Quantcast
Channel: VijayKarnataka
Viewing all articles
Browse latest Browse all 6795

ಪಠಾಣ್‌ಕೋಟ್‌: ತನಿಖೆಗೆ ಆಗಮಿಸಿದ ಪಾಕ್ ತಂಡ

$
0
0

ಹೊಸದಿಲ್ಲಿ: ಪಠಾಣ್‌ಕೋಟ್ ದಾಳಿಯ ಪ್ರತ್ಯಕ್ಷ ತನಿಖೆಗೆ ಪಾಕಿಸ್ತಾನದ ತನಿಖಾ ತಂಡ ಕೊನೆಗೂ ಭಾರತಕ್ಕೆ ಆಗಮಿಸಿದೆ. ಅದು ಮಂಗಳವಾರದಿಂದ ತನಿಖೆಯನ್ನು ಅಧಿಕೃತವಾಗಿ ಆರಂಭಿಸಲಿದೆ.

ಪಠಾಣ್‌ಕೋಟ್ ದಾಳಿಯಲ್ಲಿ ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ಜೈಷ್ -ಎ- ಮೊಹಮ್ಮದ್ ಸಂಘಟನೆ ಪಾತ್ರ ಇದೆ ಎಂಬ ಆರೋಪವಿದೆ. ಅದರ ಸತ್ಯಾಸತ್ಯತೆ ಕಂಡುಕೊಳ್ಳುವುದು ಪಾಕ್ ತನಿಖಾ ತಂಡದ ಉದ್ದೇಶವಾಗಿದೆ.

ಭಾನುವಾರ ಹೊಸದಿಲ್ಲಿಗೆ ಬಂದಿಳಿದಿದ ಐಎಸ್‌ಐ ಅಧಿಕಾರಿಯನ್ನು ಒಳಗೊಂಡ ಐವರು ಸದಸ್ಯರ ಜಂಟಿ ತನಿಖಾ ತಂಡವನ್ನು ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ಮತ್ತು ಪಾಕಿಸ್ತಾನ ಹೈ ಕಮಿಷನ್ ಅಧಿಕಾರಿಗಳು ಸ್ವಾಗತಿಸಿದರು.

ತಂಡದಲ್ಲಿ ಯಾರಾರಿದ್ದಾರೆ?:

ಪಂಜಾಬ್ ಉಗ್ರ ನಿಗ್ರಹ ಇಲಾಖೆ (ಸಿಟಿಡಿ)ಯ ಮುಹಮ್ಮದ್ ತಹೀರ್ ರಾಯ್, ಲಾಹೋರ್ ಗುಪ್ತಚರ ದಳದ ಉಪ ಮಹಾನಿರ್ದೇಶಕ ಮೊಹಮ್ಮದ್ ಅಜೀಮ್ ಅರ್ಷದ್, ಐಎಸ್‌ಐ ಅಧಿಕಾರಿ ತನ್ವೀರ್ ಅಹಮ್ಮದ್, ಮಿಲಿಟರಿ ಗುಪ್ತಚರ ದಳದ ಅಧಿಕಾರಿ ಇರ್ಫಾನ್ ಮಿರ್ಜಾ ಮತ್ತು ಗುಂಜ್ರನ್‌ವಾಲಾ ಸಿಟಿಡಿ ತನಿಖಾದಳದ ಅಧಿಕಾರಿ ಶಾಹಿದ್ ತನ್ವೀರ್ ತನಿಖಾ ತಂಡದಲ್ಲಿದ್ದಾರೆ.

ಈ ತಂಡ ಗುರುದಾಸ್‌ಪುರದ ಎಸ್‌ಪಿ ಸಲ್ವಿಂದರ್ ಸಿಂಗ್ ಹಾಗೂ ಕೆಲ ಅಧೀನ ಅಧಿಕಾರಿಗಳ ಜತೆ ರ್ಚಚಿಸಲಿದೆ. ಅಲ್ಲದೆ ದಾಳಿಯಲ್ಲಿ ಗಾಯಗೊಂಡ 17 ಭದ್ರತಾ ಪಡೆ ಸಿಬ್ಬಂದಿ, ಎನ್‌ಎಸ್‌ಜಿ, ಬಿಎಸ್‌ಎಫ್ ಹಾಗೂ ಗಾರ್ಡ್ ಕಮಾಂಡೊಗಳ ಜತೆ ಮಾಹಿತಿ ಪಡೆಯಲಿದೆ.

