Quantcast
Channel: VijayKarnataka
Viewing all articles
Browse latest Browse all 6795

ವಿಖ್ಯಾತ್, ಅಣ್ಣಾ ಸಾಹೇಬ್ ನೂತನ ಕೂಟ ದಾಖಲೆ

$
0
0

18ನೇ ವಿಟಿಯು ಅಥ್ಲೆಟಿಕ್ಸ್ ಕೂಟ
ಬೆಂಗಳೂರು: ಬೆಳಗಾವಿಯ ಕೆಎಲ್‌ಎಸ್ ಜೋಗ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಣ್ಣಾ ಸಾಬೇಬ್ ಪಾಟೀಲ್ ಮತ್ತು ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ ವಿಖ್ಯಾತ್ ವಿ.ಎಸ್. ಇಲ್ಲಿ ನಡೆಯುತ್ತಿರುವ 18ನೇ ವಿಟಿಯು ಅಥ್ಲೆಟಿಕ್ಸ್ ಕೂಟದಲ್ಲಿ ಕ್ರಮವಾಗಿ ಪುರುಷರ 20ಕಿ.ಮೀ. ನಡಿಗೆ ರೇಸ್ ಮತ್ತು ಡಿಸ್ಕಸ್ ಥ್ರೋ ವಿಭಾಗದಲ್ಲಿ ಕೂಟ ದಾಖಲೆ ನಿರ್ಮಿಸಿದ್ದಾರೆ.

ಕೂಟದ ಎರಡನೇ ದಿನವಾದ ಶುಕ್ರವಾರ ನಡೆದ 20ಕಿ.ಮೀ. ನಡಿಗೆ ರೇಸ್‌ನಲ್ಲಿ ಅಣ್ಣಾ ಸಾಹೇಬ್ 1ಗಂಟೆ, 51ನಿಮಿಷ, 52.02ಸೆಕೆಂಡ್‌ಗಳಲ್ಲಿ ಅಗ್ರಸ್ಥಾನಿಯಾಗಿ ಗುರಿ ತಲುಪಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಈ ಹಿಂದೆ 2014-15ರ ಅವಧಿಯಲ್ಲಿ ಬೆಳಗಾವಿ ವಿಟಿಯುನಲ್ಲಿ ನಡೆದಿದ್ದ ಕೂಟದಲ್ಲಿ ಹಾಸನದ ರಾಜೀವ್ ಐಟಿಯ ಜಿಬಿನ್ ಮ್ಯಾಥ್ಯೂ(1:53:45:67ಸೆಕೆಂಡ್)ಗಳಲ್ಲಿ ಈ ದಾಖಲೆ ಹೊಂದಿದ್ದರು.

ನಿಟ್ಟೆಯ ಎನ್‌ಎಂಎಎಮ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸುಧೀರ್ ಎಸ್ ಕೊಟೈನ್ (2:17:28:81ಸೆಕೆಂಡ್) ಮತ್ತು ಹಳಿಯಾಳದ ಕೆಎಲ್‌ಎಸ್ ವಿಡಿಆರ್‌ಐಟಿಯ ಗಂಗಾಧರ ಮಂತೂರ್

(2:18:59:43ಸೆಕೆಂಡ್) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದೊಂದಿಗೆ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು.

ಪುರುಷರ ಡಿಸ್ಕಸ್ ಎಸೆತದಲ್ಲಿ ವಿಖ್ಯಾತ್ ವಿ.ಎಸ್ 38.32ಮೀಟರ್ ಡಿಸ್ಕಸ್ ಎಸೆಯುವ ಮೂಲಕ 2009-10ರಲ್ಲಿ ಧಾರವಾಡದಲ್ಲಿ ನಡೆದಿದ್ದ ಕೂಟದಲ್ಲಿ ಆಸ್ಟನ್ ಡಬ್ಲ್ಯು ಕೊಯಿಲೊ 36.61ಮೀ. ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹೊಸ ದಾಖಲೆ ನಿರ್ಮಿಸಿದರು.

ಮಂಗಳೂರಿನ ಸೇಂಟ್ ಜೊಸೇಫ್ ಇಂಜಿನಿಯರಿಂಗ್ ಕಾಲೇಜಿನ ಮನೋಜ್ ಕುಮಾರ್ .ಟಿ(37.48ಮೀ.) ಮತ್ತು ಮೂಡಬಿದರಿಯ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ದೇವಿ ಪ್ರಸಾದ್ ಶೆಟ್ಟಿ(31.78ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಐಶ್ವರ್ಯಗೆ ಬಂಗಾರ

ಮಹಿಳೆಯರ 100ಮೀ. ಹರ್ಡಲ್ಸ್ ಸ್ಪ್ರಧೆಯಲ್ಲಿ ಬಾಗಲಕೋಟದ ಎಚ್.ಐಶ್ವರ್ಯ 17.70ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರೆ, ಬೆಂಗಳೂರಿನ ವೈಶಾಲಿ ಸೋಮಯ್ಯ(19.06ಸೆ.) ಮತ್ತು ಶಿವಮೊಗ್ಗದ ಆರ್. ಚೈತ್ರಾ (19.78ಸೆ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದೊಂದಿಗೆ ರಜತ ಮತ್ತು ಕಂಚಿಗೆ ತೃಪ್ತಿಪಟ್ಟರು.

ಮಹಿಳೆಯರ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಬೆಂಗಳೂರಿನವರಾದ ಸಂದೂರ್ ಪ್ರಣೀತಾ ಪ್ರದೀಪ್(5.09ಮೀ.), ಎಲ್.ಛಾಯಾ(5.02ಮೀ.) ಮತ್ತು ಕಾವ್ಯ ಕುರಿಯನ್(4.64ಮೀ.) ಕ್ರಮವಾಗಿ ಅಗ್ರ ಮೂರು ಸ್ಥಾನ ತಮ್ಮದಾಗಿಸಿಕೊಂಡರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>