Quantcast
Channel: VijayKarnataka
Viewing all articles
Browse latest Browse all 6795

ಭೂ ಕಬಳಿಕೆ ವಿರೋಧಿ ಕಾನೂನು: ಪ್ರಾಂತ ರೈತ ಸಂಘ ಅಸಮಾಧಾನ

$
0
0

ಶಿವಮೊಗ್ಗ: ಭೂ ಕಬಳಿಕೆ ವಿರೋಧಿ ಕಾನೂನು ಜಾರಿಗೊ ಳಿಸಲು ಹೊರಟಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಪ್ರಾಂತ್ಯ ರೈತ ಸಂಘ ರಾಜ್ಯಾದ್ಯಂತ ಏ.18ರಿಂದ 25ರ ತನಕ ಪ್ರತಿಭಟನೆ ಹಮ್ಮಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾ ಡಿದ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ರಾಜ್ಯ ಸರಕಾರ ಕಾನೂನು ಜಾರಿ ಹೆಸರಿನಲ್ಲಿ ಜೀವನ ನಿರ್ವಹಣೆಗೆ ಭೂಮಿ ಉಳುಮೆ ಮಾಡುತ್ತಿರುವವ ಬಡವರನ್ನು ಒಕ್ಕಲೆಬ್ಬಿಸಲು ಹೊರಟಿದೆ ಎಂದು ಅಸಮಾ ಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಭೂ ಕಬಳಿಕೆ ಕುರಿತು 2005ರಿಂದ ಚರ್ಚೆ ನಡೆಯುತ್ತಿದೆ. ಈ ಕುರಿತು 11 ವರ್ಷದ ಹಿಂದೆ ಯೇ ಎ.ಟಿ. ರಾಮಸ್ವಾಮಿ ಹಾಗೂ ಬಾಲಸುಬ್ರಮಣ್ಯಂ ಅವರು ಪ್ರತ್ಯೇಕವಾಗಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆ ಪ್ರಕಾರ ರಾಜ್ಯದಲ್ಲಿ 29 ಸಾವಿರ ಎಕರೆ ಸರಕಾರಿ ಭೂಮಿ ಕಬಳಿಕೆ ಆಗಿದ್ದು ಇವುಗಳ ಅಂದಿನ ಮೌಲ್ಯ 1 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ವಿಪರ್ಯಾ ಸವೆಂದರೆ ಭೂ ಮಂಜೂರು ಸಮಿತಿಗೆ ಸಲ್ಲಿಕೆಯಾಗಿದ್ದ ಸುಮಾರು 23 ಲಕ್ಷ ಅರ್ಜಿ ಪೈಕಿ 16 ಲಕ್ಷ ಅರ್ಜಿ ವಜಾ ಆಗಿದ್ದು, 7 ಲಕ್ಷ ಅರ್ಜಿ ಇತ್ಯರ್ಥ ವಾಗದೆ ಬಾಕಿ ಇದೆ. ಹೀಗಿರುವಾಗ ಅರ್ಜಿದಾರರು ಕಬಳಿಕೆದಾರರು ಹೇಗಾಗುತ್ತಾರೆ ಎಂದು ಪ್ರಶ್ನಿಸಿದರು.

2007ರಲ್ಲಿ ಭೂ ಕಬಳಿಕೆ ವಿರೋಧಿ ಕಾನೂ ನು ಜಾರಿಗೆ ಬಂದಿದ್ದು ಅದನ್ನೀಗ ಜಾರಿಗೊ ಳಿಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ ಕಾರ ಮುಂದಾಗಿದೆ. ಆದರೆ ಭೂ ಕಬಳಿಕೆದಾ ರರು ಎಂಬ ಪದದ ವಿವರಣೆ ಸರಿಯಾಗಿಲ್ಲ. ಭೂ ಕಬಳಿಕೆದಾರರೇ ಬೇರೆ, ಉಳುಮೆದಾರರೇ ಬೇರೆ. ಸರಕಾರ ಇದನ್ನು ಮೊದಲು ಸರಿಯಾಗಿ ಅರ್ಥೈಸಿಕೊಂಡು ಕಾನೂನು ಜಾರಿ ಮಾಡ ಬೇಕು. ತನ್ನ ವಿವರಣೆಯನ್ನು ಬದಲಾಯಿಸಿ ಕೊಳ್ಳಬೇಕು. ಜತೆಗೆ ಕಾನೂನು ತಿದ್ದುಪಡಿಯೂ ಆಗಬೇಕಿದೆ ಎಂದರು. ಕಾನೂನು ಮತ್ತು ಕಂದಾಯ ಸಚಿವರ ನಡುವೆ ಹೊಂದಾಣಿಕೆ ಇಲ್ಲದೇ ಉಳುಮೆದಾ ರರು ತೊಂದರೆ ಅನು ಭವಿಸುವಂತಾಗಿದೆ. ಮುಖ್ಯಮಂತ್ರಿಯವರು ಸಮಸ್ಯೆಯ ಗಂಭೀರತೆ ಅರಿತು ತಕ್ಷಣ ಇಬ್ಬರೂ ಸಚಿವರಿಗೂ ಸೂಕ್ತ ನಿರ್ದೇಶನ ನೀಡುವ ಮೂಲಕ ಉಳುಮೆದಾರರ ಹಿತ ಕಾಪಾಡ ಬೇಕು. ಈ ಮೂಲಕ ತಾವು ದೇವರಾಜು ಅರಸು ಅವರ ಪ್ರತಿನಿಧಿ ಎಂದು ಹೇಳಿಕೊಳ್ಳುತ್ತಿ ರುವ ಸಿದ್ದರಾಮಯ್ಯ ಉಳುಮೆದಾ ರರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ಸಂಘದ ಪ್ರಮುಖರಾದ ಎಸ್.ಬಿ.ಶಿವ ಶಂಕರ ಮತ್ತು ರಾಮಪ್ಪ ಗೋಷ್ಠಿಯಲ್ಲಿದ್ದರು.

