Quantcast
Channel: VijayKarnataka
Viewing all articles
Browse latest Browse all 6795

ಪೋಡಿ ಮುಕ್ತ ಅಭಿಯಾನ ಮತ್ತಷ್ಟು ಚುರುಕಿಗೆ ಸರಕಾರ ಕ್ರಮ

$
0
0

ರಾಘವೇಂದ್ರ ಮೇಗರವಳ್ಳಿ

ತೀರ್ಥಹಳ್ಳಿ :
ಪೋಡಿ ಮುಕ್ತ ಅಭಿಯಾನ ಕಾರ‌್ಯಕ್ರಮವನ್ನು ಜನಸ್ನೇಹಿಗೊಳಿಸಲು ಸರಕಾರ ತ್ವರಿತ ಕ್ರಮಕ್ಕೆ ಮುಂದಾಗಿದೆ. ಜಮೀನು ಸರ್ವೆ ನಂತರ ವಿಳಂಬವಿಲ್ಲದೆ 11-ಇ ನಕ್ಷೆ ವಿತರಿಸುವ ಉದ್ದೇಶದಲ್ಲಿ ಹೊಸದಾಗಿ 1000 ಭೂಮಾಪಕರಿಗೆ ಲೈಸೆನ್ಸ್ ನೀಡಲು ಸರಕಾರ ನಿರ್ಧರಿಸಿದೆ.

ಭೂ ಮಾಪಕ ಲೈಸೆನ್ಸ್ ಪಡೆಯುವ ಕುರಿತು ಸರಕಾರ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಿದ್ದು, ಆನ್‌ಲೈನ್‌ನಲ್ಲಿ 2016 ಏಪ್ರಿಲ್ 25 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ನಾಡಕಚೇರಿ ಅರ್ಜಿ ಸ್ವೀಕಾರ ಕೇಂದ್ರವಾಗಿದೆ.

ಮೇ ತಿಂಗಳಲ್ಲಿ ಪರೀಕ್ಷೆ: ಒಬ್ಬ ಅಭ್ಯರ್ಥಿ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶ. ಖುದ್ದಾಗಿ, ಅಂಚೆ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಅಪೂರ್ಣ, ನಿಯಮ ಪಾಲಿಸದ ಅರ್ಜಿ ತಿರಸ್ಕಾರಗೊಳ್ಳಲಿದೆ. ಲೈಸೆನ್ಸ್ ನೀಡುವ ಮುನ್ನ 2016 ಮೇ ತಿಂಗಳಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನ ಕುರಿತು ಇಲಾಖೆ ವೆಬ್‌ಸೈಟ್, ಮಾಧ್ಯಮದಲ್ಲಿ 15 ದಿನ ಮೊದಲು ಪ್ರಕಟಗೊಳ್ಳಲಿದೆ. ಅಟಲ್ ಜನಸ್ನೇಹಿ ಕೇಂದ್ರ(ನಾಡಕಚೇರಿ)ದಲ್ಲಿ ಚುನಾವಣೆ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಒದಗಿಸಿ, ನಿಗದಿತ 300 ರೂ. ಅರ್ಜಿ ಶುಲ್ಕ ನೀಡಿ ಸ್ವೀಕೃತಿ ಪಡೆಯಬಹುದಾಗಿದೆ. ಅರ್ಜಿಸಲ್ಲಿಸಿದ ಬಳಿಕ ಯಾವುದೇ ಬದಲಾವಣೆಗೆ ಅವಕಾಶ ಇರುವುದಿಲ್ಲ. ಪಿಯುಸಿಯ ಸಿಬಿಎಸ್‌ಇ , ಐಸಿಎಸ್‌ಇ ವಿಭಾಗದ ವಿಜ್ಞಾನ, ಗಣಿತ ವಿಷಯದಲ್ಲಿ ಶೇ. 60 ಅಂಕ. ಬಿಇ, ಬಿಟೆಕ್(ಸಿವಿಲ್), ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ. ವೃತ್ತಿ ಶಿಕ್ಷಣ ಇಲಾಖೆಯ ಲ್ಯಾಂಡ್ ಸಿಟಿ ಸರ್ವೆ ಪದವಿಪೂರ್ವ ಡಿಪ್ಲೊಮಾ, ಉದ್ಯೋಗ ಮತ್ತು ತರಬೇತಿ ಇಲಾಖೆಯ ಐಟಿಐ ಇನ್ ಸರ್ವೆ ಟ್ರೇಡ್‌ನಲ್ಲಿ ಉರ್ತ್ತೀಣರಾಗಿರಬೇಕು. ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ, ಸರ್ವೆ ಆಫ್ ಇಂಡಿಯಾ, ಸರಕಾರಿ, ಖಾಸಗಿ ಸಂಸ್ಥೆಯಲ್ಲಿ ಕನಿಷ್ಟ 10 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದವರಿಗೂ ಅವಕಾಶವಿದೆ. 18ರಿಂದ 65ರ ವಯೋಮಾನದವರು ಅರ್ಜಿ ಸಲ್ಲಿಸಬಹುದು.

