Quantcast
Channel: VijayKarnataka
Viewing all articles
Browse latest Browse all 6795

ಭಗತ್ ಸಿಂಗ್ ಬಲಿದಾನದಿಂದ ಸ್ವಾತಂತ್ರ್ಯ: ಪ್ರಧಾನಿ

$
0
0

ಹೊಸದಿಲ್ಲಿ: ಭಗತ್ ಸಿಂಗ್, ಸುಖ್‌ದೇವ್, ರಾಜ್‌ಗುರು ಅವರ ಶ್ರೇಷ್ಠ ಬಲಿದಾನದಿಂದ ಇಂದಿನ ತಲೆಮಾರು ಸ್ವಾತಂತ್ರ್ಯದ ಸುಖ ಅನುಭವಿಸುವಂತಾಗಿದೆ. ಅವರ ಅದಮ್ಯ ದೇಶಭಕ್ತಿ ಮತ್ತು ಶೌರ್ಯಕ್ಕೆ ವಂದಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಭಗತ್ ಸಿಂಗ್, ಸುಖ್‌ದೇವ್, ರಾಜ್‌ಗುರು ಅವರು ಹುತಾತ್ಮರಾದ ದಿನವಾದ ಬುಧವಾರ ನಮನ ಸಲ್ಲಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ತಲೆಮಾರುಗಳಿಗೆ ಈ ಹುತಾತ್ಮರು ನೀಡಿರುವ ಸ್ಫೂರ್ತಿ ಅದ್ಭುತವಾದುದು ಎಂದರು.

ಸಮಾಜವಾದಿ ಮುಖಂಡ ರಾಮ್ ಮನೋಹರ್ ಲೋಹಿಯಾ ಅವರ ಜನ್ಮದಿನದ ನಿಮಿತ್ತ ಅವರಿಗೆ ನಮನ ಸಲ್ಲಿಸಿದ ಮೋದಿ. ಲೋಹಿಯಾ ಇಡೀ ರಾಷ್ಟ್ರವನ್ನು ಪ್ರಭಾವಿಸಿದ ವಿದ್ವಾಂಸ ಮತ್ತು ನಿಜವಾದ ಚಿಂತಕ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಹಸ್ರಚಂದ್ರ ದರ್ಶನ ಮಾಡುತ್ತಿರುವ ಕಾಂಚಿ ಮಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಅವರನ್ನು ಕೂಡ ಪ್ರಧಾನಿ ಅಭಿನಂದಿಸಿದ್ದಾರೆ. ಸೇವೆ ಮತ್ತು ಆಧ್ಯಾತ್ಮಕ್ಕೆ ಬದುಕು ಮುಡಿಪಾಗಿಟ್ಟ ಶ್ರೀಗಳಿಗೆ ಉತ್ತಮ ಆರೋಗ್ಯ, ದೀರ್ಘ ಆಯುಷ್ಯ ಲಭಿಸಲಿ ಎಂದು ಟ್ವೀಟ್ ಮಾಡಿದ್ದಾರೆ.




Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