-----------
ಕೇಂದ್ರದಿಂದ ಕೃಷಿಗೆ ಕುತ್ತು

ಕೇಂದ್ರ ಸರಕಾರ ಕೃಷಿ ಕ್ಷೇತ್ರದಲ್ಲಿ ಶೇ.100ರಷ್ಟು ಬಂಡವಾಳ ತೊಡಗಿಸಲು ಮುಂದಾಗಿದೆ. ಈಗಾಗಲೇ ಬೀಜೋತ್ಪಾದನೆ ಮತ್ತು ಗೊಬ್ಬರ ಬಹು ರಾಷ್ಟ್ರೀಯ ಕಂಪನಿಗಳ ಹಿಡಿತಕ್ಕೆ ಸಿಲುಕಿದ್ದು ಭೂಮಿ ಮತ್ತು ಮಾರುಕಟ್ಟೆ ಮಾತ್ರ ನಮ್ಮ ಕೈಯಲ್ಲಿದೆ. ಇದನ್ನೂ ವಿದೇಶಿ ಕಂಪನಿಗಳಿಗೆ ಮುಕ್ತಗೊಳಿಸುವ ಮೂಲಕ ದೇಶದ ಕೃಷಿಯನ್ನು ಸಂಪೂರ್ಣವಾಗಿ ಬಹುರಾಷ್ಟ್ರೀ ಯ ಕಂಪನಿಗಳ ಹಿಡಿತಕ್ಕೆ ಒಪ್ಪಿಸಲು ಕೇಂದ್ರದ ಬಿಜೆಪಿ ಸರಕಾರ ನಿರ್ಧರಿಸಿದೆ ಎಂದು ಆರೋಪಿಸಿದರು.

ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸು ವುದಾಗಿ ಚುನಾವಣೆ ಪೂರ್ವ ಭರವಸೆ ನೀಡಿದ್ದ ಬಿಜೆಪಿ ಈಗ ತನ್ನ ಮಾತು ಮರೆತಿದೆ. ವರದಿ ಪ್ರಕಾರ ಕೃಷಿ ಕಟಾವಿನ ಖರ್ಚು ವೆಚ್ಚದ ಮೇಲೆ ಶೇ.50ರಷ್ಟನ್ನು ಹೆಚ್ಚುವರಿಯಾಗಿ ರೈತರಿಗೆ ನೀಡಬೇಕು. ಆದರೆ ಇದನ್ನು ಜಾರಿಗೊಳಿಸಿದರೆ ದೇಶದ ವ್ಯಾಪಾರ ಕ್ಷೇತ್ರ ಹಾಳಾಗುತ್ತದೆ ಎಂದು ಕೇಂದ್ರ ಸರಕಾರ ಸುಪ್ರಿಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ತನ್ನ ಗೋಸುಂಬೆತನವನ್ನು ಬಯಲು ಮಾಡಿದೆ ಎಂದರು.

ಏಳನೇ ವೇತನ ಆಯೋಗ ಜಾರಿ ಸಂಬಂಧ ನಡೆದಿರುವ ಪ್ರಕ್ರಿಯೆ ಸಂಪೂರ್ಣ ಅವೈಜ್ಞಾನಿಕ ವಾಗಿದ್ದು 2022ರ ವೇಳೆ ವ್ಯಕ್ತಿಯ ತಲಾದಾ ಯಲ್ಲಿ ಹೆಚ್ಚಳವಾಗುತ್ತದೆ ಎಂದು ಹೇಳುತ್ತಿರು ವುದು ಸಂಪೂರ್ಣ ಸುಳ್ಳು. ಅದೇ ರೀತಿ ಕೇಂದ್ರ ಸರಕಾರ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿನ ಅಂಶಗಳು ಅವೈಜ್ಞಾನಿಕವಾಗಿವೆ. ಹಿಂದಿನ 7 ವರ್ಷದ ಸರಾಸರಿ ಇಳುವರಿಯನ್ನು ಲೆಕ್ಕಕ್ಕೆ ತೆಗೆದು ಕೊಂಡು ಬೆಳೆನಷ್ಟ ಪರಿಹಾರ ನೀಡುವ ಕ್ರಮ ಸರಿಯಾದುದಲ್ಲ. ಇದರಿಂದ ರೈತರಿಗೆ ಯಾವುದೇ ಲಾಭವೂ ಆಗುವುದಿಲ್ಲ. ಯೋಜನೆ ಜಾರಿ ಹಿಂದೆ ಖಾಸಗಿ ವಿಮಾ ಕಂಪನಿಗಳನ್ನು ಉದ್ಧಾರ ಮಾಡುವ ಹುನ್ನಾರ ಅಡಗಿದೆ ಎಂದು ದೂರಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>