Quantcast
Channel: VijayKarnataka
Viewing all articles
Browse latest Browse all 6795

ಊಟಿಯಲ್ಲಿ ಪತ್ರಕರ್ತನ ಜೀವನ ಕತೆ

$
0
0

ಪತ್ರಕರ್ತರಾಗಿರುವ ಚಮರಂ ಕೃಷ್ಣ ಮೂರ್ತಿ ಬರೆದ ಕಾದಂಬರಿ 'ಪ್ರೀತಿಯ ಅರಸಿ' ಈಗ ಊಟಿ ಸಿನಿಮಾ ಆಗಿದೆ. ಇದು ನೈಜ ಘಟನೆಯನ್ನಾಧರಿಸಿದ ಕಾದಂಬರಿ ಅನ್ನೋದನ್ನು ಈ ಮೊದಲು ಹೇಳಲಾಗಿತ್ತು. ಈಗ ಚಮರಂ ಕೃಷ್ಣಮೂರ್ತಿಯವರ ಬದುಕಿನ ಕತೆಯೇ 'ಪ್ರೀತಿಯ ಅರಸಿ' ಕಾದಂಬರಿಯಾಗಿದೆ ಎನ್ನುವುದು ಬೆಳಕಿಗೆ ಬಂದಿದೆ.

ಜುಗಾರಿ ಅವಿನಾಶ್‌ ಮತ್ತು ನೈನಾ ನಾಯಕ ನಾಯಕಿಯಾಗಿ ನಟಿಸಿರುವ ಚಿತ್ರ ಊಟಿಯಲ್ಲಿ ಹದಿಹರೆಯದ ಪ್ರೇಮಿಗಳಿಬ್ಬರು ದೂರವಾಗುವ ಕತೆ ಇದೆ. ಮಲಯಾಳ ಹುಡುಗಿ ಮತ್ತು ಕನ್ನಡದ ಹುಡುಗ ಊಟಿಯ ಟೀ ಎಸ್ಟೇಟ್‌ನಲ್ಲಿ ಭೇಟಿಯಾದಾಗ ಇಬ್ಬರ ನಡುವೆ ಪ್ರೀತಿ ಬೆಳೆಯುತ್ತದೆ. ಆದರೆ, ಕಾವೇರಿ ಗಲಭೆಯಲ್ಲಿ ಪ್ರೇಮಿಗಳು ದೂರಾಗುತ್ತಾರೆ. ನಂತರ ಏನಾಗುತ್ತದೆ ಎನ್ನುವುದು ಸಿನಿಮಾ. ಇದು ಚಮರಂ ಕೃಷ್ಣಮೂರ್ತಿಯವರ ಜೀವನದಲ್ಲಿ ನಡೆದ ಪ್ರೇಮ ಕತೆ ಎನ್ನುವುದು ತಿಳಿದುಬಂದಿದೆ.

'ಪ್ರೀತಿಯ ಅರಸಿ ಕಾದಂಬರಿ ನನ್ನ ಜೀವನದಲ್ಲಿ ನಡೆದದ್ದನ್ನು ಆಧರಿಸಿ ಬರೆದಿದ್ದು. ಬಯೋಪಿಕ್‌ ಅಂತಲೇ ಹೇಳಬಹುದು. ಪ್ರೀತಿಸಿದ ಹುಡುಗಿಯಿಂದ ದೂರವಾಗಬೇಕಾಗಿ ಬಂದಾಗ ನಾನು ಪಟ್ಟ ಕಷ್ಟ ಇದರಲ್ಲಿ ಹೇಳಿದ್ದೇನೆ. ಸುಮಾರು 10 ವರ್ಷಗಳ ನಂತರವೂ ಕಾಣೆಯಾದ ನನ್ನ ಹುಡುಗಿಯ ಹುಡುಕಾಟದಲ್ಲಿದ್ದೆ. ಅದೇ ಈಗ ಸಿನಿಮಾ ಆಗಿದೆ' ಎಂದಿದ್ದಾರೆ ಚಮರಂ ಕೃಷ್ಣಮೂರ್ತಿ. ಕೊನೆಗೆ ಆ ಹುಡುಗಿ ಸಿಕ್ಕಳಾ ಇಲ್ಲವಾ, ನಂತರ ಏನಾಯಿತು ಎನ್ನುವುದನ್ನು ಸಿನಿಮಾದಲ್ಲಿ ನೋಡಿ ಎಂದು ಕ್ಲೈಮಾಕ್ಸ್‌ ಗುಟ್ಟಾಗಿಟ್ಟಿದ್ದಾರೆ. ಹಲವು ತಿರುವುಗಳಲಿರುವ ಕತೆ ಕುತೂಹಲವನ್ನು ಹುಟ್ಟಿಸುತ್ತಾ ಸಾಗುತ್ತದೆ ಎಂದಿದ್ದಾರೆ ಅವರು. ಚಮರಂ ಪಾತ್ರದಲ್ಲಿ ನಾಯಕನಾಗಿ ಅವಿನಾಶ್‌ ನಟಿಸಿದ್ದಾರೆ. ಚಮರಂ ಕೂಡಾ ಚಿತ್ರದಲ್ಲಿ ನಾಯಕನ ಗೆಳೆಯನ ಪಾತ್ರದಲ್ಲಿ ನಟಿಸಿದ್ದು, ವಿಶೇಷ ಪ್ರಾಮುಖ್ಯತೆ ಪಡೆದುಕೊಂಡಿದೆ. ನಿರ್ಮಾಪಕರ ಮೋಹನ್‌ ಕುಮಾರ್‌ 'ಊಟಿ' ಚಿತ್ರ ನಿರ್ಮಾಣಕ್ಕೆ ಮುಂದಾಗಲು ಪ್ರೇರಣೆ ಈ ಚಿತ್ರದ ಕತೆ. 'ನವಿರಾದ ಪ್ರೇಮಕತೆಯಲ್ಲಿ ವಿಶಿಷ್ಟತೆ ಇದೆ. ಭಾಷಾ ಸಾಮರಸ್ಯ ಇದೆ. ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಹೇಳಲಾಗಿದೆ' ಎಂದಿದ್ದಾರೆ ನಟ, ನಿರ್ದೇಶಕ ಗುರುಪ್ರಸಾದ್‌.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>