ಆಯ್ಕೆಯಾದ ಭೂ ಮಾಪಕರಿಗೆ ಆಯಾ ಜಿಲ್ಲೆ ವ್ಯಾಪ್ತಿ ತಾಲೂಕು ಕ್ಷೇತ್ರಕ್ಕೆ ಲೈಸೆನ್ಸ್ ನೀಡಲಾಗುವುದು. ಯಾವುದೇ ಕಾರಣಕ್ಕೂ ಇತರೆ ಭಾಗಕ್ಕೆ ಲೈಸೆನ್ಸ್ ನೀಡಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಮಾಹಿತಿ ಒದಗಿಸಲಾಗಿದೆ. ಪ್ರತಿ ಅಳತೆ ಕಾರ‌್ಯಕ್ಕೆ ಇಲಾಖೆ ನಿಗದಿಪಡಿಸಿದ ಸೇವಾ ಶುಲ್ಕವನ್ನು ಭೂ ಮಾಪಕರಿಗೆ ನೀಡಲಾಗುತ್ತದೆ. ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತರು 2016 ಮಾರ್ಚ್ 24ರಂದು ಅಧಿಸೂಚನೆ ಹೊರಡಿಸಿದ್ದು, ಹೆಚ್ಚಿನ ವಿವರಕ್ಕೆ 080-22221038, 080-22292493 ನಂಬರ್ ಸಂಪರ್ಕಿಸ ಬಹುದಾಗಿದೆ.

----------
ಜಿಲ್ಲೆವಾರು ಸಂಖ್ಯೆ
ಭೂ ಮಾಪಕ ಲೈಸೆನ್ಸ್ ಪಡೆಯುವ ಸಂಖ್ಯೆ ಜಿಲ್ಲೆವಾರು ಹಂಚಿಕೆ ಮಾಡಲಾಗಿದೆ. ಬೆಳಗಾವಿ 143, ಮಂಡ್ಯ 80, ಉಡುಪಿ 68, ವಿಜಯಪುರ 65, ಹಾಸನ 52, ದಕ್ಷಿಣ ಕನ್ನಡ 50, ಕಲಬುರಗಿ 47, ತುಮಕೂರು 42, ರಾಮನಗರ 41, ದಾವಣಗೆರೆ 40, ಕೋಲಾರ 39, ಉತ್ತರ ಕನ್ನಡ 38, ಬಾಗಲಕೋಟೆ 36, ಶಿವಮೊಗ್ಗ 28, ಚಿಕ್ಕಮಗಳೂರು 20, ಚಿತ್ರದುರ್ಗ 26, ರಾಯಚೂರು 27, ಗದಗ 27, ಬೆಂಗಳೂರು ಗ್ರಾಮಾಂತರ 28, ಯಾದಗಿರಿ 28, ಬೀದರ್ 24, ಹಾವೇರಿ 24, ಚಾಮರಾಜನಗರ 18, ಧಾರವಾಡ 09 ಭೂ ಮಾಪಕ ಲೈಸೆನ್ಸ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>