ಮಾಹಿತಿ ವಿನಿಮಯ:

ಪಾಕ್ ತಂಡಕ್ಕೆ ಸೋಮವಾರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ತನಿಖೆ ಕುರಿತಂತೆ 90 ನಿಮಿಷಗಳ ಕಾಲ ಎಲ್ಲ ತನಿಖೆಯ ವಿವರಣೆ ನೀಡಲಿದೆ. ಬಳಿಕ ಪಾಕಿಸ್ತಾನ ತಂಡ ಕೇಳುವ ಪ್ರಶ್ನೆಗಳಿಗೆ ಎನ್‌ಐಎ ಉತ್ತರ ನೀಡಲಿದೆ ಎಂದು ಮೂಲಗಳು ಹೇಳಿವೆ. ಪರಸ್ಪರ ಸಹಕಾರ ತತ್ವದ ಮೇಲೆ ಪಾಕ್ ತಂಡಕ್ಕೆ ಸಹಕಾರ ನೀಡಲು ಭಾರತ ತನಿಖಾ ತಂಡ ಸಿದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಭೇಟಿ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಲಾಗಿದೆ.

ಎನ್‌ಐಎ ಏನೇನು ಹಂಚಿಕೊಳ್ಳಲಿದೆ?:

ಪಠಾಣ್‌ಕೋಟ್ ವಾಯು ನೆಲೆ ಪ್ರವೇಶಿಸುವ ಮುನ್ನ ಉಗ್ರರು ಮೂವರನ್ನು ಅಪಹರಿಸಿ, ಭಾರತದ ಭೂ ಪ್ರದೇಶ ಪ್ರವೇಶಿಸಿದ್ದರು ಎಂಬುದನ್ನು ಪಾಕ್ ತಂಡಕ್ಕೆ ಮಾಹಿತಿ ನೀಡಲಿದ್ದು, ನಾಲ್ವರು ಉಗ್ರರ ಊರು ಹಾಗೂ ಭಾರತ - ಪಾಕ್ ಗಡಿ ಗ್ರಾಮ ಬಾಮಿಯಾಲ್ ಮೂಲಕ ದೇಶ ಪ್ರವೇಶಿಸಿರುವ ಬಗ್ಗೆ ಸಾಕ್ಷ್ಯ ಒದಗಿಸುವ ಸಾಧ್ಯತೆ ಇದೆ.

ಮುಖ್ಯವಾಗಿ ಆತ್ಮಾಹುತಿ ದಾಳಿಗೂ ಮುನ್ನ ಉಗ್ರರು ಶಕ್ತಿವರ್ಧಕ ಪಾನೀಯ ಕುಡಿದಿರುವ ಬಗೆಗಿನ ಡಿಎನ್‌ಎ ಮಾದರಿಗಳನ್ನು ನೀಡಬಹುದು ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ಈ ಮಧ್ಯೆ ಪಾಕಿಸ್ತಾನ ತನಿಖಾ ತಂಡ ಕೆಲವು ದಾಖಲೆಗಳನ್ನು ಕೇಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಉಗ್ರರು ಬಳಿಸಿದ ಫೋನ್ ನಂಬರ್‌ಗಳು, ಜೈಷ್ - ಎ - ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸಹೋದರ ಮತ್ತು ಉಗ್ರರಿಗೆ ಆಹಾರ ಪೊಟ್ಟಣಗಳನ್ನು ಒದಗಿಸಿದ ಕಂಪನಿಗಳ ಮಾಹಿತಿ ನೀಡುವಂತೆ ಕೇಳುವ ನಿರೀಕ್ಷೆ ಇದೆ. ಇನ್ನು ಕಳೆದ ವರ್ಷ ನಡೆದ ಕಾಥು, ಸಂಬಾ ದಾಳಿ ಹಾಗೂ ಪಠಾಣ್‌ಕೋಟ್ ದಾಳಿಗೂ ಸಾಮ್ಯತೆ ಕಂಡು ಬಂದಿದೆ. ಜಿಪಿಎಸ್ ಮತ್ತು ವೈರ್‌ಲೆಸ್ ಸೆಟ್ಸ್ , ಕಾರುಗಳ ಅಪಹರಣಕ್ಕೆ ಬಳಿಸಿದ ತಂತ್ರ, ಶಕ್ತಿ ವರ್ಧಕ ಪಾನೀಯ( ರೆಡ್‌ಬುಲ್) ಸೇರಿದಂತೆ ದಾಳಿಗೆ ಬಳಿಸಿದ ಇನ್ನಿತರ ಪರಿಕರಗಳಲ್ಲಿ ಸಾಮ್ಯತೆ ಇರುವುದನ್ನು ರಾಷ್ಟ್ರೀಯ ತನಿಖಾ ದಳ ಪತ್ತೆ ಹಚ್ಚಿದ್ದು, ಪಾಕಿಸ್ತಾನ ಟೀಂಗೆ ಈ ಆಧಾರಗಳನ್ನು ಒದಗಿಸಬಹುದು ಎನ್ನಲಾಗಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>