆ. ಮಲೇಷ್ಯಾದ ರಾಷ್ಟ್ರೀಯ ಸ್ಮಾರಕವು ಇಲ್ಲಿದೆ. ಎರಡನೇ ವಿಶ್ವಯುದ್ಧದಲ್ಲಿ ಹೋರಾಡಿ ಮಡಿದ ಮಲೇಷ್ಯಾದ ವೀರರ ಕಂಚಿನ ಸ್ಮಾರಕ ಮೂರ್ತಿಗಳಿವೆ.

ಮಲೇಷ್ಯಾದ ಪ್ರಸಿದ್ಧ ಅವಳಿ ಗೋಪುರಗಳು ನಮ್ಮ ಮುಂದಿನ ಗುರಿಯಾಗಿತ್ತು. ರಾಷ್ಟ್ರೀಯ ಸ್ಮಾರಕದಿಂದ ಹೊರಟು ಕೌಲಾಲಂಪುರ ಸಿಟಿ ಸೆಂಟರ್ ಪ್ರದೇಶ ತಲುಪಿದಾಗ ಸಂಪೂರ್ಣ ಕತ್ತಲಾಗಿತ್ತು. ಈ ಪ್ರದೇಶ ಕೌಲಾಲಂಪುರದ ಪ್ರಮುಖ ವಾಣಿಜ್ಯ ಪ್ರದೇಶ. 1483 ಅಡಿ ಎತ್ತರದ 88 ಮಹಡಿಗಳುಳ್ಳ ಅವಳಿ ಗೋಪುರಗಳು ಇಲ್ಲಿನ ಪ್ರಮುಖ ಆಕರ್ಷಣೆ. 'ಪೆಟ್ರೋನಾಸ್ ಟವರ್'ಗಳೆಂದು ಕರೆಯಲ್ಪಡುವ ಈ ಎತ್ತರ ಗೋಪುರಗಳು ಕೌಲಾಲಂಪುರದ ಐಕಾನ್ ಗಳು. ಇವುಗಳನ್ನು ಕತ್ತಲಲ್ಲಿ ನೋಡಲು ಬಲು ಚಂದ. ಸಾವಿರಾರು ದೀಪಗಳಿಂದ ಕೂಡಿದ ಆಕಾಶದಿಂದ ಇಳಿಬಿಟ್ಟ ದೀಪದಕಂಬಗಳಂತೆ ಕಾಣುತ್ತವೆ.

ಕೌಲಾಲಂಪುರದಲ್ಲಿ ಪ್ರವಾಸಿಗರು ಭೇಟಿ ಕೊಡಲು ಆರ್ಟ್ ಗ್ಯಾಲರಿಗಳು, ಮ್ಯೂಸಿಯಂಗಳು, ಪಾರಂಪರಿಕ ಮಸೀದಿಗಳು, ಗುಡಿಗಳು, ಬರ್ಡ್ ಪಾರ್ಕ್, ಅಕ್ವೇರಿಯಂ, ಪಾರ್ಲಿಮೆಂಟ್ ಭವನ, ಅರಮನೆ ಮುಂತಾದ ಸ್ಥಳಗಳಿವೆ. 1928ರಲ್ಲಿ ಶುರುವಾದ ಕೌಲಾಲಂಪುರದ ಐತಿಹಾಸಿಕ ಸೆಂಟ್ರಲ್ ಮಾರ್ಕೆಟ್ ಅಲ್ಲಿನ ಪಾರಂಪರಿಕ ಸ್ಥಳಗಳಲ್ಲೊಂದು. ಕುಶಲಕರ್ಮಿ ವಸ್ತುಗಳು, ಕಲಾತ್ಮಕ ಸಾಂಪ್ರದಾಯಿಕ ವಸ್ತುಗಳು ಮುಂತಾದವು ಅಲ್ಲಿ ದೊರೆಯುತ್ತವೆ. ಕೌಲಾಲಂಪುರದಿಂದ ಒಂದು ತಾಸು ಪ್ರಯಾಣದ ದೂರದಲ್ಲಿರುವ 'ಜೆಂಟಿಂಗ್' ಎಂಬ ಪ್ರದೇಶದಲ್ಲಿ ಪ್ರಸಿದ್ಧ ಅಮ್ಯೂಸ್ ಮೆಂಟ್ ಪಾರ್ಕ್ ಇದೆ. ಒಂದಿಡೀ ದಿನವನ್ನು ಅಲ್ಲಿ ಕಳೆಯಬಹುದು. 25 ಕಿ.ಮೀ. ದೂರದಲ್ಲಿರುವ 'ಪುತ್ರಜಯ' ಎನ್ನುವ ಪ್ರದೇಶ ಆ ದೇಶದ ಸುಂದರ ನಿರ್ಮಾಣ ಶೈಲಿಯ ಆಡಳಿತ ಕಟ್ಟಡಗಳಿರುವ ಉಪನಗರ. ಕೌಲಾಲಂಪುರಕ್ಕೆ ಭಾರತದ ಅನೇಕ ನಗರಗಳಿಂದ ಹಾಗೂ ಅಕ್ಕಪಕ್ಕದ ದೇಶಗಳಿಂದ ನೇರ ವಿಮಾನ ಸಂಪರ್ಕವಿದೆ. ನಗರದಲ್ಲಿ ಓಡಾಟಕ್ಕೆ ಮೆಟ್ರೋ ಟ್ರೇನ್, ಸಿಟಿ ಬಸ್, ಟ್ಯಾಕ್ಸಿ ಸೌಕರ್ಯಗಳಿವೆ. ಭಾರತೀಯ ಆಹಾರದ ಲಭ್ಯತೆಗೆ ತೊಂದರೆಯಿಲ್ಲ.

ಹೋಗುವುದು ಹೇಗೆ?

ಬೆಂಗಳೂರಿನಿಂದ ಕೌಲಾಲಂಪುರಕ್ಕೆ ನೇರ ವಿಮಾನಗಳಿವೆ. ಕೌಲಾಲಂಪುರ ಸಿಟಿಯಿಂದ ಬತು ಕೇವ್ಸ್‌ಗೆ ಹೋಗಲು ನೇರ ಸಿಟಿಬಸ್‌ಗಳಿವೆ. ಮೆಟ್ರೊ ಟ್ರೇನ್, ಸಿಟಿ ಟ್ಯಾಕ್ಸಿಗಳ ಸೌಕರ್ಯಗಳಿವೆ.




Viewing all articles
Browse latest Browse all 6795

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ವಚನಗಳಿಂದ ಸಂಗೀತ ಲೋಕ ಶ್ರೀಮಂತ


Final chapter from Krishnamacharya's Yogasanagalu Part II Pranayam. Plus the...


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಆಲೋಚನೆಗೂ ಕ್ರಿಯೆಯಷ್ಟೇ ಮಹತ್ವವಿದೆ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>